ಯುಕೆ - ಇಂಡಿಯಾ ವೀಕ್ - 2018ಕ್ಕೆ ಲಂಡನ್ ನಲ್ಲಿ ಅದ್ಧೂರಿ ಚಾಲನೆ
ಲಂಡನ್, ಜೂನ್ 18: ಜೂನ್ 18ರಿಂದ 22ರವರೆಗೆ ನಡೆಯಲಿರುವ ಯುಕೆ - ಇಂಡಿಯಾ ವೀಕ್ 2018ಕ್ಕೆ ಲಂಡನ್ನ ತಾಜ್ ಬಕಿಂಗ್ಹ್ಯಾಂ ಗೇಟ್ ಹೋಟೆಲ್ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಶೃಂಗ ಸಮ್ಮೇಳನದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಹಲವಾರು ಚರ್ಚಾಗೋಷ್ಠಿಗಳು ನಡೆಯಲಿವೆ. ಜೊತೆಗೆ ಯುಕೆ, ಇಂಡಿಯಾಗಳ ಸಂಬಂಧದ ಸಂಭ್ರಮಾಚರಣೆಗಳನ್ನು ಆಯೋಜಿಸಲಾಗಿದ್ದು, ಎರಡೂ ದೇಶಗಳ ಗಣ್ಯಾತಿಗಣ್ಯರು ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಬ್ರಿಟನ್ ಸಂಸದ ಹಾಗೂ ಇಂಟರ್ನ್ಯಾಷನಲ್ ಟ್ರೇಡ್ ಸೆಕ್ರೆಟರಿ ಲಿಯಾಮ್ ಫಾಕ್ಸ್, ಸಂಸದ ಎಮಿಲಿ ಥಾರ್ನಬೆರ್ರಿ, ಸಂಸದ ಹಾಗೂ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಡಿಜಿಟಲ್, ಕಲ್ಚರ್, ಮೀಡಿಯಾ ಆಂಡ್ ಸ್ಪೋರ್ಟ್ನ ಮ್ಯಾಟ್ ಹ್ಯಾನಕಾಕ್, ಬ್ರಿಟನ್ ನಲ್ಲಿರುವ ಭಾರತದ ಹೈ ಕಮೀಶನರ್ ಯಶವರ್ಧನ್ ಸಿನ್ಹಾ, ಭಾರತದ ಸಚಿವ ಮನೋಜ್ ಸಿನ್ಹಾ, ಇಂಡಿಯಾ ಇನ್ ಕಾರ್ಪ್ ಸಿಇಒ ಮನೋಜ್ ಲಡ್ವಾ ಜಂಟಿಯಾಗಿ ಸಮಾರಂಭವನ್ನು ಉದ್ಘಾಟಿಸಿದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಲಿಯಾಮ್ ಫಾಕ್ಸ್, "ಎರಡೂ ದೇಶಗಳು ಪರಸ್ಪರರ ಅಭಿವೃದ್ಧಿಗೆ, ಉದ್ಯೋಗಗಳ ಉತ್ಪಾದನೆಗೆ, ಕೌಶಲ್ಯ ವೃದ್ಧಿ ಹಾಗೂ ಎರಡೂ ಆರ್ಥಿಕತೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಆಸಕ್ತಿಯನ್ನು ಹೊಂದಿವೆ," ಎಂದು ಅಭಿಪ್ರಾಯಪಟ್ಟರು.
ಇನ್ನು, "ಯುಕೆ ಇಂಡಿಯಾ ವೀಕ್-2018 ನಮ್ಮೊಳಗಿನ ಹಂಚಿಕೊಂಡ ಅವಕಾಶಗಳನ್ನು ನಿರ್ಮಿಸಲು ಒಂದು ಅದ್ಭುತ ಕಾರ್ಯಕ್ರಮವಾಗಿದೆ," ಎಂದು ಮ್ಯಾಟ್ ಹ್ಯಾನಕಾಕ್ ಬಣ್ಣಿಸಿದರು.
ಇದಕ್ಕೂ ಮೊದಲು ಪ್ರಾಸ್ತವಿಕ ಮಾತನ್ನಾಡಿದ ಕಾರ್ಯಕ್ರಮದ ಸಂಸ್ಥಾಪಕ ಮತ್ತು ಇಂಡಿಯಾ ಇನ್ ಕಾರ್ಪ್ ಸಿಇಒ ಮನೋಜ್ ಲಡ್ವಾ, "ಎರಡು ರಾಷ್ಟ್ರಗಳ ನಡುವಿನ ಭವಿಷ್ಯವು ಜನರ ಬಳಿಯಲ್ಲಿದೆ," ಎಂದು ಹೇಳಿದರು.

ಇದೇ ವೇದಿಕೆಯಲ್ಲಿ ಭಾರತದ ಅರ್ಥ ಶಾಸ್ತ್ರಜ್ಞ ಹಾಗೂ ಭಾರತದ ನೀತಿ ಆಯೋಗದ ಅಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ತಮ್ಮ ವಿಚಾರ ಮಂಡಿಸಲಿದ್ದಾರೆ.
ಭಾರತೀಯ ಜನತಾ ಪಕ್ಷದ ವಿದೇಶಾಂಗ ನೀತಿ ವೇದಿಕೆ ಮುಖ್ಯಸ್ಥ ವಿಜಯ ಚೌಥಾಯಿವಾಲೆ, ಲೋಕಸಭಾ ಸದಸ್ಯ ಡಾ. ಸ್ವಪನ್ ದಾಸಗುಪ್ತಾ ಇದರಲ್ಲಿ ಪಾಲ್ಗೊಂಡಿದ್ದಾರೆ. ಭಾರತದ ಹಣಕಾಸು, ರೈಲ್ವೆ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪಿಯೂಶ್ ಗೋಯೆಲ್ ವಿಡಿಯೋ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ಒಟ್ಟಾರೆ ಪ್ರತಿಷ್ಠಿತ ಕಾರ್ಯಕ್ರಮವಾಗಿರುವ ಯುಕೆ-ಇಂಡಿಯಾ ಲೀಡರ್ಶಿಪ್ ಕಾನ್ಕ್ಲೇವ್ನಲ್ಲಿ ಭಾರತದ ಹಲವಾರು ರಾಜಕೀಯ ಹಾಗೂ ಉದ್ಯಮ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಬ್ರೆಕ್ಸಿಟ್ ನಂತರದ ಬ್ರಿಟನ್ನಲ್ಲಿ ಭಾರತಕ್ಕಿರುವ ಹೂಡಿಕೆಗಳ ಅವಕಾಶಗಳ ಕುರಿತು ಈ ಶೃಂಗ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications