ಜಿಹಾದಿಗಳಿಂದ ಕೊಲೆ ಬೆದರಿಕೆ, ಟ್ವಿಟ್ಟರ್ ಹೈ ಅಲರ್ಟ್
ಸ್ಯಾನ್ ಫ್ರಾನ್ಸಿಸ್ಕೋ, ಸೆ.11: ಇರಾಕಿನ ಐಎಸ್ ಐಎಸ್ ಬೆಂಬಲಿತ ಜಿಹಾದಿಗಳು ತನ್ನ ಉದ್ಯೋಗಿಗಳ ಹತ್ಯೆಗೈಯ್ಯುವ ಬೆದರಿಕೆ ಹಾಕಿರುವುದನ್ನು ಟ್ವಿಟ್ಟರ್ ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ. ಸಂಸ್ಥೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನ ಉದ್ಯೋಗಿಗಳಿಗೆ ಅರೇಬಿಕ್ ಭಾಷೆಯ ಸಂದೇಶದ ಮೂಲಕ ಬೆದರಿಕೆ ಒಡ್ಡಲಾಗಿತ್ತು.
ಉಗ್ರರ ಸಂದೇಶವನ್ನು Vocativ ವೆಬ್ ತಾಣ ಇಂಗ್ಲೀಷ್ ಗೆ ತರ್ಜುಮೆ ಮಾಡಿತ್ತು. ಇದರ ಆಧಾರದ ಮೇಲೆ ನಮ್ಮ ತನಿಖಾ ತಂಡ ಈಗ ಉಗ್ರರ ಸಂದೇಶಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ತಜ್ಞರ ಅಭಿಪ್ರಾಯ ಕೇಳುತ್ತಿದ್ದಾರೆ ಎಂದು ಟ್ವಿಟ್ಟರ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ಉತ್ತರ ಇರಾಕ್ ಹಾಗೂ ಸಿರಿಯಾದಲ್ಲಿ ಭಯೋತ್ಪಾದನೆಯಲ್ಲಿ ತೊಡಗಿರುವ ಉಗ್ರರು ಸಾಮಾಜಿಕ ಜಾಲ ತಾಣಗಳು ಅದರಲ್ಲೂ ಟ್ವಿಟ್ಟರ್ ಬಳಸಿ ತಮ್ಮ ಸಂದೇಶಗಳನ್ನು ಎಲ್ಲೆಡೆ ಹರಡುತ್ತಿದ್ದರು. ಉಗ್ರ ಸಂಘಟನೆಗಳ ಟ್ವಿಟ್ಟರ್ ಐಡಿ ಗುರುತಿಸಿ ಅಂಥವನ್ನು ಡಿಲೀಟ್ ಮಾಡತೊಡಗಿದ ಬೇ ಏರಿಯಾ ಉದ್ಯೋಗಿಗಳ ಮೇಲೆ ಉಗ್ರರು ಈಗ ಕೆಂಗಣ್ಣು ಬೀರಿದ್ದಾರೆ. [ಉಗ್ರರ ಸದೆಬಡೆಯಲು ಒಬಾಮಾ ರಣತಂತ್ರ]

ಜೆರುಸಲೇಂ ಮೂಲದ ಅಲ್ ನುಸ್ರಾ ಅಲ್ ಮಕ್ದಿಸಿಯಾ ಸಂಘಟನೆಯ ಖಾತೆ ಎನ್ನಲಾದ @dawlamoon ನಿಂದ ಈ ಬೆದರಿಕೆ ಸಂದೇಶಗಳು ಬಂದಿವೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಇರಾಕಿನ ಉಗ್ರರ ಬಗ್ಗೆ ಇತ್ತೀಚೆಗೆ ಮಾತನಾಡುತ್ತಾ ISIS ಉಗ್ರರಿಗೆ ಸಾಮಾಜಿಕ ಜಾಲ ತಾಣಗಳ ದುರ್ಬಳಕೆ ಮಾಡಿಕೊಳ್ಳುವುದು ಕರಗತವಾಗಿದೆ ಇದರಿಂದ ಅಮಾಯಕ ಮುಸ್ಲಿಂ ಯುವಕರು ಜಿಹಾದಿಗಳಾಗಿ ಪರಿವರ್ತನೆಗೊಳ್ಳುತ್ತಿರುವುದು ದುರಂತ ಎಂದಿದ್ದರು.
ಇದಾದ ಮೇಲೆ ಟ್ವಿಟ್ಟರ್ ತನ್ನ ಒಡಲಿನಲ್ಲಿದ್ದ ಉಗ್ರ ಸಂಘಟನೆಗಳ ಖಾತೆಗಳನ್ನು ಅಳಿಸಲು ಮುಂದಾಯಿತು. ಐಸಿಸ್ನ ಖಾತೆಯನ್ನು ನಿಷ್ಕ್ರಿಯಗೊಳಿಸಿದ ಹಿನ್ನೆಲೆಯಲ್ಲಿ ಐಸಿಸ್ನೊಂದಿಗೆ ನಂಟನ್ನು ಹೊಂದಿರುವ ಗುಂಪೊಂದು ರವಿವಾರ ರಾತ್ರಿ ನಿರಂತರವಾಗಿ ಬೆದರಿಕೆಯ ಟ್ವೀಟ್ಗಳನ್ನು ಅಪ್ಲೋಡ್ ಮಾಡಿದ ಹಿನ್ನೆಲೆಯಲ್ಲಿ ಸೋಮವಾರದಂದು ಈ ಖಾತೆಯನ್ನೂ ಸ್ಥಗಿತಗೊಳಿಸಲಾಯಿತು. [ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!]
ಟ್ವಿಟರ್ನ ಉದ್ಯೋಗಿಗಳ ಮೇಲೆ ನೇರ ದಾಳಿ ನಡೆಸಲು ಇದೀಗ ಕಾಲ ಕೂಡಿ ಬಂದಿದೆ. ನೌಕರರ ಮೇಲೆ ದೈಹಿಕವಾಗಿ ಹಿಂಸಿಸಿ ಅವರನ್ನು ಹತ್ಯೆಗೈಯ್ಯಲಾಗುವುದು. ಒಂದು ವೇಳೆ ಟ್ವಿಟರ್ನ ಆಡಳಿತ ಮಂಡಳಿ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಿದ್ದೇ ಆದಲ್ಲಿ ನೇರವಾಗಿ ಸಂಸ್ಥೆಯ ಉದ್ಯೋಗಿಗಳ ಮೇಲೆಯೇ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಸಂದೇಶದಲ್ಲಿ ಸ್ಪಷ್ಟ ಎಚ್ಚರಿಕೆಯನ್ನು ನೀಡಲಾಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications