ಚಿತ್ರಸುದ್ದಿ : ಜಗತ್ತಿನ ಜನಪ್ರಿಯ ಭೀಕರ ಗನ್ ಜನಕ ಇನ್ನಿಲ್ಲ
ಬೆಂಗಳೂರು, ಡಿ.24: ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಮಾರಾಟವಾದ ಅತ್ಯಂತ ಭೀಕರ ಗನ್ 'ಎ.ಕೆ.47'ನ ಸಂಶೋಧಕ, ವಿನ್ಯಾಸಗಾರ ರಷ್ಯಾದ ಮಿಖಾಯಿಲ್ ಕಲಾಶ್ನಿಕೋವ್ (94) ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಕಲಾಶ್ನಿಕೋವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಲಾಗಿದೆ.
ಕೃಷಿ ಸಂಬಂಧಿ ಉಪಕರಣಗಳನ್ನು ತಯಾರಿಸುವದಲ್ಲಿ ಆಸಕ್ತಿ ಹೊಂದಿದ್ದ ಕಲಾಶ್ನಿಕೋವ್, ಆಕಸ್ಮಿಕವಾಗಿ ಈ ಭೀಕರ ಆಯುಧ ಕಂಡು ಹಿಡಿದಿದ್ದಂತೆ. 1946ರಲ್ಲಿ ಮೊದಲ ಬಾರಿಗೆ ಈ ಗನ್ ಗಳ ಅವಿಷ್ಕಾರವಾಗಿದ್ದು, ನಂತರದ ದಶಕಗಳಲ್ಲಿ ಇವು ಜಗತ್ತಿನಾದ್ಯಂತ ಜನಪ್ರಿಯಗೊಂಡಿತು. ಇದುವರೆಗೆ ಅಧಿಕೃತವಾಗಿಯೇ 10 ಕೋಟಿಗೂ ಹೆಚ್ಚು ಎ.ಕೆ.47 ಸರಣಿಯ ಗನ್ ಗಳು ಮಾರಾಟವಾಗಿವೆ
ಉಳಿದಂತೆ ಇಂದಿನ ಚಿತ್ರಗಳಲ್ಲಿ ಇತ್ತೀಚೆಗೆ ನಿಧನರಾದ ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವೈಕುಂಠ ಸಮಾರಾಧನೆ ಚಿತ್ರ, ಚೀನಾದವರ ಸಾಹಸ ಭಂಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮ ವಾತಾವರಣ, ಅಗ್ನಿ ಕ್ಷಿಪಣಿ ಯಶಸ್ವಿ, ಸಿನಿ ಕಲಾವಿದರಿಗೂ ವಿಮೆ ಸೌಲಭ್ಯ ಮುಂತಾದ ಚಿತ್ರಗಳಿವೆ...

ಎಕೆ 47 ಜನಕ ಇನ್ನಿಲ್ಲ
ಜರ್ಮನಿಯ ಈ ಹಿಂದೆ ನಡೆದಿದ್ದ Kalashnikov - legend and curse of a weapon ಪ್ರದರ್ಶನ ಸಂದರ್ಭದಲ್ಲಿ ಕಲಾಶ್ನಿಕೋವ್ ಕಂಡು ಬಂದಿದ್ದು ಹೀಗೆ

ಮೈಸೂರಿನಲ್ಲಿ
ಸೋಮವಾರ(ಡಿ.23) ಮಹಾರಾಜ ಶ್ರೀಕಂಠದತ್ತ ಒಡೆಯರ್ ಅವರ ವೈಕುಂಠ ಸಮಾರಾಧನೆ ಸಾಂಗವಾಗಿ ನೆರವೇರಿತು. ವಿವಿಧ ದೇಗುಲಗಳಿಂದ ಬಂದಿದ್ದ ಪ್ರಸಾದವನ್ನು ಮಹಾರಾಜರ ಕುಟುಂಬಕ್ಕೆ ಹಂಚಲಾಯಿತು. ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ಕೋಲ್ಕತ್ತಾದಲ್ಲಿ
ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಅಂಗವಾಗಿ ಚೀನಿ ಕಲಾವಿದರು ನೀಡುತ್ತಿರುವ ಪ್ರದರ್ಶನ PTI Photo by Swapan Mahapatra

ಇದು ರಾಷ್ಟ್ರೀಯ ಹೆದ್ದಾರಿ
ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಖ್ವಾಜಿಗುಂಡ್ ಬಳಿ ಜಮ್ಮು ಕಡೆಗೆ ಹೊರಟ ಟ್ರಕ್ ಗಳು ಕಂಡು ಬಂದಿದ್ದು ಹೀಗೆ

ಅಗ್ನಿ 3 ಪರೀಕ್ಷೆ
ವೀಲರ್ ದ್ವೀಪ: ಒಡಿಶಾ ಕರಾವಳಿಯಲ್ಲಿ ಅಗ್ನಿ 3 ಕ್ಷಿಪಣಿ ಯಶಸ್ವಿಯಾಗಿ ಉಡಾವಣೆಗೊಂಡು ಪರೀಕ್ಷೆಯಲ್ಲಿ ಪಾಸ್ ಆಗಿದೆ.

ಸಿನಿ ಕಲಾವಿದರಿಗೆ ವಿಮೆ
ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ಬಾಲಿವುಡ್ ನಟ ಅಮಿತಾ ಬಚ್ಚನ್, ನಟ ಸಚಿನ್ ಅವರು ಸಿನಿ ಕಲಾವಿದರಿಗೆ ವಿಮೆ ಸೌಲಭ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾರಾಷ್ಟ್ರ ನವನಿರ್ಮಾನ ಚಿತ್ರಪತ್ ಸೇನಾ ಈ ಸೌಲಭ್ಯವನ್ನು ಆರಂಭಿಸಿದೆ. PTI Photo by Mitesh Bhuvad
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ












Click it and Unblock the Notifications