ಎಲ್ಲಿದೆ ಪುರಾವೆ?: ವಾಟ್ಸಾಪ್ ಸಂಖ್ಯೆಗಳ ದತ್ತಾಂಶ ಸೋರಿಕೆ ನಿರಾಕರಿಸಿದ ಕಂಪನಿ
ನವದೆಹಲಿ, ನವೆಂಬರ್ 28: ಭಾರತದಲ್ಲಿ 50 ಕೋಟಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಸೈಬರ್ನ್ಯೂಸ್ ವರದಿ ಮಾಡಿದ ಕೆಲವೇ ದಿನಗಳಲ್ಲಿ ಇದನ್ನು ಕಂಪನಿಯು ನಿರಾಕರಿಸಿದೆ.
ಮೆಟಾ-ಮಾಲೀಕತ್ವದ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಸೋಮವಾರ ಈ ವರದಿಯನ್ನು ನಿರಾಕರಿಸಿದೆ. "ಸ್ಕ್ರೀನ್ಶಾಟ್ಗಳನ್ನು ಆಧರಿಸಿ ಸೈಬರ್ನ್ಯೂಸ್ನಲ್ಲಿ ಬರೆಯಲಾದ ಸುದ್ದಿಯು ಆಧಾರರಹಿತವಾಗಿದೆ. ವಾಟ್ಸಾಪ್ನಿಂದ ಡೇಟಾ ಸೋರಿಕೆಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ," ಎಂದು ಕಂಪನಿ ಹೇಳಿದೆ.
48.7 ಕೋಟಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳ 2022 ಡೇಟಾಬೇಸ್ ಅನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಘೋಷಿಸುವುದಕ್ಕೆ ಸಂಬಂದಿಸಿದಂತೆ ಬೆದರಿಸುವ ಹ್ಯಾಕಿಂಗ್ ಸಮುದಾಯದ ಜಾಹೀರಾತನ್ನು ನಟರೊಬ್ಬರು ಪೋಸ್ಟ್ ಮಾಡಿದ್ದರು.

ಸೈಬರ್ನ್ಯೂಸ್ ವರದಿಯಲ್ಲಿ ಏನಿದೆ?:
* ಈ ಕಂಪನಿಯ ಡೇಟಾಬೇಸ್ 84 ವಿವಿಧ ದೇಶಗಳ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಒಳಗೊಂಡಿದೆ.
* ಈ ರಾಷ್ಟ್ರಗಳ ಪಟ್ಟಿಯಲ್ಲಿ ಇಟಲಿ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ಸೇರಿವೆ.
* ಡೇಟಾ ಸೆಟ್ 32 ಮಿಲಿಯನ್ ಯುಎಸ್ ಬಳಕೆದಾರರ ದಾಖಲೆಗಳು, ಇಟಲಿಯಿಂದ 35 ಮಿಲಿಯನ್ ದಾಖಲೆಗಳು, 11 ಮಿಲಿಯನ್ ಬ್ರಿಟಿಷ್ ಬಳಕೆದಾರರ ದಾಖಲೆಗಳು ಇವೆ
* ರಷ್ಯಾದ ಸುಮಾರು 10 ಮಿಲಿಯನ್ ಬಳಕೆದಾರರ ದಾಖಲೆಗಳನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.
* ವಾಟ್ಸಾಪ್ನಲ್ಲಿ ಡೇಟಾ ಹ್ಯಾಕ್ ಅಥವಾ ಸೋರಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ ಎಂದು ಸೈಬರ್ನ್ಯೂಸ್ ಸುದ್ದಿಗೆ ಸ್ಪಷ್ಟೀಕರಣವನ್ನು ನೀಡಿದೆ. ಈ ಪ್ರಕಟಣೆಯ ಮುಖ್ಯ ಸಂಪಾದಕರಾದ ಜುರ್ಗಿಟಾ ಲ್ಯಾಪಿಯೆನಿಟ್ ಅವರು ಟ್ವೀಟ್ ಮಾಡಿದ್ದಾರೆ, "ವಾಟ್ಸಾಪ್ ಅನ್ನು ಹ್ಯಾಕ್ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೋರಿಕೆಯು ಸ್ಕ್ರ್ಯಾಪ್ ಆಗಿರಬಹುದು, ಆದರೆ ಪೀಡಿತ ಬಳಕೆದಾರರಿಗೆ ಇದು ಕಡಿಮೆ ಅಪಾಯಕಾರಿ ಎಂದು ಅರ್ಥವಲ್ಲ," ಎಂದು ಉಲ್ಲೇಖಿಸಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications