ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತಪಟ್ಟ ಸಮನ್ ಗುನನ್ ಈಗ ನ್ಯಾಷನಲ್ ಹೀರೋ
ಥಾಯ್ಲೆಂಡ್ ಗುಹೆಯಲ್ಲಿ ಬಾಲಕರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಲ್ಲಿನ ನೌಕಾದಳದ ಮಾಜಿ ಡೈವರ್ ಮೃತಪಟ್ಟಿದ್ದಾರೆ. ಥಾಯ್ಲೆಂಡ್ ನ ಉತ್ತರಕ್ಕಿರುವ ಥಾಮ್ ಲೌಂಗ್ ಗುಹೆಯಲ್ಲಿ ಬಾಲಕರು ಸಿಕ್ಕಿಕೊಂಡಿದ್ದು, ಅದರ ಸುತ್ತ ಆಮ್ಲಜನಕದ ಟ್ಯಾಂಕ್ ಗಳನ್ನು ಇಡುವ ವೇಳೆ ಮೃತಪಟ್ಟಿದ್ದಾರೆ.
ಸಮನ್ ಗುನನ್ ಮೃತರು. ಗುಹೆಯಲ್ಲಿ ಅಗತ್ಯ ಪ್ರಮಾಣ ಆಮ್ಲಜನಕ ಇಲ್ಲದ ಕಾರಣ ಅವರು ಮೃತಪಟ್ಟಿದ್ದಾರೆ. ಥಾಮ್ ಲೌಂಗ್ ಗುಹೆಯಲ್ಲಿ ಬಾಲಕರ ಫುಟ್ ಬಾಲ್ ತಂಡವು ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಮನ್ ಗುನನ್ ಗುಹೆಯಿಂದ ಹೊರಗೆ ಬರುವಾಗ ಪ್ರಜ್ಞೆ ಕಳೆದುಕೊಂಡಿದ್ದಾರೆ.
ಅಂದಹಾಗೆ ಮೂವತ್ತೆಂಟು ವರ್ಷದ ಗುನನ್ ನೌಕಾಪಡೆಯನ್ನು ತೊರೆದಿದ್ದರು. ಆದರೆ ಈ ಕಾರ್ಯಾಚರಣೆ ಸಲುವಾಗಿಯೇ ಬಂದಿದ್ದರು. ಗುಹೆಯೊಳಗೆ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಟ್ಯಾಂಕ್ ಗಳನ್ನು ಗುಹೆಯೊಳಗೆ ಇಟ್ಟು ವಾಪಸಾಗುವಾಗ ಪ್ರಜ್ಞೆ ಹೋಗಿತ್ತು. "ಅವರು ಆಮ್ಲಜನಕದ ಟ್ಯಾಂಕ್ ಇಟ್ಟು ವಾಪಸಾಗುವ ಹಾದಿಯಲ್ಲಿ ಅಗತ್ಯ ಪ್ರಮಾಣದ ಆಕ್ಸಿಜನ್ ಇರಲಿಲ್ಲ" ಎಂದು ಅಲ್ಲಿನ ಡೆಪ್ಯೂಟಿ ಗವರ್ನರ್ ಚಿಯಾಂಗ್ ರೇ ಹೇಳಿದ್ದಾರೆ.

ಗುನನ್ ಅವರನ್ನು ಥಾಯ್ಲೆಂಡ್ ನ್ಯಾಷನಲ್ ಹೀರೋ ಎಂದು ಬಣ್ಣಿಸಲಾಗಿದೆ. ಗುಹೆಯೊಳಗೆ ಸಿಲುಕಿರುವ ಬಾಲಕರು ಕೆಲ ಕಾಲ ಸುರಕ್ಷಿತವಾಗಿ ಇರಬಲ್ಲರು ಎಂಬುದು ಲೆಕ್ಕಾಚಾರವಾಗಿತ್ತು. ಆದರೆ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಆಯಿತು ಎಂದು ನೌಕಾಪಡೆಯ ಕಮ್ಯಾಂಡರ್ ಹೇಳಿದ್ದಾರೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ












Click it and Unblock the Notifications