ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: 71 ಯೋಧರ ಹತ್ಯೆ
ನಿಯಮೆ, ಡಿಸೆಂಬರ್ 12: ಮಾಲಿ ದೇಶದ ಗಡಿಭಾಗದಲ್ಲಿರುವ ನೈಜೀರಿಯಾದ ಸೇನಾ ಶಿಬಿರದ ಮೇಲೆ ನೂರಾರು ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿ 71 ಸೈನಿಕರನ್ನು ಹತ್ಯೆ ಮಾಡಿದ್ದಾರೆ.
ನೈಜರ್ ಸೇನಾ ಶಿಬಿರದ ಮೇಲೆ ಶೆಲ್, ಮೋರ್ಟಾರ್ ಮತ್ತು ಅತ್ಯಾಧುನಿಕ ರೈಫಲ್ಗಳಿಂದ ದಾಳಿ ನಡೆಸಿ ಯೋಧರನ್ನು ಕೊಲ್ಲಲಾಗಿದೆ ಎಂದು ನೈಜೀರಿಯಾದ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
2015ರಿಂದಲೂ ನೈಜೀರಿಯಾದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಎದುರಿಸುತ್ತಿರುವ ನೈಜೀರಿಯಾದ ಪಶ್ಚಿಮ ತಿಲ್ಲಬೆರಿ ಶಿಬಿರದ ಮೇಲೆ ಮಂಗಳವಾರ ಅತ್ಯಂತ ಭೀಕರ ದಾಳಿ ನಡೆದಿದೆ. ಈ ದಾಳಿಗೆ ಯಾವುದೇ ಉಗ್ರ ಸಂಘಟನೆ ಇದುವರೆಗೂ ಹೊಣೆ ಹೊತ್ತುಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರ ಆಕ್ರಮಣಗಳಿಗೆ ತುತ್ತಾಗುತ್ತಿರುವ ನೈಜೀರಿಯಾ ಉಗ್ರ ವಿರುದ್ಧದ ಹೋರಾಟಕ್ಕೆ ಆದ್ಯತೆ ನೀಡಿತ್ತು. ಆದರೆ ಸೇನಾ ಶಿಬಿರದ ಮೇಲಿನ ಉಗ್ರರ ದಾಳಿ, ಈ ಹೋರಾಟಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ.

71 ಸಾವು, 12 ಮಂದಿಗೆ ಗಾಯ
'ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಪ್ರಕಟಿಸಲು ವಿಷಾದಿಸುತ್ತೇವೆ. ಭಯೋತ್ಪಾದಕರ ದಾಳಿಯಲ್ಲಿ 71 ಸೇನಾ ಸಿಬ್ಬಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇತರರು ನಾಪತ್ತೆಯಾಗಿದ್ದಾರೆ' ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಶಿಬಿರದಲ್ಲಿ ಎಷ್ಟು ಸೈನಿಕರಿದ್ದರು ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.

ಮೂರು ಗಂಟೆಗಳ ಕಾಲ ದಾಳಿ
'ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ನೂರಕ್ಕೂ ಅಧಿಕ ಭಯೋತ್ಪಾದಕರು ಏಕಾಏಕಿ ದಾಳಿ ನಡೆಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ದಾಳಿ ನಡೆಸಲಾಗಿದೆ. ಶಸ್ತ್ರಸಜ್ಜಿತ ವಾಹನಗಳು, ಫಿರಂಗಿಗಳನ್ನು ದಾಳಿಗೆ ಬಳಸಲಾಗಿದೆ. ಸೇನಾ ಶಿಬಿರದ ಶಸ್ತ್ರಾಸ್ತ್ರ ಸಂಗ್ರಹಗಾರ ಮತ್ತು ಇಂಧನ ಸಂಗ್ರಹಗಾರಗಳನ್ನು ಗುರಿಯನ್ನಾಗಿರಿಸಿಕೊಂಡು ಆರಂಭದಲ್ಲಿ ಬಾಂಬ್ ಮತ್ತು ಮೋರ್ಟಾರ್ ದಾಳಿ ನಡೆಸಿದರು. ಮದ್ದುಗುಂಡುಗಳು ಹಾಗೂ ಇಂಧನದ ಸ್ಫೋಟಗಳಿಂದಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು ಹೇಳಿದೆ.

ತುರ್ತು ಪರಿಸ್ಥಿತಿ ವಿಸ್ತರಣೆ
ನೈಜೀರಿಯಾವು ತನ್ನ ಈಶಾನ್ಯ ಭಾಗದಲ್ಲಿ ಬೊಕೊ ಹರಾಮ್ ಮತ್ತು ಪಶ್ಚಿಮ ಭಾಗದಲ್ಲಿ ಐಸಿಸ್ ಉಗ್ರರ ಹಾವಳಿಯನ್ನು ಎದುರಿಸುತ್ತಿದೆ. ಭಯೋತ್ಪಾದಕರ ದಾಳಿಗಳನ್ನು ನಿಯಂತ್ರಿಸಲು 2017ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವ ನೈಜೀರಿಯಾ ಸೇನೆಗೆ ವಿಶೇಷ ಅಧಿಕಾರ ನೀಡಿದೆ. ಫ್ರಾನ್ಸ್ನ 4,500 ಸೈನಿಕರಯ ನೈಜೀರಿಯಾಕ್ಕೆ ನೆರವು ನೀಡುತ್ತಿದೆ. ನೈಜೀರಿಯಾ ಸಚಿವ ಸಂಪುಟವು ತುರ್ತು ಪರಿಸ್ಥಿತಿಯನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲು ಅನುಮತಿ ನೀಡಿದೆ.

ಐದು ದೇಶಗಳ ಕಾರ್ಯಪಡೆ
ನೈಜರ್ ಸೇನಾ ಶಿಬಿರವು ಬುರ್ಕಿನಾ ಫಾಸೊ, ಮಾಲಿ, ಮೌರಿಟಾನಿಯಾ, ಚಾಡ್ ಮತ್ತು ನೈಜೀರಿಯಾಗಳು ಸೇರಿ 2014ರಲ್ಲಿ ರಚಿಸಿಕೊಂಡ ಐದು ದೇಶಗಳ 'ಜಿ5' ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯ ಭಾಗವಾಗಿದೆ. ಸೋಮವಾರ ಪಶ್ಚಿಮ ಟಾಹೊವಾ ಪ್ರದೇಶದ ಅಗಾಂಡೊ ಎಂಬಲ್ಲಿನ ಸೇನಾ ನೆಲೆಯ ಮೇಲೆ ಕೂಡ ಸೋಮವಾರ ದಾಳಿ ನಡೆದಿತ್ತು. ಇದರಲ್ಲಿ ಮೂವರು ನೈಜರ್ ಸೈನಿಕರು ಮೃತಪಟ್ಟಿದ್ದರೆ, 14 ಉಗ್ರರನ್ನು ಹೊಡೆದುರುಳಿಸಲಾಗಿತ್ತು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications