ಬಾರ್ಸಿಲೋನಾದಲ್ಲಿ ಉಗ್ರರ ಅಟ್ಟಹಾಸ: 2 ಸಾವು
ಬಾರ್ಸಿಲೋನಾದಲ್ಲಿ ಉಗ್ರರ ದಾಳಿ. ಕೇಂದ್ರ ಬಾರ್ಸಿಲೋನಾದಲ್ಲಿ ಜನರ ಸಮೂಹದ ಮೇಲೆ ವ್ಯಾನ್ ಹರಿಸಿದ ಉಗ್ರರು. ಘಟನೆಯಲ್ಲಿ ಕನಿಷ್ಠ ಎರಡು ಮಂದಿ ಸಾವನ್ನಪ್ಪಿರುವುದಾಗಿ ತಿಳಿಸಿರುವ ಪೊಲೀಸರು.
ಮ್ಯಾಡ್ರಿಡ್, ಆಗಸ್ಟ್ 17: ಸ್ಪೇನ್ ನ ರಾಜಧಾನಿಯಾದ ಬಾರ್ಸಿಲೋನಾದ ಮಧ್ಯ ಭಾಗದಲ್ಲಿರುವ ಪ್ಲಾಕಾ ಕ್ಯಟಲೂನ್ಯದಲ್ಲಿ ನೆರೆದಿದ್ದ ಜನ ಸಮೂಹದ ಮೇಲೆ ಏಕಾಏಕಿ ಟ್ರಕ್ ನುಗ್ಗಿಸಿದ ಉಗ್ರರು 13 ಜನರ ಸಾವಿಗೆ ಕಾರಣವಾಗಿದ್ದಾರೆ. ಇನ್ನು ಈ ಘಟನೆಯಲ್ಲಿ 100 ಜನರು ಗಾಯಗೊಂಡಿದ್ದಾರೆ.
ಹಳೆಯ ಮತ್ತು ಹೊಸ ಬಾರ್ಸಿಲೋನಾಗಳು ಸಂಧಿಸುವ ಈ ಸ್ಥಳವು ಈ ದೇಶಕ್ಕೆ ಪ್ರವಾಸಿಗರಾಗಿ ಆಗಮಿಸುವ ಅನೇಕರಿಗೆ ಮೆಚ್ಚಿನ ತಾಣ. ಬಾರ್ಸಿಲೋನಕ್ಕೆ ಬಂದವರು ಇಲ್ಲಿಗೆ ಬರದೇ ಹೋಗುವುದಿಲ್ಲ.

ಹಾಗೆಯೇ, ಟ್ರಕ್ ಹರಿದಾಗ ಇಲ್ಲಿ ನೂರಾರು ಸಂಖ್ಯೆಯ ಪ್ರವಾಸಿಗರೊಡನೆ ಸ್ಥಳೀಯರೂ ಇದ್ದರೆಂದು ಹೇಳಲಾಗಿದೆ. ಘಟನೆ ತಿಳಿಯುತ್ತಲೇ ಸೇನೆ ಹಾಗೂ ಪೊಲೀಸರು ಘಟನಾ ಸ್ಥಳವನ್ನು ಸುತ್ತುವರಿದಿವೆ. ವ್ಯಾನ್ ನ ಚಾಲಕ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧ ಮುಂದುವರಿದಿದೆ.
ಇತ್ತೀಚಿನ ವರ್ಷಗಳಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಹೀಗೆ ಜನ ಸಮೂಹಗಳ ಮೇಲೆ ಟ್ರಕ್ ಹರಿಸಿ ಅನೇಕರ ಸಾವಿಗೆ ಕಾರಣವಾಗುವ ಉಗ್ರರ ಕುಕೃತ್ಯಗಳು ಮುಂದುವರಿದೇ ಇವೆ.
ಇತ್ತೀಚೆಗೆ, ಫ್ರಾನ್ಸ್ ನ ನೈಸ್ ನಲ್ಲಿ ಇತ್ತೀಚೆಗೆ ಹೀಗೆಯೇ ಜನರ ಮೇಲೆ ಏಕಾಏಕಿ ಟ್ರಕ್ ಹರಿಸಿದ್ದಾಗ ಸುಮಾರು 100 ಜನರು ಸಾವಿಗೀಡಾಗಿದ್ದರು. ಇದಾದ ನಂತರ, ಬರ್ಲಿನ್, ಲಂಡನ್ ಹಾಗೂ ಸ್ಟಾಕ್ ಹೋಮ್ ಗಳಲ್ಲೂ ಇಂಥ ಘಟನೆಗಳು ಮರುಕಳಿಸಿರುವುದು ಅಲ್ಲಿನ ಪೊಲೀಸರಿಗೆ ತಲೆನೋವಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications