ಕ್ಯಾನ್ಸರ್ ಅಲ್ಲ; ದುರ್ಮಾಂಸವಷ್ಟೇ- ಡಾ ತಸ್ಲೀಮಾ ನಸ್ರೀನ್
ನ್ಯೂಯಾರ್ಕ್ , ಮೇ 12: ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಅವರ ಎದೆಗೂಡಿನಲ್ಲಿ ದುರ್ಮಾಂಸ ಬೆಳೆದಿದೆ. ಕೆಮ್ಮು, ಶೀತ ಜಾಸ್ತಿಯಾಗಿದೆ. ಸ್ವಲ್ಪ ಔಷಧ ಕೊಡಿ ಎಂದು ನ್ಯೂಯಾರ್ಕ್ ಆಸ್ಪತ್ರೆಗೆ ಭೇಟಿ ನೀಡಿದ ತಸ್ಲೀಮಾಗೆ ಅಲ್ಲಿನ ವೈದ್ಯರು ಒಂದಷ್ಟು ಪರೀಕ್ಷೆಗಳನ್ನು ನಡೆಸಿ, ತಮಗೆ breast tumour ಇದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳ ಪ್ರಕಾರ ನನಗೆ ಕ್ಯಾನ್ಸರ್ ಇಲ್ಲ; ನನ್ನೆದೆಯ ಗೂಡಿನಲ್ಲಿರುವುದು ದುರ್ಮಾಂಸವಷ್ಟೇನಂತೆ ಎಂದು ಡಾ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.
I feel like having a new life. Will be active 24 hours. pic.twitter.com/ZnbY20g5Qr
— taslima nasreen (@taslimanasreen) May 12, 2014 ತಸ್ಲೀಮಾ ಎದೆಗೂಡಿನಲ್ಲಿ 'ದೊಡ್ಡ ಗಾತ್ರದ' ಗಡ್ಡೆ ಕಾಣಿಸಿಕೊಂಡಿದೆ. ಯಾವುದಕ್ಕೇ ಆಗಲಿ ಒಂದು ಬಯಾಪ್ಸಿ ಮಾಡಿ, ಪರೀಕ್ಷಿಸೋಣ ಎಂದು ವೈದ್ಯರು ತಸ್ಲೀಮಾಗೆ ಸಲಹೆ ನೀಡಿದ್ದಾರಂತೆ. ಅದರಂತೆ ತಸ್ಲೀಮಾ ಬಯಾಪ್ಸಿ ಮಾಡಿಸಿಕೊಂಡಿದ್ದು, ಇಂದು ಅಥವಾ ನಾಳೆ ಬಯಾಪ್ಸಿ ವರದಿ ಲಭ್ಯವಾಗುವ ಸಾಧ್ಯತೆಯಿದೆ.

ಈ ಬೆಳವಣಿಗೆಗಳಿಂದ 51 ವರ್ಷದ ತಸ್ಲೀಮಾ ನಿಜಕ್ಕೂ ಎದೆಗುಂದಿಸಿದ್ದಾರೆ. ಮುಂದೆ ಬಯಾಪ್ಸಿ ವರದಿಯಲ್ಲಿ ಏನು ಫಲಿತಾಂಶ ಬರುವುದೋ ಎಂದು ಅವರು ಆತಂಕಗೊಂಡಿದ್ದಾರೆ. ಏಕೆಂದರೆ ತಸ್ಲೀಮಾರ ತಾಯಿ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದರು. ಇನ್ನು, ಅವರ ಸೋದರ ಈಗಾಗಲೇ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
'ನನ್ನೆದೆಯಲ್ಲಿ ದುರ್ಮಾಂಸ ಬೆಳೆದಿದೆಯಂತೆ. ನಿಜಕ್ಕೂ ನನಗೆ ಆತಂಕವಾಗಿದೆ. ಆದರೂ ಪರೀಕ್ಷೆಗಳೆಲ್ಲಾ ಮುಗಿದ ಮೇಲೆ ಹೈದರಾಬಾದಿ ಬಿರಿಯಾನಿ ತಿಂದೆ' ಎಂದು ಟ್ವೀಟ್ ಮಾಡಿ ತಮ್ಮ ಎದೆ ಭಾರವನ್ನು ಕಡಿಮೆ ಮಾಡಿಕೊಂಡಿದ್ದಾರೆ.
“@patilbrij: @taslimanasreen got the autopsy reports?” Not autopsy. I am not dead yet. I will get biopsy report tomorrow morning.
— taslima nasreen (@taslimanasreen) May 12, 2014 ಅಷ್ಟೇ ಅಲ್ಲ ತಸ್ಲೀಮಾ ಇನ್ನೂ ಒಂದು ಟ್ವೀಟ್ ಮಾಡಿ ಭಾರತೀಯರಿಗೆ ಒಂದು ಸಂದೇಶವನ್ನೂ ನೀಡಿದ್ದಾರೆ. 'ಓ ಭಾರತೀಯರೇ ನನಗೆ ಕ್ಯಾನ್ಸರ್ ಎಂದು ಗೊತ್ತಾಗಿ, ನಾನು ನಾಳೆಯೇ ಸತ್ತುಹೋದರೆ ನೀವು ನನಗೊಂದು ಉಪಕಾರ ಮಾಡಬೇಕು. ದಯವಿಟ್ಟು ನನ್ನ ಮುದ್ದಿನ ಬೆಕ್ಕನ್ನು ನೋಡಿಕೊಳ್ಳಿ. ನನ್ನ ಮಿನು ವಿಶ್ವದಲ್ಲೇ ಅತ್ಯುತ್ತಮ ಬೆಕ್ಕು' ಎಂದು ತಸ್ಲೀಮಾ ಕೋರಿದ್ದಾರೆ.
ಅಂದಹಾಗೆ 1986ರಲ್ಲಿ ತಸ್ಲೀಮಾ MBBS ಪಾಸು ಮಾಡಿದ್ದಾರೆ. ವೈದ್ಯೆಯಾಗಿ ವೃತ್ತಿ ಜೀವನ ಆರಂಭಿಸಿದ ತಸ್ಲೀಮಾ ಮುಂದೆ ಲಜ್ಜಾದಂತಹ ವಿವಾದಾತ್ಮಕ ಕಾದಂಬರಿಗಳನ್ನು ಬರೆಯಲಾರಂಭಿಸಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications