ಅಫ್ಘಾನಿಸ್ತಾನ: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಕಡ್ಡಾಯ!
ಕಾಬೂಲ್, ಮೇ 08: ಆಕ್ರಮಿತವಾಗಿ ಅಧಿಕಾರದಲ್ಲಿರುವ ತಾಲಿಬಾನ್ ಸರ್ಕಾರವು ಮಹಿಳೆಯರಿಗೆ ತಾಲಿಬಾನ್ ಕಠಿಣ ನಿರ್ಬಂಧನೆಯನ್ನು ಹೊರಡಿಸಿದೆ. ಅಫ್ಘಾನಿಸ್ತಾನಿನ ಮಹಿಳೆಯರಿಗೆ, ಯುವತಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸೇರಿದಂತೆ ದಿನನಿತ್ಯದ ಜೀವನದಲ್ಲಿ ಕಡ್ಡಾಯವಾಗಿ ಬುರ್ಖಾ ಧರಿಸಲು ಕಠಿಣ ಆದೇಶ ಜಾರಿಗೆ ಮಾಡಿದೆ.
2001 ನಂತರ 20 ವರ್ಷಗಳ ನಂತರ ಆಕ್ರಮಿತವಾಗಿ ಅಧಿಕಾರವನ್ನು ತನ್ನ ವಶದಲ್ಲಿಟ್ಟಿಕೊಂಡಿರುವ ತಾಲಿಬಾನ್ ಸರ್ಕಾರವು ಶನಿವಾರ ತಾವು ಈ ಮೊದಲು ನಡೆಸಿಕೊಂಡ ಬಂದಿರುವ ಆಡಳಿತಗಿಂತ ಸ್ಪಲ್ಪ ಮೃದವಾದ ಆಡಳಿತವನ್ನು ಮುನ್ನೆಡೆಸುತ್ತೇವೆಂದು ತಾಲಿಬಾನ್ ಉಗ್ರಗಾಮಿಗಳ ಸರ್ಕಾರ ಹೇಳಿಕೊಂಡಿದೆ.
ಪ್ರತಿ ಮಹಿಳೆಯರು ಕಡ್ಡಾಯವಾಗಿ ಮೈ ಪೂರ್ತಿ ಮುಚ್ಚಿಕೊಳ್ಳುವ ಬುರ್ಖಾ ಧರಿಸಬೇಕು ಎಂದಿರುವ ತಾಲಿಬಾನ್ ಸರ್ಕಾರದ ನಿಯಮಗಳು ಮಾನವ ಹಕ್ಕುಗಳು ಹಾಗೂ ಮಹಿಳಾ ಹಕ್ಕುಗಳ ಉಲ್ಲಂಘಿಸಿರುವ ಪ್ರಾಬಲ್ಯವನ್ನು ತಾಲಿಬಾನ್ ಹೊಂದಿದೆ.

ಅಫ್ಘಾನಿಸ್ತಾನ ದೇಶದ ಸುತ್ತಲೂ ಮಹಿಳೆಯರಿಗೆ ತಾಲಿಬಾನಿಗಳು ಹಲವಾರು ನಿರ್ಬಂಧಗಳನ್ನು ಹೇರಿದ್ದಾರೆ. ಶಾಲೆಗಳಲ್ಲಿ ಬುರ್ಖಾ ಧರಿಸಿಕೊಂಡು ಬರಬೇಕು, ಕಾಲೇಜುಗಳಲ್ಲಿ ಸಹಪಾಠಿಯಾದರೂ ಅಂತಹ ಪುರಷನ ಜೊತೆಗೆ ಯುವತಿಯರು ಜೊತೆಗೆ ಓಡಾಡಬಾರದು, ಜೊತೆಗೆ ಕೂಡಬಾರದು, ಮಾರುಕಟ್ಟೆಗಳಲ್ಲಿ ಒಂಟೆಯಾಗಿ ಮಹಿಳೆ ಹಾಗೂ ಯುವತಿಯರು ಬುರ್ಖಾ ಇಲ್ಲದೆ ಹೊರಗೆ ಬರಬಾರದು, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಉದ್ಯೋಗಕ್ಕೆ ಹೊರಗೆ ಹೊಗುವ ಮಹಿಳೆಯರು ಹಾಗೂ ನಗರಗಳಲ್ಲಿ ಒಂಟಿಯಾಗಿ ಬಂದರೆ ಬುರ್ಖಾ ಹಾಕಿಕೊಂಡು ಇರಬೇಕೆಂದು ತಾಲಿಬಾನ್ ಹೇಳಿದೆ.

ಶನಿವಾರ ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕ ಮತ್ತು ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡಜಾದ ಸಾರ್ವಜನಿಕವಾಗಿ ಅಫ್ಘಾನಿಸ್ತಾನನ ಮಹಿಳೆಯರಿಗೆ ಕಟ್ಟುನಿಟ್ಟಾದ ವಸ್ತ್ರಸಂಹಿತೆ ಬುರ್ಖಾ ಕಡ್ಡಾಯ ಎಂದು ಘೋಷಿಸಿದರು. ತಲೆಯಿಂದ ಕಾಲ ಕೆಳಗಡೆವರಿಗೂ ಬುರ್ಖಾ ಧರಿಸಬೇಕು ಏಕೆಂದರೆ ಅದು ಸಾಂಪ್ರದಾಯಿಕ ಮತ್ತು ಗೌರವಾನ್ವಿತವಾಗಿದೆ ಎಂದು ಕಾಬೂಲ್ನಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.

"ಮಹ್ರಮ್ ಅಲ್ಲದ (ವಯಸ್ಕ ನಿಕಟ ಪುರುಷ ಸಂಬಂಧಿಗಳು) ಪುರುಷರನ್ನು ಭೇಟಿಯಾದಾಗ ಪ್ರಚೋದನೆಯನ್ನು ತಪ್ಪಿಸಲು ಷರಿಯಾ ನಿರ್ದೇಶನಗಳ ಪ್ರಕಾರ ಹೆಚ್ಚು ವಯಸ್ಸಾದ ಅಥವಾ ಚಿಕ್ಕ ವಯಸ್ಸಿನ ಮಹಿಳೆಯರು ತಮ್ಮ ಕಣ್ಣುಗಳನ್ನು ಹೊರತುಪಡಿಸಿ ಮುಖವನ್ನು ಮುಚ್ಚಬೇಕು, ಹೆಣ್ಣು ಮಕ್ಕಳ ಶಿಕ್ಷಣವು ಇಸ್ಲಾಮಿಕ್ ತತ್ವಗಳ ಪ್ರಕಾರವಾಗಿರಬೇಕು ಹೀಗೆ ಅನೇಕ ನಿರ್ಬಂಧನೆಗಳನ್ನು ಅಫ್ಘಾನಿಸ್ತಾನ ದೇಶದ ಮಹಿಳೆಯರಿಗೆ ಹೇರಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications