ಸಿಡ್ನಿ ಕೆಫೆ ದಾಳಿ ಟೋರಿ ಜಾನ್ಸನ್ ಸಾಹಸ ಸ್ಮರಣೀಯ
ಬೆಂಗಳೂರು,ಡಿ.16: ಸಿಡ್ನಿಯ ಒಪೆರಾ ಹೌಸ್ ನ ಮಾರ್ಟಿನ್ ಪ್ಲೇಸ್ ನಲ್ಲಿದ್ದ ಕೆಫೆಯ ಮ್ಯಾನೇಜರ್ ಟೋರಿ ಜಾನ್ಸನ್ ಸಾಹಸಕ್ಕೆ ಇಡೀ ವಿಶ್ವವೇ ಪ್ರಶಂಸೆ ಸಲ್ಲಿಸುತ್ತಿದೆ. ಉಗ್ರರ ಕಪಿಮುಷ್ಟಿಯಲ್ಲಿದ್ದ ಒತ್ತೆಯಾಳುಗಳನ್ನು ಪಾರು ಮಾಡಲು ಟೋರಿ ಯತ್ನಿಸಿದ್ದು ಈಗ ಬೆಳಕಿಗೆ ಬಂದಿದೆ.
ಉಗ್ರನ ಒತ್ತೆ ಸೆರೆಯಲ್ಲಿದ್ದ ವ್ಯಕ್ತಿಗಳನ್ನು ಪಾರು ಮಾಡಲು ಭಯೋತ್ಪಾದಕನ ಕೈಯಲ್ಲಿದ್ದ ಬಂದೂಕನ್ನು ಕಿತ್ತುಕೊಳ್ಳಲು ಹೋಗಿ ಗುಂಡಿಗೆ ಬಲಿಯಾದ ಲಿಂಟ್ ಕೆಫೆ ಮ್ಯಾನೇಜರ್ 34 ವರ್ಷದ ಟೋರಿ ಜಾನ್ಸನ್ನನ್ನು ಈಗ ಹೀರೋ ಎಂದು ಪರಿಗಣಿಸಿ ಸ್ಮರಿಸಲಾಗುತ್ತಿದೆ.
ಉಗ್ರರ ಗುಂಡಿಗೆ ಬಲಿಯಾದ ಇಬ್ಬರಲ್ಲಿ ಟೋರಿ ಜಾನ್ಸನ್ ಒಬ್ಬ. ಉಗ್ರನ ಗುಂಡೇಟಿನಿಂದ ನೆಲಕ್ಕುರುಳಿದ್ದ ಅವನನ್ನು ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿ ಕೊನೆಯುಸಿರೆಳೆದ. ಆಸ್ಟ್ರೇಲಿಯಾ ಕಲಾವಿದ ಕೇಟ್ ಜಾನ್ಸನ್ ಮಗನಾದ ಟೋರಿ 2012ರಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದ್ದ. [ಬೆಚ್ಚಿ ಬೀಳಿಸಿದ ಸಿಡ್ನಿ ಕೆಫೆ ಆಕ್ರಮಣ: ಕನ್ನಡಿಗರ ಅನುಭವ ಕಥನ]

ನಿನ್ನೆ ಹೋಟೆಲ್ ಒಳ ಪ್ರವೇಶಿಸಿದ ಉಗ್ರ ಹಲವರನ್ನು ಒತ್ತೆಯಿಟ್ಟುಕೊಂಡಿದ್ದ. ಗೋಳಾಡುತ್ತಿದ್ದ ಒತ್ತೆಯಾಳುಗಳು ತಪ್ಪಿಸಿಕೊಳ್ಳಲು ಅನುಕೂಲಮಾಡಿಕೊಡುವುದಕ್ಕಾಗಿ ಟೋರಿಯು ಉಗ್ರನ ಮೇಲೆ ದಾಳಿ ಮಾಡಿ ಬಂದೂಕು ಕಿತ್ತುಕೊಳ್ಳಲು ಮುಂದಾದ. ಆದರೆ ಅದು ಸಾಧ್ಯವಾಗಲಿಲ್ಲ. [ಇನ್ಫೋಸಿಸ್ ಟೆಕ್ಕಿ ಕುಟುಂಬ ಫುಲ್ ಖುಷ್]
ಟೋರಿ ಉಗ್ರನ ಗುಂಡಿಗೆ ಬಲಿಯಾದ ಪ್ರಕರಣ ಅಂತ್ಯಗೊಂಡ ನಂತರ ಪ್ರತ್ಯಕ್ಷದರ್ಶಿಗಳು ಈ ವಿಷಯವನ್ನು ಇತರರಿಗೆ ತಿಳಿಸಿದಾಗ ಜನ ಟೋರಿಯನ್ನು ಹೀರೋ ಎಂದು ಬಣ್ಣಿಸಿದ್ದಾರೆ.
ಟೋರಿ ಜಾನ್ಸನ್ ಇಂದು ಮರೆಯಾಗಿದ್ದಾನೆ. ಆದರೆ ಎಂದೂ ಅವನು ಆಸ್ಟ್ರೇಲಿಯಾ ಜನತೆಯ ಮನಸ್ಸಿನಲ್ಲುಳಿಯುತ್ತಾನೆ. ಅವನಿಗೆ ದೇವರು ಚಿರಶಾಂತಿ ನೀಡಲಿ ಎಂದು ಜನತೆ ಕಂಬನಿ ಮಿಡಿದಿದ್ದಾರೆ. (ಪಿಟಿಐ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications