ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು
ಕೊಲಂಬೋ, ಏಪ್ರಿಲ್ 21: ಈಸ್ಟರ್ ದಿನದಂದು ಸರಣಿ ಬಾಂಬ್ ಸ್ಫೋಟದಿಂದ ಶ್ರೀಲಂಕಾ ತತ್ತರಿಸಿದೆ. ಎಲ್ ಟಿಟಿಇ ಜತೆಗಿನ ನಾಗರಿಕ ಯುದ್ಧದಿಂದಾಗಿ ಲಂಕನ್ನರಿಗೆ ಮೆತ್ತುಕೊಂಡಿದ್ದ ರಕ್ತದ ಪಸೆ ಆರಿ ನೆಮ್ಮದಿ ನೆಲೆಸಿದೆ ಎನ್ನುವಷ್ಟರಲ್ಲೇ ಭೀಕರ ಸ್ಫೋಟಗಳು ಅಪ್ಪಳಿಸಿವೆ.
ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ಗುರಿಯನ್ನಾಗಿಸಿಕೊಂಡು ಚರ್ಚ್ ಗಳಲ್ಲಿ ಬಾಂಬ್ ಸ್ಫೋಟ ಮಾಡಲಾಗಿದೆ. ಕೆಲವು ಹೋಟೆಲ್ ಗಳಲ್ಲಿ ಸ್ಫೋಟಗಳಾಗಿವೆ. ಏಳೆಂಟು ಕಡೆಗಳಲ್ಲಿ ನಡೆದಿರುವ ವಿಧ್ವಂಸಕ ಕೃತ್ಯದಿಂದಾಗಿ ಸುಮಾರು 155ಕ್ಕೂ ಅಧಿಕ ಮಂದಿ ಮರಣ ಹೊಂದಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕೊಲಂಬೋ ಹಾಗೂ ನೆಗೊಂಬೋ ನಗರಗಳಲ್ಲಿರುವ ಚರ್ಚ್ ಗಳಲ್ಲಿ ಶಾಂಗ್ರಿಲಾ ಹೋಟೆಲ್ ಹಾಗೂ ಕಿಂಗ್ಸ್ ಬರಿ ಹೋಟೆಲ್ ನಲ್ಲಿ ಸ್ಫೋಟವಾಗಿವೆ. ಸ್ಫೋಟಗೊಂಡ ಸ್ಥಳದಿಂದ ನೆರವಿಗಾಗಿ ಕೋರಲಾಗಿದೆ. ಭಾರತೀಯ ರಾಯಭಾರ ಕಚೇರಿ ಕೂಡಾ ಸಹಾಯವಾಣಿ ಪ್ರಕಟಿಸಿದೆ.

2006ರ ತನಕ ಸರಣಿ ಸ್ಫೋಟ, ಆತ್ಮಾಹುತಿ ದಾಳಿಗಳನ್ನು ಎದುರಿಸಿದ್ದ ಶ್ರೀಲಂಕಾಕ್ಕೆ ವಿಧ್ವಂಸಕ ಕೃತ್ಯಗಳಿಂದ ಮುಕ್ತಿ ನೀಡುವ ಪಣತೊಟ್ಟ ಶ್ರೀಲಂಕಾ ಸೇನೆ, 2009ರಲ್ಲಿ ಎಲ್ ಟಿಟಿ ಐಯನ್ನು ಅಧಿಕೃತವಾಗಿ ನಿರ್ನಾಮ ಮಾಡಲಾಗಿತ್ತು.ಆನಂತರ ದ್ವೀಪರಾಷ್ಟ್ರದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ, ಸ್ಫೋಟಗಳು ಸಂಭವಿಸಿರಲಿಲ್ಲ.
1985 ರಿಂದ 2006ರ ಅವಧಿಯಲ್ಲಿ ದಾಖಲಾದ ವಿಧ್ವಂಸಕ ಕೃತ್ಯಗಳು
* ಶ್ರೀಮಹಾಬೋಧಿ ದಾಳಿ 1985 : ಅನುರಾಧಾಪುರದಾಲ್ಲಿ ಎಲ್ಟಿಟಿಇ ನಡೆಸಿದ ದಾಳಿಯಲ್ಲಿ 146ಕ್ಕೂ ಅಧಿಕ ಮಂದಿ ಸಾವು, ಮೃತರಲ್ಲಿ ನಾಗರಿಕರು, ಬೌದ್ಧ ಭಿಕ್ಕುಗಳು, ಸನ್ಯಾಸಿಗಳಿದ್ದರು.
* 1987ರಲ್ಲಿ ಅಲುತಾ ಕ್ಯಾ ಹತ್ಯಾಕಾಂಡ: ಎಲ್ಟಿಟಿಇ ದಾಳಿಗೆ 127 ಸಿಂಹಳೀಯರ ಸಾವು.
* 1987ರಲ್ಲಿ ಶ್ರೀಲಂಕಾ ಸಂಸತ್ ಮೇಲೆ ದಾಳಿ: ಸಂಸತ್ತಿನಲ್ಲಿ ನಡೆದ ಗ್ರೇನೇಡ್ ದಾಳಿಯಲ್ಲಿ ಇಬ್ಬರು ಸಾವು.
* ಬಸ್ ಮೇಲೆ ದಾಳಿ, 1987: ಕೊಲಂಬೋ ಬಸ್ ನಿಲ್ದಾಣದಲ್ಲಿ ಕಾರ್ ಬಾಂಬ್ ಸ್ಫೋಟದಲ್ಲಿ 113 ಮಂದಿ ಸಾವು.
* 1990ರಲ್ಲಿ ಮಸೀದಿ ಮೇಲೆ ದಾಳಿ: ಕಟ್ಟಂಕುಡಿಯಲ್ಲಿನ ಮಸೀದಿಯನ್ನು ಗುರಿಯನ್ನಾಗಿಸಿಕೊಂಡು ದಾಳಿ ನಡೆಸಿದ ಎಲ್ಟಿಟಿಇಯಿಂದ 147 ಮುಸ್ಲಿಮರ ಹತ್ಯೆ.
* 1992ರಲ್ಲಿ ಪಲ್ಲುಯಾಗೊದೆಲ್ಲಾ ಹತ್ಯಾಕಾಂಡ: ಎಲ್ಟಿಟಿಇ ದಾಳಿಗೆ 285 ಮಂದಿ ಸಾವು.
* 1996ರಲ್ಲಿ ಸೆಂಟ್ರಲ್ ಬ್ಯಾಂಕ್ ದಾಳಿ: ಬಾಂಬ್ ಹೊಂದಿದ್ದ ಟ್ರಕ್ ಮೂಲಕ ಕೊಲಂಬೋ ಸೆಂಟ್ರಲ್ ಬ್ಯಾಂಕ್ ಮೇಲೆ ದಾಳಿ 91 ಮಂದಿ ಸಾವು.
* 2006ರಲ್ಲಿ ದಿಗಂಪಥಾನಾ ಬಾಂಬ್ ಸ್ಫೋಟ: 15 ಮಿಲಿಟರಿ ಬಸ್ ಮೇಲೆ ದಾಳಿ ನಡೆಸಿದ ಬಾಂಬ್ ತುಂಬಿದ ಎಲ್ಟಿಟಿಇ ಟ್ರಕ್, ಸ್ಫೋಟದ ಪರಿಣಾಮ 120 ಮಂದಿ ಸಾವು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications