ಫುಟ್ಬಾಲ್ ವಿಶ್ವಕಪ್: ಸೋನಿಗಿದೆ ಭರ್ಜರಿ ನಿರೀಕ್ಷೆ
ಮುಂಬೈ, ಮೇ.30: ಬ್ರೆಜಿಲ್ ನಲ್ಲಿ ನಡೆಯಲಿರುವ 2014ರ ಫೀಫಾ ವಿಶ್ವಕಪ್ ಗೆ ಭರ್ಜರಿ ತಯಾರಿ ನಡೆದಿದೆ. ಈ ನಡುವೆ ಇಂಡಿಯನ್ ಪ್ರಿಮಿಯರ್ ಲೀಗ್ ನಂತರ ಫುಟ್ಬಾಲ್ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಸೋನಿ ಸಿಕ್ಸ್ ಚಾನೆಲ್ ಪಡೆದುಕೊಂಡಿದ್ದು, ಜಾಹೀರಾತುಗಳ ಮೂಲಕ ಸುಮಾರು 200 ಕೋಟಿ ರು ಆದಾಯ ಗಳಿಕೆ ನಿರೀಕ್ಷೆಯಲ್ಲಿದೆ.
10 ಸೆಕೆಂಡು ಜಾಹೀರಾತಿಗೆ 2.5 ಲಕ್ಷರು ನಂತೆ ಆಡ್ ಸ್ಪಾಟ್ ಮಾರಾಟ ಮಾಡುತ್ತಿರುವ ಸೋನಿ ಸಿಕ್ಸ್ ಸುಮಾರು 64 ಪಂದ್ಯಗಳ ನಂತರ ಜಾಹೀರಾತುಗಳಿಂದ 200 ಕೋಟಿ ಗೂ ಅಧಿಕ ಹಣ ಗಳಿಸುವ ನಿರೀಕ್ಷೆಯಲ್ಲಿದೆ ಎಂದು ಸೋನಿ ಸಿಕ್ಸ್ ಮಾಲಿಕತ್ವ ಸಂಸ್ಥೆ ಮಲ್ಟಿ ಸ್ಕ್ರೀನ್ ಮೀಡಿಯಾದ ನೆಟ್ವರ್ಕ್ ಸೇಲ್ಸ್ ಅಧ್ಯಕ್ಷ ರೋಹಿತ್ ಗುಪ್ತಾ ಹೇಳಿದ್ದಾರೆ.

ಐಪಿಎಲ್ ಪಂದ್ಯಗಳಿಗೆ ಹೋಲಿಕೆ ಮಾಡಿದರೆ ಫುಟ್ಬಾಲ್ ಪಂದ್ಯಗಳಲ್ಲಿ ಹೆಚ್ಚಿನ ಜಾಹೀರಾತು ತುಂಬುವುದು ಕಷ್ಟಕರ. ಒಂದು ಐಪಿಎಲ್ ಪಂದ್ಯಕ್ಕೆ 2,400 ಸೆಕೆಂಡುಗಳಷ್ಟು ಜಾಹೀರಾತು ಅವಕಾಶ ಸಿಕ್ಕತೆ ಫೀಫಾ ಪಂದ್ಯಗಳಲ್ಲಿ 800 ಸೆಕಂಡುಗಳು ಮಾತ್ರ ಸಿಗಲಿದೆ. ಪ್ರಾಯೋಜಕತ್ವ ಸಂಸ್ಥೆಗಳಿಂದ ಕನಿಷ್ಠ 18 ರಿಂದ 20 ಕೋಟಿ ರು ಪಡೆಯುವ ಯೋಜನೆಯನ್ನು ಸೋನಿ ಹಾಕಿಕೊಂಡಿದೆ.
ಐಪಿಎಲ್ 7 ಇದುವರೆವಿಗೂ 225 ಮಿಲಿಯನ್ ವೀಕ್ಷಕರನ್ನು ತಲುಪಿದೆ. ಇದರ ಶೇ 60ರಷ್ಟು ವೀಕ್ಷಕರು ಫೀಫಾ ವಿಶ್ವಕಪ್ ನೋಡಿದರೆ ಸಾಕು ಎನ್ನುತ್ತಿದ್ದಾರೆ ರೋಹಿತ್, ಜೋಲೋ ಮೊಬೈಲ್ ಸದ್ಯಕ್ಕೆ ಪ್ರಯೋಜಕತ್ವಕ್ಕೆ ಮುಂದೆ ಬಂದಿದೆ. ಜೂ.12 ರಿಂದ ಜುಲೈ 13 ರ ತನಕ ಪಂದ್ಯಾವಳಿಗಳು ನಡೆಯಲಿದ್ದು,
ಭಾರತೀಯ ಕಾಲಮಾನ ಪ್ರಕಾರ ರಾತ್ರಿ ಹಾಗೂ ತಡರಾತ್ರಿ ಮಾತ್ರ ಪಂದ್ಯ ವೀಕ್ಷಿಸಲು ಸಾಧ್ಯ ಹೀಗಾಗಿ ಜಾಹೀರಾತು ನೀಡಲು ಹಲವು ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಇಂಥ ಪರಿಸ್ಥಿತಿಯಲ್ಲೂ ಸೋನಿ ಲಾಭ ಮಾಡುವ ಯೋಜನೆ ಫಲಕೊಡುವುದೇ ಕಾದು ನೋಡಬೇಕಿದೆ. ಫೀಫಾ ಜತೆ ಪ್ರಾಯೋಜಕರಾಗಿ ಸೋನಿ ಅಲ್ಲದೆ ಅಡಿಡಾಸ್, ಕೋಕಾ ಕೋಲಾ, ಹ್ಯುಂಡೈ, ಕಿಯಾ ಮೋಟರ್ಸ್, ಎಮಿರೈಟ್ಸ್, ವೀಸಾ, ಕ್ಯಾಸ್ಟ್ರಾಲ್, ಜಾನ್ಸನ್ ಅಂಡ್ ಜಾನ್ಸನ್, ಮೆಕ್ ಡೋನಾಲ್ಡ್,..ಮುಂತಾದ ಕಂಪನಿಗಳಿವೆ. [ಫೀಫಾ ವಿಶ್ವಕಪ್ 2010 ಮೆಲುಕು]
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications