ಭಾರತೀಯ ಪ್ರಯಾಣಿಕರಿಗೆ ಸಿಂಗಪುರದ ಆಫರ್

'ಏಷ್ಯಾ ಏರ್ ಪಾಸ್'ಎಂಬ ಹೆಸರಿನ ರಿಯಾಯಿತಿ ಯೋಜನೆ ವಿಶೇಷವಾಗಿ ಭಾರತೀಯ ಗ್ರಾಹಕರಿಗೆ ನೀಡಲಾಗುತ್ತಿದೆ. ಸಿಂಗಪುರದಿಂದ ಹಾಂಗ್ ಕಾಂಗ್, ಚೀನಾ, ಜಪಾನ್, ಯುಎಸ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಗೆ ತೆರಳುವ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ ವಿಶೇಷ ರಿಯಾಯಿತಿ ಸಿಗುತ್ತಿದೆ. ಉತ್ತರ ಏಷ್ಯಾ ಹಾಗೂ ಆಗ್ನೇಯ ಏಷ್ಯಾ ಸೇರಿ ನಾಲ್ಕು ವಿಭಾಗಗಳ ವಿಮಾನಯಾನಕ್ಕೆ ವಿಶೇಷ ರಿಯಾಯಿತಿ ಸಿಗಲಿದೆ ಎಂದು ಏರ್ ಲೈನ್ಸ್ ಪ್ರಕಟಿಸಿದೆ.
ಈ ಪಾಸ್ ಗಳು ಮಾರ್ಚ್ 31ರ ತನಕ ಲಭ್ಯವಿದ್ದು, ಸಿಂಗಪುರ ಏರ್ ಲೈನ್ಸ್ ವಿಮಾನಯಾನ ಸಂಸ್ಥೆಯ ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಯಮತ್ತೂರು, ದೆಹಲಿ, ಕೊಚ್ಚಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ತಿರುವನಂತಪುರ, ವಿಶಾಖಪಟ್ಟಣಂ ಕಚೇರಿಗಳಲ್ಲಿ ಹಾಗೂ ಟ್ರಾವೆಲ್ ಏಜೆಂಟ್ ಗಳ ಮೂಲಕ ಹೆಚ್ಚಿನ ವಿವರ ಪಡೆದುಕೊಳ್ಳಬಹುದು.
ಈ ರಿಯಾಯಿತಿ ಪಾಸ್ ಗಳು ಸಿಂಗಪುರ ಏರ್ ಲೈನ್ಸ್ ಹಾಗೂ ಕಡಿಮೆ ದರದ ಸಬ್ಸಿಡಿ ಏರ್ ಲೈನ್ಸ್ ಸಿಲ್ಕ್ ಏರ್ ಎರಡರ ಪ್ರಯಾಣಕ್ಕೂ ಅನವಯವಾಗಲಿದೆ.
ಈ ವಿಶೇಷ ರಿಯಾಯಿತಿ ದರ ಪಾಸ್ ಗಳ ಜತೆಗೆ ಪ್ರಯಾಣಿಕರು 40 ಚಾಂಗಿ ಡಾಲರ್ ವೋಚರ್ ಕೂಡಾ ಪಡೆದುಕೊಳ್ಳಬಹುದು. ಈ ವೋಚರ್ ಗಳನ್ನು ಸಿಂಗಪುರದ ಚಾಂಗಿ ಏರ್ ಪೋರ್ಟ್ ನ ಮಳಿಗೆಗಳು, ರೆಸ್ಟೋರೆಂಟ್ ಅಥವಾ ಲಾಂಚ್ ಗಳಲ್ಲಿ ಬಳಸಬಹುದು ಎಂದು ವಿಮಾನಯಾನ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ಭಾರತದ 11 ನಗರಗಳಿಂದ ವಾರಕ್ಕೆ ಸುಮಾರು 107 ವಿಮಾನಗಳು ಸಿಂಗಪುರದ ಕಡೆಗೆ ಹಾರುತ್ತವೆ. ಈ ವಿಮಾನಯಾನ ಜಗತ್ತಿನಾದ್ಯಂತ 100ಕ್ಕೂ ಅಧಿಕ ನಗರಗಳಿಗೆ ಸಂಪರ್ಕ ಒದಗಿಸುತ್ತದೆ. ಏಷ್ಯಾದಲ್ಲಿನ ವಿವಿಧ ನಗರಗಳನ್ನು ಒಮ್ಮೆಗೆ ತಲುಪಲು ಬಯಸುವ ಪ್ರಯಾಣಿಕರಿಗೆ SIA ಹಾಗೂ ಸಿಲ್ಕ್ ಏರ್ ಸೂಕ್ತವಾದ ವಿಮಾನಯಾನವಾಗಿದೆ ಎಂದು ಸಿಂಗಪುರ ವಿಮಾನಯಾನ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಜಿಎಂ ತೊಹ್ ಹೇಳಿದ್ದಾರೆ. (ಪಿಟಿಐ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications