Axiom-4 Mission: ‘ಜೈ ಹಿಂದ್.. ಜೈ ಭಾರತ್...’ ಇತಿಹಾಸ ಸೃಷ್ಟಿಸಿದ ಭಾರತೀಯ ವಿಜ್ಞಾನಿ ಶುಭಾಂಶು ಶುಕ್ಲಾ!
ಭಾರತೀಯ ಬಾಹ್ಯಾಕಾಶ ಲೋಕದಲ್ಲಿ ಇಂದಿನ ದಿನ ಎಂದಿಗೂ ಮರೆಯಲು ಆಗದು, ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ಲೋಕಕ್ಕೆ ನಮ್ಮ ವಿಜ್ಞಾನಿಗಳು ದೊಡ್ಡ ಮಟ್ಟದ ಕೊಡುಗೆಯನ್ನ ನೀಡುತ್ತಿದ್ದಾರೆ. ಅದೇ ರೀತಿ ಇಂದು ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹಾರಿದ್ದಾರೆ. ಅಲ್ಲದೆ ಹೀಗೆ ಬಾಹ್ಯಾಕಾಶಕ್ಕೆ ಹಾರುವ ಸಮಯದಲ್ಲೂ, 'ಜೈ ಹಿಂದ್.. ಜೈ ಭಾರತ್...' ಘೋಷಣೆ ಮೊಳಗಿಸುವ ಮೂಲಕ 143.81 ಕೋಟಿ ಭಾರತೀಯರಿಗೆ ಹೆಮ್ಮೆ ತಂದಿದ್ದಾರೆ.
ಹೌದು, ಆಕ್ಸಿಯಮ್-4 ಮಿಷನ್ ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿ ಮೂಲದ ವಿಜ್ಞಾನಿ ಟಿಬೊರ್ ಕಾಪು ಮತ್ತು ಪೋಲೆಂಡ್ನ ಸ್ಲಾವೋಜ್ ವಿಸ್ನೀವ್ವಿಸ್ಕಿ ಸೇರಿದಂತೆ ಒಟ್ಟಾರೆ 4 ಜನರಿದ್ದ ತಂಡ ಬಾಹ್ಯಾಕಾಶಕ್ಕೆ ಹಾರಿದೆ. ಹಾಗಾದ್ರೆ ಬಾಹ್ಯಾಕಾಶಕ್ಕೆ ರಾಕೆಟ್ ಹಾರುವ ಸಮಯದಲ್ಲಿ ಕ್ಯಾಮೆರಾ ಸೆರೆ ಹಿಡಿದಿರುವ ಅದ್ಭುತ ಫೋಟೋ ಇಲ್ಲಿವೆ ಮುಂದೆ ಓದಿ.

ಎಲ್ಲಿಂದ ಉಡಾವಣೆ ಮಾಡಲಾಯಿತು?
ಆಕ್ಸಿಯಮ್-4 ಮಿಷನ್ ಫ್ಲೊರಿಡಾದಲ್ಲಿರುವ ನಾಸಾ ಸಂಸ್ಥೆಯ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಆಕ್ಸಿಯಮ್-4 ಮಿಷನ್ ಮಹತ್ವದ ಸಂಶೋಧನೆಗಳು ಸೇರಿದಂತೆ ಮನುಷ್ಯರು ಭವಿಷ್ಯದಲ್ಲಿ ಬಾಹ್ಯಾಶದಲ್ಲಿ ಬದುಕುವಂತೆ ಮಾಡಲು ವೈಜ್ಞಾನಿಕ ತನಿಖೆ ನಡೆಸಲಿದೆ. ಫ್ಲೊರಿಡಾದಲ್ಲಿ ಇರುವ, ನಾಸಾ ಸಂಸ್ಥೆಯ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇಂದು ಸ್ಥಳೀಯ ಕಾಲಮಾನ ಬೆಳಗ್ಗೆ 2.31ಕ್ಕೆ ಉಡಾವಣೆಯನ್ನ ಮಾಡಲಾಗಿದೆ.

26,000 ಕಿಲೋ ಮೀಟರ್ ಸ್ಪೀಡ್!
ಆಕ್ಸಿಯಮ್-4 ಮಿಷನ್ ಉಡಾವಣೆಗೆ ಸ್ಪೇಸ್ ಎಕ್ಸ್ ಕೂಡ ಸಾಥ್ ನೀಡಿತ್ತು, ಹೀಗೆ 4 ವಿಜ್ಞಾನಿಗಳನ್ನು ಹೊತ್ತು ಹೊರಟ ರಾಕೆಟ್ ಭೂಮಿಯಿಂದ ಸುಮಾರು 200 ಕಿಲೋ ಮೀಟರ್ ಎತ್ತರದಲ್ಲಿ ಬರೋಬ್ಬರಿ 26,000 ಕಿಲೋ ಮೀಟರ್ ವೇಗದಲ್ಲಿ ಮೇಲಕ್ಕೆ ನುಗ್ಗುತ್ತಿರುವ ದೃಶ್ಯವು ಸಂಚಲನ ಸೃಷ್ಟಿಸುವಂತೆ ಇತ್ತು. ಭೂಮಿಯ ಗುರತ್ವ ಬಲದಿಂದ ತಪ್ಪಿಸಿಕೊಂಡು ಹೊರ ಹೋಗಲು ಇಷ್ಟು ವೇಗ ಅಗತ್ಯವಿರುತ್ತದೆ.

10 ನಿಮಿಷದಲ್ಲಿ ಬಾಹ್ಯಾಕಾಶಕ್ಕೆ ಎಂಟ್ರಿ!
ಮನುಷ್ಯರು ಹಾಗೂ ಭೂಮಿ ಮೇಲೆ ಇರುವ ವಸ್ತುಗಳೆಲ್ಲಾ ಭೂಮಿ ಗುರತ್ವದ ಬಲದಲ್ಲಿ ಬಂಧಿತವಾಗಿದ್ದು, ಯಾವುದೇ ಕಾರಣಕ್ಕೂ ಸುಲಭವಾಗಿ ನಾವು ಭೂಮಿಯಿಂದ ಹೊರಗೆ ಹೋಗುವುದಕ್ಕೆ ಆಗಲಾರದು. ಈ ಕಾರಣಕ್ಕೆ ಅತಿಹೆಚ್ಚು ವೇಗದಲ್ಲಿ ರಾಕೆಟ್ ಚಲಾಯಿಸಿ, ಬಾಹ್ಯಾಕಾಶ ನೌಕೆಯನ್ನು ನಭಕ್ಕೆ ಕಳುಹಿಸುತ್ತಾರೆ ವಿಜ್ಞಾನಿಗಳು. ಇಂದು ಉಡಾವಣೆಯಾದ ರಾಕೆಟ್ ಕೂಡ ಬರೋಬ್ಬರಿ 26,000 ಕಿಲೋ ಮೀಟರ್ ವೇಗದಲ್ಲಿ ಮೇಲಕ್ಕೆ ನುಗ್ಗಿ, ಕೇವಲ 10 ನಿಮಿಷದಲ್ಲಿ ಬಾಹ್ಯಾಕಾಶಕ್ಕೆ ಎಂಟ್ರಿ ಕೊಟ್ಟಿತ್ತು!

'ಜೈ ಹಿಂದ್... ಜೈ ಭಾರತ್...'
ಶುಭಾಂಶು ಶುಕ್ಲಾ ಅವರು ಇಂದು ಮಾಡಿರುವ ಸಾಧನೆ 40 ವರ್ಷಗಳ ಇತಿಹಾಸ ಅಳಿಸಿ ಹಾಕಿದೆ. ಹೇಗೆ ಅಂದ್ರೆ, 1984ರ ಸಮಯದಲ್ಲಿ ರಾಕೇಶ್ ಶರ್ಮಾ ಅವರು ಸೋವಿಯತ್ ರಷ್ಯಾ ಯೋಜನೆಯಲ್ಲಿ ಭಾಗಿಯಾಗಿ ಬಾಹ್ಯಾಕಾಶಕ್ಕೆ ಹಾರಿದ್ದರು. ಹೀಗೆ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹಾರಿ, 4 ದಶಕಗಳ ನಂತರ ಅಂದ್ರೆ 40 ವರ್ಷಗಳ ನಂತರ ಭಾರತೀಯ ವಿಜ್ಞಾನಿ ಒಬ್ಬರು ಮತ್ತೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದೇ ಸಮಯದಲ್ಲಿ, ಬಾಹ್ಯಾಕಾಶ ನೌಕೆಯಲ್ಲಿ ಕುಳಿತು ಭೂಮಿ ಬಿಟ್ಟು ಹೊರ ಹೋಗುವಾಗಲೂ 'ಜೈ ಹಿಂದ್... ಜೈ ಭಾರತ್...' ಎಂದಿದ್ದಾರೆ ಶುಭಾಂಶು ಶುಕ್ಲಾ ಅವರು. ಈ ಮೂಲಕ ಭಾರತೀಯರಿಗೆ ಇದು ಹೆಮ್ಮೆಯ ಕ್ಷಣವಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications