ರಾಜಾಜ್ಞೆಗೆ ಬೆದರಿ 320 ಕೆಜಿ ತೂಕ ಇಳಿಸಿದ ಶಾಯರಿ

ಇದು ಯಾವುದೋ ಚಂದಮಾಮಾ ಕಥೆಯಲ್ಲ. ಸೌದಿಯ ರಿಯಾದ್ ನಲ್ಲಿ ನಡೆದ ಈಗಿನ ಕಥೆ. ಯುವಕನ ದೇಹ ಕಂಡು ರಾಜನಿಗೇ ಎಷ್ಟು ರೇಜಿಗೆಯಾಗಿತ್ತು ಅಂದರೆ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದರು.
ದಢೂತಿ ದೇಹದ ಖಲೀದ್ ಮೊಹಸೀನ್ ಅಲ್ ಶಾಯರಿ ತೂಕ ಕಳೆದುಕೊಂಡ ಯುವಕ. ಸೌದಿ ರಾಜನ ಹೆಸರು ಅಬ್ದುಲ್ಲಾ. ಆಸ್ಪತ್ರೆಯ ಹೆಸರು King Fahd Medical City (KFMC). ಯುವಕ ಅಲ್ ಶಾಯರಿ ಈಗ 610 ರಿಂದ 290 ಕೆಜಿಗೆ ಇಳಿದಿದ್ದು, ಆರೋಗ್ಯವಾಗಿದ್ದಾನೆ. ದಾಖಲೆಯ ಸಂಗತಿಯೆಂದರೆ ಕೇವಲ 4 ತಿಂಗಳಲ್ಲಿ ಅಲ್ ಶಾಯರಿ ತೂಕ ಇಳಿಸಿಕೊಂಡಿದ್ದಾನೆ.
ಅಲ್ ಶಾಯರಿ ತೂಕ ಇಳಿಸಿಕೊಂಡ ಸ್ವಾರಸ್ಯಕರ ಕಥೆ :
ದಢೂತಿ ಯುವಕ ಅಲ್ ಶಾಯರಿ ಈಗ ಮುಂದಿನ ಹಂತದ ಚಿಕಿತ್ಸೆಗೊಳಗಾಗಲು ಸಿದ್ಧತೆ ನಡೆಸಿದ್ದಾನೆ. ಆತನ ಹೃದಯ ಮತ್ತು ಶ್ವಾಸಕೋಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಈತನಿಗಾಗಿ ವಿಶೇಷ ಚೇರ್ ತಯಾರಿಸಲಾಗಿದ್ದು, ಅದು ಅತಿ ದೊಡ್ಡ ಮೆಡಿಕಲ್ ಚೇರ್ ಎಂಬ ಹೆಗ್ಗಳಿಕೆ ಪಡೆದಿದೆ.
21 ವೈದ್ಯಕೀಯ ಸಲಹೆಗಾರರು, 15 ನರ್ಸ್ ಗಳು ಮತ್ತು ಅಲ್ ಶಾಯರಿ ತಾಯಿ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಹೊಟ್ಟೆ ಭಾಗದಿಂದಲೇ 170 ಕೆಜಿ ತೆಗೆಯಲಾಗಿದೆ. ಅದಕ್ಕೂ ಮುನ್ನ ದೇಹದ ಇತರೆ ಭಾಗಗಳಿಂದ 150 ಕೆಜಿ ತೆಗೆಯಲಾಗಿದೆ. ಅಂದಹಾಗೆ, ಅಮೆರಿಕದಿಂದ ತರಿಸಿಕೊಳ್ಳಲಾದ ವಿಶೇಷ ಆಹಾರವನ್ನು ಅಲ್ ಶಾಯರಿ ನೀಡಲಾಗಿದೆ.
KFMC ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮುನ್ನ ವೈದ್ಯರೇ ಜಜಾನ್ ನಲ್ಲಿರುವ ಅಲ್ ಶಾಯರಿಯ ಮನೆಗೆ ತೆರಳಿ ಅಲ್ಲೇ ಚಿಕಿತ್ಸೆ ನೀಡತೊಡಗಿದರು. ಸ್ವಲ್ಪ ಅಲುಗಾಡುವಂತಾದ ಮೇಲಷ್ಟೇ ಅಲ್ ಶಾಯರಿಯನ್ನು ರಿಯಾದ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಅಲ್ ಶಾಯರಿಯ ಈ ಹಿಂದೆ ಮೂರು ಹಾಸಿಗೆಗಳ ಮೇಲೆ ಬಿದ್ದುಕೊಳ್ಳುತ್ತಿದ್ದ. ಈಗ ಆರಾಮವಾಗಿ ಒಂದೇ ಹಾಸಿಗೆಯಲ್ಲಿ ಪವಡಿಸುತ್ತಾನೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications