Taliban: ತಾಲಿಬಾನ್ ಉಗ್ರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ರಷ್ಯಾ!
ತಾಲಿಬಾನ್ ಉಗ್ರರಿಗೆ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಇಷ್ಟು ದಿನ ಜಗತ್ತಿನಾದ್ಯಂತ ಉಗ್ರರು ಎಂಬ ಪಟ್ಟ ಕಟ್ಟಿಕೊಂಡು ಸುತ್ತಾಡುತ್ತಿದ್ದ ತಾಲಿಬಾನಿಗಳಿಗೆ ಇದೀಗ ಹೊಸ ಮನ್ವಂತರವೇ ಆರಂಭವಾಗಿದೆ. 2021 ರಲ್ಲಿ ತಾಲಿಬಾನಿಗಳ ಉಪಟಳ ತಡೆಯಲು ಆಗದೆ ಅಮೆರಿಕ ಅಲ್ಲಿಂದ ಎಸ್ಕೇಪ್ ಆದ ನಂತರ ಇದೇ ಮೊದಲ ಬಾರಿಗೆ ತಾಲಿಬಾನ್ ಉಗ್ರರಿಗೆ ಜಾಗತಿಕ ಮಟ್ಟದಲ್ಲೂ ಮನ್ನಣೆ ಸಿಗುತ್ತಿದೆ. ಈ ಮೂಲಕ ತಾಲಿಬಾನ್ ಉಗ್ರರಿಗೆ ರಷ್ಯಾ ಭರ್ಜರಿ ಸಿಹಿಸುದ್ದಿ ನೀಡಿದೆ. ಹಾಗಾದ್ರೆ ರಷ್ಯಾ ಕೊಟ್ಟಿರುವ ಗುಡ್ನ್ಯೂಸ್ ಏನು? ಅಫ್ಘಾನಿಸ್ತಾನದ ಆಡಳಿತ ನಡೆಸುತ್ತಿರುವ ತಾಲಿಬಾನಿಗಳಿಗೆ ಇದರಿಂದ ಏನು ಪ್ರಯೋಜನ?
ತಾಲಿಬಾನ್ ಅಲ್ಲ.. ಅಲ್ಲ.. ಈ ಹಾಡನ್ನು ನೀವು ಕೇಳಿಯೇ ಇರ್ತೀರಿ. ಪವರ್ ಸ್ಟಾರ್ ಬಿರುದು ಪಡೆದ ನಟ ಪುನೀತ್ ರಾಜ್ಕುಮಾರ್ ಅವರ ಸಿನಿಮಾದಲ್ಲಿ ಈ ಹಾಡಿನ ಸಾಲುಗಳು ಸಖತ್ ಸದ್ದು ಮಾಡಿದ್ದವು. ಹೀಗಿದ್ದಾಗ ತಾಲಿಬಾನ್ ಪದ ಕರ್ನಾಟಕದಲ್ಲಿ ಕೂಡ ಸಿಕ್ಕಾಪಟ್ಟೆ ಫೇಮಸ್ ಎನ್ನಬಹುದು. ತಾಲಿಬಾನ್ ಅಂದ್ರೆ ಜಗತ್ತಿನಾದ್ಯಂತ ಒಂದು ಕೆಟ್ಟ ಮನೋಭಾವ ಬೇಳೆದು, ದೊಡ್ಡ ಮಟ್ಟದ ಚರ್ಚೆ ಕೂಡ ನಡೆಯುತ್ತಿದೆ. ತಾಲಿಬಾನ್ ಹೆಸರಿನ ಜೊತೆಯಲ್ಲೇ ಉಗ್ರರು ಎಂಬ ಪದ ಕೂಡ ಬೆರೆತು ಹೋಗಿದೆ. ಇಂತಹ ಸಮಯದಲ್ಲೇ ರಷ್ಯಾ ಇದೀಗ ಗುಡ್ ನ್ಯೂಸ್ ಒಂದನ್ನ ತಾಲಿಬಾನ್ ಸರ್ಕಾರಕ್ಕೆ ನೀಡಲು ಸಜ್ಜಾಗಿದೆ!

ತಾಲಿಬಾನ್ ಉಗ್ರರು ಅಲ್ಲ.. ಅಲ್ಲ..!
ಹೌದು, ಅಮೆರಿಕದ ನಾಯಕರಿಗೆ ತಿರುಗೇಟು ನೀಡುವ ರೀತಿಯಲ್ಲಿ ಇದೀಗ ರಷ್ಯಾ ಸರ್ಕಾರ ಮಹತ್ವದ ತೀರ್ಮಾನ ಒಂದನ್ನ ತೆಗೆದುಕೊಂಡಿದೆ. ಆ ಪ್ರಕಾರ, ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ತಾಲಿಬಾನ್ ಗುಂಪನ್ನು ತೆಗೆದು ಹಾಕಲು ಇದೀಗ ರಷ್ಯಾ ನಿರ್ಧಾರ ಮಾಡಿದೆ. ಈ ಕುರಿತು ಇದೀಗ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದೇವೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಅಫ್ಘಾನಿಸ್ತಾನ ದೇಶದಲ್ಲಿ ಸರ್ಕಾರ ರಚನೆ ಮಾಡಿದ್ದರೂ, ತಾಲಿಬಾನ್ ಸಂಘಟನೆಗೆ ಉಗ್ರರು ಎಂಬ ಪಟ್ಟ ಹಾಗೇ ಇತ್ತು. ಆದರೆ ಇದೀಗ ಪ್ರಪಂಚದಲ್ಲೇ ಮೊದಲ ಬಾರಿಗೆ ರಷ್ಯಾ ಹೊಸ ನಿರ್ಧಾರ ಕೈಗೊಂಡಂತೆ ಕಾಣುತ್ತಿದೆ.
20 ವರ್ಷ ಹೋರಾಡಿದ್ದ ತಾಲಿಬಾನಿಗಳು!
ಸುಮಾರು 20 ವರ್ಷ ಸುದೀರ್ಘ ಹೋರಾಟದ ಬಳಿಕ 2021ರ ಆಗಸ್ಟ್ನಲ್ಲಿ ಅಮೆರಿಕ ಸಂಪೂರ್ಣ ಅಫ್ಘಾನಿಸ್ತಾನ ತೊರೆದು ಹೊರಬಂದಿತ್ತು. ಅಧ್ಯಕ್ಷ ಜೋ ಬೈಡನ್ ಆಗಿನ ಸಮಯಕ್ಕೆ, 2021 ರ ಆಗಸ್ಟ್ 31ನ್ನೇ ಡೆಡ್ಲೈನ್ ಆಗಿ ನೀಡಿ, ಅಮೆರಿಕದ ಸಂಪೂರ್ಣ ಸೇನೆ ಹೊರಗೆ ಕರೆಸಿಕೊಂಡರು. ಹೀಗೆ 3 ವರ್ಷಗಳಿಂದ ಇಡೀ ಅಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಬಿದ್ದಿದ್ದರೂ, ಜಾಗತಿಕವಾಗಿ ತಾಲಿಬಾನ್ ಯಾವುದೇ ರೀತಿಯ ಬೆಂಬಲ ಪಡೆಯುತ್ತಿಲ್ಲ, ಇಂತಹ ಸಮಯದಲ್ಲೇ ರಷ್ಯಾದ ಸರ್ಕಾರ ಈಗ ಮಹತ್ವದ ನಿರ್ಧಾರಕ್ಕೆ ಕೈಹಾಕಿದೆ. ತಾಲಿಬಾನ್ ಸಂಘಟನೆಯನ್ನು 'ಉಗ್ರರು' ಎಂಬ ಪಟ್ಟಿಯಿಂದ ಕೈಬಿಡಲು ಈಗ ನಿರ್ಧಾರ ಕೈಗೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ನಿರ್ಧಾರ ಯಾವ ರೀತಿ ಪರಿಣಾಮ ಬೀರಲಿದೆ? ಅನ್ನೋದನ್ನ ಕಾದು ನೋಡಬೇಕಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications