Putin India Visit: ಭಾರತ - ರಷ್ಯಾ ಮಾತುಕತೆ: ನ್ಯೂಕ್ಲಿಯರ್ ವಿಚಾರದಲ್ಲಿ ಭಾರತಕ್ಕೆ ಬಂಪರ್!
Putin India Visit: ಭಾರತ ಮತ್ತು ರಷ್ಯಾ ನಡುವೆ ಹಲವು ಪ್ರಮುಖ ಒಪ್ಪಂದಗಳು ಏರ್ಪಟ್ಟಿವೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಎರಡು ದಿನಗಳ ಕಾಲ ವಿಶೇಷ ಭೇಟಿ ನೀಡಿದ್ದಾರೆ. ಅಮೇರಿಕಾದ ವಿಪರೀತ ತೆರಿಗೆ, ಚೀನಾ ಉಪಟಳ ಹಾಗೂ ಪಾಕಿಸ್ತಾನದ ಕುತಂತ್ರಗಳ ನಡುವೆ ರಷ್ಯಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವ ಹಲವು ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದರ ನಡುವೆ ಪರಮಾಣ (ನ್ಯೂಕ್ಲಿಯರ್) ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಮೂರನೇ ರಿಯಾಕ್ಟರ್ನ ಆರಂಭಿಕ ಲೋಡ್ಗಾಗಿ ಪರಮಾಣು ಇಂಧನದ ಮೊದಲ ಹಂತದಲ್ಲಿ ಸರಕನ್ನು ತಲುಪಿಸಲಾಗಿದೆ ಎಂದು ರಷ್ಯಾದ ಸರ್ಕಾರಿ ಪರಮಾಣು ನಿಗಮ ಹೇಳಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸುವುದರೊಂದಿಗೆ ಪರಮಾಣು ಇಂಧನದ ವಿತರಣೆ ಒಪ್ಪಂದ ಏರ್ಪಟ್ಟಿದೆ.

ರೊಸಾಟಮ್ನ ಪರಮಾಣು ಇಂಧನ ವಿಭಾಗವು ನಿರ್ವಹಿಸುವ ಸರಕು ವಿಮಾನ ನೊವೊಸಿಬಿರ್ಸ್ಕ್ ಕೆಮಿಕಲ್ ಕಾನ್ಸೆಂಟ್ರೇಟ್ಸ್ ಪ್ಲಾಂಟ್ನಿಂದ ತಯಾರಿಸಲ್ಪಟ್ಟ ಇಂಧನ ಅಸೆಂಬ್ಲಿಗಳನ್ನು ಭಾರತದ ತಮಿಳುನಾಡಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ನಿಗಮವು ಹೇಳಿಕೆಯಲ್ಲಿ ತಿಳಿಸಿದೆ. ರಷ್ಯಾದಿಂದ ಒಟ್ಟು ಏಳು ವಿಮಾನಗಳು ಸಂಪೂರ್ಣ ರಿಯಾಕ್ಟರ್ ಕೋರ್ ಮತ್ತು ಕೆಲವು ಮೀಸಲು ಇಂಧನವನ್ನು ಪೂರೈಸಲು ಯೋಜಿಸಲಾಗಿದೆ.
2024 ರಲ್ಲಿ ಎರಡೂ ರಾಷ್ಟ್ರಗಳು ಸಹಿ ಮಾಡಿದ ಒಪ್ಪಂದದ ಅಡಿಯಲ್ಲಿ ಈಗ ಇಂಧನ ಸಾಗಾಣಿಕೆ ಆಗಿದೆ. ಇದರಲ್ಲಿ ಕೂಡಂಕುಳಂ ಸ್ಥಾವರದ ಮೂರನೇ ಮತ್ತು ನಾಲ್ಕನೇ VVER-1000 ರಿಯಾಕ್ಟರ್ಗಳಿಗೆ ಆರಂಭಿಕ ಲೋಡಿಂಗ್ನಿಂದ ಪ್ರಾರಂಭವಾಗುವ ಪೂರ್ಣ ಅವಧಿಗೆ ಇಂಧನ ಪೂರೈಕೆ ಮಾಡುವ ಒಪ್ಪಂದವೂ ಸಹ ಸೇರಿದೆ. ಕೂಡಂಕುಳಂ ಸ್ಥಾವರವು ಒಟ್ಟು 6,000 MW ಸಾಮರ್ಥ್ಯದೊಂದಿಗೆ ಆರು VVER-1000 ರಿಯಾಕ್ಟರ್ಗಳನ್ನು ಹೊಂದಿದೆ. ಕೂಡಂಕುಳಂನಲ್ಲಿರುವ ಮೊದಲ ಎರಡು ರಿಯಾಕ್ಟರ್ಗಳನ್ನು 2013 ಮತ್ತು 2016 ರಲ್ಲಿ ಭಾರತದ ವಿದ್ಯುತ್ ಗ್ರಿಡ್ಗೆ ಸಂಪರ್ಕಿಸಲಾಯಿತು. ಇನ್ನು ಇತರ ನಾಲ್ಕು ರಿಯಾಕ್ಟರ್ಗಳು ನಿರ್ಮಾಣ ಹಂತದಲ್ಲಿವೆ.
ಕೂಡಂಕುಳಂ ಸ್ಥಾವರದ ಮೊದಲ ಹಂತದಲ್ಲಿ ಈ ಎರಡು ರಿಯಾಕ್ಟರ್ಗಳ ಕಾರ್ಯಾಚರಣೆಯ ಸಮಯದಲ್ಲಿ, ರಷ್ಯಾದ ಮತ್ತು ಭಾರತೀಯ ಎಂಜಿನಿಯರ್ಗಳು ಸುಧಾರಿತ ಪರಮಾಣು ಇಂಧನ ಮತ್ತು ವಿಸ್ತೃತ ಇಂಧನ ಮಾದರಿಯನ್ನು ಪರಿಚಯಿಸುವ ಮೂಲಕ ಅವುಗಳ ದಕ್ಷತೆಯನ್ನು ಹೆಚ್ಚಿಸಲು ಗಣನೀಯ ಕೆಲಸ ಮಾಡಿದ್ದಾರೆ ಎಂದು ರೊಸಾಟಮ್ ಹೇಳಿದೆ.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು












Click it and Unblock the Notifications