ಡಯಾನಾ ಮಗನಿಗೆ ನೀಡಿದ್ದಳು ರಹಸ್ಯ ಸಂದೇಶ
ಲಂಡನ್, ಸೆ.29: ರಾಜಕುಮಾರಿ' ಡಯಾನಾ ಸಾವಿನ ನಿಗೂಢತೆ ಇನ್ನೂ ಮುಂದುವರೆದಿರುವಂತೆ ಆಕೆ ತನ್ನ ಪುತ್ರನಿಗೆ ರಹಸ್ಯ ಸಂದೇಶ ಕಳಿಸಲು ಡಯಾನಾ ಮುಂದಾಗಿದ್ದರು ಎಂಬ ಸತ್ಯ ಬಹಿರಂಗಗೊಂಡಿದೆ.
ಪ್ರಿನ್ಸ್ ವಿಲಯಂ ಹಾಗೂ ಆತನ ಭವಿಷ್ಯದ ಕುಟುಂಬಕ್ಕಾಗಿ ಕೆಲವು ಹಿತ ವಾಕ್ಯಗಳು ಸೇರಿದಂತೆ ಮಾರ್ಗದರ್ಶನಗಳನ್ನು ಡಯಾನಾ ನೀಡಿದ್ದರು ಎನ್ನಲಾಗಿದೆ. ಇದರಿಂದ ಜೀವ ಭಯ ಎದುರಿಸುತ್ತಿದ್ದ ಡಯಾನಾ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿತ್ತೇ ಎಂಬ ಪ್ರಶ್ನೆ ಎದ್ದಿದೆ. ತಾನು ಅಕಾಲಿಕ ಮರಣ ಹೊಂದಿದರೆ ಈ ಸಂದೇಶಗಳ ಟೇಪ್ ನನ್ನ ಮಗ ವಿಲಿಯಂ ಕೈ ಸೇರಲಿ ಎಂದು ಡಯಾನಾ ಹೇಳಿದ್ದರು ಎನ್ನಲಾಗಿದೆ.
ಯುಕೆಯ ಡೈಲಿಸ್ಟಾರ್ ವರದಿಯಂತೆ, ತನ್ನ ಮಕ್ಕಳ ಭವಿಷ್ಯದ ಬಗ್ಗೆ ತುಂಬಾ ಕಾಳಜಿವಹಿಸಿದ್ದ ಡಯಾನಾ, ಈ ರೀತಿ ಒಂದು ಟೇಪ್ ಮುದ್ರಿಸಿದ್ದರು ಎಂದು ಯುಎಸ್ ಮ್ಯಾಗಜೀನ್ ದಿ ಗ್ಲೋಬ್ ವರದಿ ಮಾಡಿದೆ. ಡಯಾನಾ ಅವರ ಆಪ್ತರಿಗೆ ಮಾತ್ರ ಈ ಬಗ್ಗೆ ತಿಳಿದಿತ್ತು ಎನ್ನಲಾಗಿದೆ.

ನನಗೋಸ್ಕರ ನಿಮ್ಮ ಮಕ್ಕಳನ್ನು ಚೆನ್ನಾಗಿ ಬೆಳಸಿ, ಅವರನ್ನು ನಾನು ತುಂಬಾ ಪ್ರೀತಿಸುತ್ತೇನೆ, ವಿಲಿಯಂ ಪತ್ನಿ ಸುಂದರಿ, ಚತುರೆಯಾಗಿದ್ದು, ಸ್ವತಂತ್ರ ವ್ಯಕ್ತಿತ್ವ ಹೊಂದಿರಬೇಕು ಎಂದು ಡಯಾನಾ ಬಯಸಿದ್ದರು ಎಂದು ಟೇಪ್ ಮೂಲಕ ತಿಳಿದು ಬಂದಿದೆ.
ಈ ಟೇಪ್ ಮೂಲಕ ಡಯಾನಾ ಅವರ ಸಾವಿನ ರಹಸ್ಯ ಮತ್ತೊಮ್ಮೆ ಬಿಚ್ಚಿಕೊಳ್ಳುವ ಸಾಧ್ಯತೆಯಿದೆ. ಡಯಾನಾ ಅವರು ಸಾವಿನ ಭಯ ಎದುರಿಸುತ್ತಿದ್ದರೆ ಅವರ ಸಾವು ಅಪಘಾತವಲ್ಲ, ಕೊಲೆ ಎಂಬ ವಾದಕ್ಕೆ ಮತ್ತೆ ಜೀವ ಬರುವ ನಿರೀಕ್ಷೆಯಿದೆ.
ಡಯಾನಾಳ ಬಾಡಿಗಾರ್ಡ್ ಕೆನ್ ವಾರ್ಫ್ ಬರೆದಿರುವ Diana: Closely Guarded Secret ಕೃತಿಯಲ್ಲೂ ಈ ಬಗ್ಗೆ ಕೆಲವು ಉಲ್ಲೇಖಗಳಿತ್ತು. ಈಗ ಈ ಕೃತಿಯ ಆಧಾರದ ಮೇಲೆ ಸ್ಟೀಫನ್ ಎವನ್ಸ್ ಚಿತ್ರ ನಿರ್ಮಿಸುತ್ತಿದ್ದಾರೆ. ರಾಜಕುಮಾರಿ ಡಯನಾಳಾ ಪಾತ್ರದಲ್ಲಿ ಎಮಿಲಿ ಬ್ಲಂಟ್ ಸಿದ್ದಳಾಗುತ್ತಿದ್ದಾಳೆ.
1997ರ ಆಗಸ್ಟ್ 31ರಂದು ನಡೆದ ಅಪಘಾತದಲ್ಲಿ ಡಯಾನಾ ಮತ್ತು ಫಾಯೆದ್ ಸಾವನ್ನಪ್ಪಿರುವುದರ ಹಿಂದೆ ಪಿತೂರಿಗಳು ನಡೆದಿರುವ ಸಾಧ್ಯತೆಗಳಿವೆ. ಈ ಅಪಘಾತದಲ್ಲಿ ಡಯಾನಾ ಪ್ರಿಯಕರ ಎಂದು ಹೇಳಲಾಗಿರುವ ದೋಡಿ ಕೂಡ ಮೃತರಾಗಿದ್ದರು. ಇದಕ್ಕೂ ಮುಂಚೆ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಂದ ಡಯಾನಾ ವಿಚ್ಛೇದನ ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. (ಐಎಎನ್ ಎಸ್)
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications