ದೇವರ ಬಗ್ಗೆ ಪೋಪ್ ಬಾಯ್ಬಿಟ್ಟ ಸತ್ಯವೇನು?
ರೋಮ್, ಅ.29: ಡಾರ್ವಿನ್ನಿನ ವಿಕಾಸವಾದ ಮತ್ತು ಬಿಗ್ ಬ್ಯಾಂಗ್ ಸಿದ್ಧಾಂತಗಳು ನಿಜ. ಜಗತ್ತು ದೇವರ ಸೃಷ್ಟಿ ಎನ್ನಲಾಗುವುದಿಲ್ಲ ದೇವರೇನು ಮಾಂತ್ರಿಕನಲ್ಲ ಎಂದು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ನೀಡಿರುವ ಹೇಳಿಕೆ ಈಗ ಚರ್ಚಾಸ್ಪದವಾಗಿದೆ.
ಪೊಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸ್ ನಲ್ಲಿ ಪೋಪ್ ಬೆನೆಡಿಕ್ಟ್ XVI ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ದೇವರ ಕುರಿತು ನಾವು ಚಿಂತಿಸುವಾಗ ಆತನೊಬ್ಬ ಮಾಂತ್ರಿಕ. ಮಂತ್ರದಂಡ ಹಿಡಿದು ಇಡೀ ವಿಶ್ವವನ್ನು ದೇವರೊಬ್ಬನೇ ಸೃಷ್ಟಿಸಿದನು ಎಂದು ತಿಳಿದಿದ್ದೇವೆ. ಆದರೆ ಇದು ನಿಜವಲ್ಲ ಎಂದಿದ್ದಾರೆ. [ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು?]

ಮಾನವ ಮತ್ತು ಇತರ ಜೀವ ಸಂಕುಲದ ಬೆಳವಣಿಗೆಯೂ ಸಹ ವಿಕಾಸವಾದ ಪ್ರತಿಪಾದಿಸಿದ ರೀತಿಯಲ್ಲಿ ಆಗಿದೆಯೇ ಹೊರತು, ಎಲ್ಲವೂ ಒಮ್ಮಿಂದೊಮ್ಮೆಲೆ ಸೃಷ್ಟಿಯಾಗಿಲ್ಲ. ಸೃಷ್ಟಿ ನಿಯಮ ಕುರಿತ ದೈವಿಕ ಸಿದ್ಧಾಂತಗಳು ಕೇವಲ ಕಾಲ್ಪನಿಕ.ದೇವರು ಮಾನವರನ್ನು ಸೃಷ್ಟಿಸಿದ ಹಾಗೂ ಆಂತರಿಕ ನಿಯಮಗಳಂತೆ ಅಭಿವೃದ್ಧಿ ಹೊಂದಲು ಬಿಟ್ಟ. ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವಂತೆ ಈ ನಿಯಮಗಳನ್ನು ಅವನು ಎಲ್ಲರಿಗೂ ಕೊಟ್ಟನು ಎಂದು ಹೇಳುವ ಮೂಲಕ ಚಾರ್ಲ್ಸ್ ಡಾರ್ವಿನ್ ವಿಕಾಸವಾದಕ್ಕೆ ಪುಷ್ಟಿ ನೀಡುವ ಮಾತುಗಳನ್ನಾಡಿದ್ದರು.[ದೇವಕಣ ವಿಶ್ವವನ್ನೇ ನಾಶ ಮಾಡಬಲ್ಲದೆ?]
ಪೋಪ್ ಅವರ ಹೇಳಿಕೆಯಿಂದ ವೈಜ್ಞಾನಿಕ ವಾದಗಳನ್ನು ತಿರಸ್ಕರಿಸುತ್ತಾ ಬಂದಿದ್ದ ಕ್ಯಾಥೋಲಿಕ್ ಚರ್ಚ್, ತನ್ನ ಮತ್ತೊಂದು ನಂಬಿಕೆಯನ್ನು ಬದಲಿಸಿಕೊಂಡಿದೆಯೇ? ವಿಕಾಸವಾದ, ಬಿಗ್ ಬ್ಯಾಂಗ್ ಥಿಯರಿ ಒಪ್ಪಿಕೊಳ್ಳುವ ಮೂಲಕ ಭೂಮಿಯ ವೈಜ್ಞಾನಿಕ ಹುಟ್ಟಿನ ರಹಸ್ಯಕ್ಕೆ ತಲೆಬಾಗಿದೆಯೆ? ಇದರಿಂದಾಗಿ ದೇವರ ಬಗ್ಗೆ ಕ್ರೈಸ್ತರಲ್ಲಿರುವ ನಂಬಿಕೆ ಬದಲಾಗುತ್ತದೆಯೆ? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ.[ಹಸ್ತಮೈಥುನ, ಸಲಿಂಗಕಾಮಕ್ಕೆ ವ್ಯಾಟಿಕನ್ ಗರಂ]
ಭೂಮಿ ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ಸಿದ್ದಾಂತ ಪ್ರತಿಪಾದಿಸಿದ್ದ ಖಗೋಳ ವಿಜ್ಞಾನಿ ಗೆಲಿಲಿಯೊಗೆ 'ದೈವನಿಂದನೆ' ಸಿದ್ಧಾಂತವನ್ನು ಹಿಂದಕ್ಕೆ ಪಡೆಯುವಂತೆ ಗೆ ಚರ್ಚ್ ಒತ್ತಡ ಹೇರಿ ಬಹಿಷ್ಕರಿಸಿದ್ದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಅದರೆ, ಈಗ ಚರ್ಚ್ ನಂಬಿಕೆಗಳು ಬದಲಾವಣೆಯ ಹಾದಿ ಹಿಡಿಯುವಂಥ ಹೇಳಿಕೆಗಳನ್ನು ಪೋಪ್ ನೀಡಿದ್ದಾರೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications