ಪುಲ್ವಾಮಾ ದಾಳಿ: ಮುಷ್ರಫ್ ನೀಡಿದ ಶಾಕಿಂಗ್ ಹೇಳಿಕೆಯಿಂದ ಪಾಕ್ ಮುಖಭಂಗ!
Recommended Video

ಇಸ್ಲಾಮಾಬಾದ್, ಮಾರ್ಚ್ 07: ಪುಲ್ವಾಮಾ ದಾಳಿಯನ್ನು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೂಲಕ ಪಾಕಿಸ್ತಾನ ಇಂಟರ್ ಸರ್ವಿಸ್ ಇಂಟಲಿಜೆನ್ಸ್(ಐಎಸ್ ಐ) ಮಾಡಿಸಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ಹೇಳಿರುವುದು ಪಾಕಿಸ್ತಾನಕ್ಕೆ ಭಾರೀ ಆಘಾತವನ್ನುಂಟು ಮಾಡಿದೆ.
'ಹಮ್ ಟಿವಿ ಡಿಜಿಟಲ್' ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮುಷ್ರಫ್ ಈ ರೀತಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಗುಪ್ತಚರ ಇಲಾಖೆಯಾಗಿರುವ ಐಎಸ್ ಐ, ಭಾರತದ ವಿರುದ್ಧ ತಾನೇ ಉಗ್ರದಾಳಿ ಮಾಡಿಸಿದೆ, ಅದಕ್ಕಾಗಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಬಳಸಿಕೊಂಡಿದೆ ಎಂಬ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲೂ ತಲ್ಲಣ ಸೃಷ್ಟಿಸಿದೆ.

ಮುಷ್ರಫ್ ಮಾತು ಸತ್ಯವಾದರೆ..?
ಮುಷ್ರಫ್ ಅವರು ಹೇಳಿದಂತೆ ಪಾಕಿಸ್ತಾನದ ಐಎಸ್ ಐಯು ಜೆಇ ಎಂ ಮೂಲಕ ಭಾರತದ ವಿರುದ್ಧ ದಾಳಿ ನಡೆಸಿರುವುದು ಸತ್ಯವಾದರೆ ಪಾಕಿಸ್ತಾನ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ತಾನು ಭಯೋತ್ಪಾದನೆಯ ವಿರೋಧಿ ಎನ್ನುತ್ತ ಹಲವು ಉಗ್ರ ಸಂಘಟನೆಗಳಿಗೆ ನಿಷೇಧ ಹೇರುವ ನಾಟಕವನ್ನು ಮಾಡುತ್ತಲೇ, ಪಾಕ್ ಸರ್ಕಾರದ ಅಂಗವೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತದೆ ಎಂದಾದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ.

ಜೆಇಎಂ ಗೆ ಪಾಕ್ ಬೆಂಬಲ ಸ್ಪಷ್ಟ
ಪಾಕಿಸ್ತಾನದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಅಸ್ತಿತ್ವದಲ್ಲೇ ಇಲ್ಲ' ಎಂದು ಬುಧವಾರ ಐಎಸ್ ಐ ನೀಡಿದ ಹೇಳಿಕೆಯನ್ನು ನೋಡಿದರೆ, ಐಎಸ್ ಐಯು ಜೆಇಎಂ ನ ಬೆಂಬಲಕ್ಕೆ ನಿಂತಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅದಕ್ಕೆ ಪೂರಕ ಎಂಬಂತೆ ಮುಷ್ರಫ್ ನೀಡಿದ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಪುಲ್ವಾಮ ದಾಳಿಯಲ್ಲಿ ಜೆಇಎಂ ಕೈವಾಡ ಒಪ್ಪಿದ್ದ ಮುಷ್ರಫ್
ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ಜೈಷ್ ಇ ಮೊಹಮ್ಮದ್ ಉಗ್ರರ ಕೈವಾಡವಿರುವುದು ಸತ್ಯ. ಆದರೆ ಪಾಕಿಸ್ತಾನದ ಕೈವಾಡ ಇದರಲ್ಲಿಲ್ಲ. ಪಾಕಿಸ್ತಾನ ಅಮಾಯಕ. ಆದರೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯೇ ಈ ದಾಳಿಯನ್ನು ನಡೆಸಿದೆ ಎಂದು ಮುಷ್ರಫ್ ಹೇಳಿದ್ದರು. ಈ ಮೂಲಕ ಪಾಕಿಸ್ತಾನವೇ ನೆಲೆ ನೀಡಿದ ಜೆಇಎಂ ನಿಂದಲೇ ದಾಳಿ ನಡೆದಿದೆ ಎಂದು ಒಪ್ಪಿಕೊಂಡಿದ್ದರು.

ಮತ್ತೀಗ ಬದಲಾದ ಹೇಳಿಕೆ!
ಅಂದು ಪಾಕಿಸ್ತಾನ ಅಮಾಯಕ ಎಂದಿದ್ದ ಮುಷ್ರಫ್, ಇದೀಗ ಐಎಸ್ ಐ ಕೈವಾಡವಿದೆ ಎನ್ನುತ್ತಿದ್ದಾರೆ! "ನೀವ್ಯಾಕೆ ಪಾಕಿಸ್ತಾನದ ವಿಷಯದಲ್ಲಿ ತಲೆಹಾಕುತ್ತೀರಿ? ಪಾಕಿಸ್ತಾನವನ್ನು ಎರಡು ಭಾಗ(ಪಾಕಿಸ್ತಾನ-ಬಾಂಗ್ಲಾದೇಶ) ಮಾಡಲು ನೀವೇಕೆ ಸಹಾಯ ಮಾಡಿದಿರಿ? ನೀವು ಫ್ರಾನ್ಸ್ ಮತ್ತು ಅಮೆರಿಕದ ಬೆಂಬಲದಿಂದಾಗಗಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಪ್ರತ್ನಿಸುತ್ತಿದ್ದೀರಿ" ಎಂದು ಭಾರತದ ವಿರುದ್ಧ ಕಿಡಿಕಾರಿದ್ದ ಮುಷ್ರಫ್, ಇದೀಗ ಐಎಸ್ಐ ಮೂಲಕವೇ ಪುಲ್ವಾಮಾ ದಾಳಿ ನಡೆದಿದೆ ಎನ್ನುತ್ತಿದ್ದಾರೆ. ಈಗ ಪಾಕಿಸ್ತಾನವನ್ನು ಅವರು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ?
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications