ಪಾಕಿಸ್ತಾನ ಮಾಜಿ ಪ್ರಧಾನಿಗೆ ಸಿಗುತ್ತಾ ಜೈಲಿನಿಂದ ಮುಕ್ತಿ?
ಪಾಕಿಸ್ತಾನ ಅನ್ನೋ ಹೆಸರಲ್ಲೇ ನೂರಾರು ಸಮಸ್ಯೆ ಇದೆ ಅಂತಾ ಕಾಣುತ್ತೆ, ಯಾಕಂದ್ರೆ ಈ ದೇಶ ಸಾಲು ಸಾಲು ಸಮಸ್ಯೆಗಳನ್ನ ಸೃಷ್ಟಿಸಿಕೊಂಡು ಒದ್ದಾಡುತ್ತಿದೆ. ಅಲ್ಲಿನ ಜನರು ಒಂದು ಹೊತ್ತು ನೆಮ್ಮದಿಯಾಗಿ ಊಟ ಮಾಡಲು ಕೂಡ ಆಗುತ್ತಿಲ್ಲ. ಇನ್ನು ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಗಬ್ಬೆದ್ದು ಹೋಗಿದ್ದು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಕಂಬಿ ಹಿಂದೆ ತಳ್ಳಲಾಗಿದೆ. ಆದರೆ ಈಗ, ಒಂದೊಂದೇ ಪ್ರಕರಣದಲ್ಲಿ ಇಮ್ರಾನ್ ಖಾನ್ ರಿಲೀಫ್ ಪಡೆದು ನಿಟ್ಟುಸಿರು ಬಿಡುತ್ತಿದ್ದಾರೆ.
ಹೌದು, 2023ರ ಮೇ 9 ರಂದು ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗ 2 ಕೇಸ್ನಲ್ಲಿ ಇಮ್ರಾನ್ ಖಾನ್ ರಿಲೀಫ್ ಪಡೆದಿದ್ದಾರೆ. ಸಾಕ್ಷ್ಯಗಳ ಕೊರತೆ ಕಾರಣಕ್ಕೆ ಪಾಕ್ ನ್ಯಾಯಾಲಯ ಇದೀಗ ಇಮ್ರಾನ್ ಖಾನ್ ಅವರನ್ನು ಖುಲಾಸೆ ಮಾಡಿದ್ದು. ಪಿಟಿಐ ಅಂದ್ರೆ ಪಾಕಿಸ್ತಾನ್-ಎ-ಇಸ್ಸಾಫ್ ಪಕ್ಷದ ಸಂಸ್ಥಾಪಕ ಕೂಡ ಆಗಿರುವ ಇಮ್ರಾನ್ ಖಾನ್ ಪರೋಕ್ಷವಾಗಿ ಹಿಂಸಾಚಾರಕ್ಕೆ ಬೆಂಬಲ ನೀಡಿದ್ದರು, ಹಾಗೇ ಇಮ್ರಾನ್ ಅವರ ಬಂಬಲಿಗರು ಸಾರ್ವಜನಿಕ ಸ್ವತ್ತಿಗೆಲ್ಲಾ ಹಾನಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿತ್ತು. ಆದರೆ ಆರೋಪದಿಂದ ಇಮ್ರಾನ್ ಈಗ ಮುಕ್ತರಾಗಿದ್ದಾರೆ.

ಪಾಕ್ ಸೇನೆ ಮೇಲೆಯೂ ಅಟ್ಯಾಕ್
ಪಾಕಿಸ್ತಾನದಲ್ಲಿ 2023ರ ಮೇ 9 ರಂದು ನಡೆದಿದ್ದ ಹಿಂಸಾಚಾರ ಜಗತ್ತಿನ ಮೂಲೆ ಮೂಲೆಯಲ್ಲಿ ಸದ್ದು ಮಾಡಿತ್ತು. ಅದರಲ್ಲೂ ಸೇನಾ ತುಕಡಿಗಳ ಮೇಲೆ ಕೂಡ ಅಟ್ಯಾಕ್ ಮಾಡಲಾಗಿದ್ದು ಇದರ ಹಿಂದೆ ಮಾಜಿ ಪ್ರಧಾನಿ ಇಮ್ರಾನ್ ಬೆಂಬಲ ಕೂಡ ಇದೆ ಎಂಬ ಆರೋಪ ಮಾಡಿತ್ತು ಪಾಕಿಸ್ತಾನದ ಸೇನೆ.
ಆದ್ರೆ ಇದೀಗ ಒಂದೊಂದೇ ಕೇಸ್ನಲ್ಲಿ ಮುಕ್ತಿ ಪಡೆಯುತ್ತಿದ್ದಾರೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್. ಈ ಮೂಲಕ, ಇಮ್ರಾನ್ ಖಾನ್ ಜೈಲಿನಿಂದ ರಿಲೀಸ್ ಆಗಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಇಮ್ರಾನ್ ಖಾನ್ ಈಗ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿದ್ದು, ಇತ್ತೀಚೆಗೆ ಇತರ 2 ಕೇಸ್ನಲ್ಲಿ ಕೂಡ ರಿಲೀಫ್ ಪಡೆದಿದ್ದರು.

ಧ್ವಂಸ ಪ್ರಕರಣಗಳಲ್ಲಿ ರಿಲೀಫ್!
ಕೆಲ ದಿನಗಳ ಹಿಂದೆ 2 ಧ್ವಂಸ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಾರ್ಟಿ ಲೀಡರ್ಸ್ಗೆ ದೊಡ್ಡ ರಿಲೀಫ್ ಸಿಕ್ಕಿತ್ತು. ಇಸ್ಲಾಮಾಬಾದ್ ಜಿಲ್ಲಾ, ಸೆಷನ್ಸ್ ನ್ಯಾಯಾಲಯವು ಈ ಕೇಸ್ನ ಬಗ್ಗೆ ಮಹತ್ವದ ತೀರ್ಪು ನೀಡಿ ಇಮ್ರಾನ್ ಖಾನ್ ಸಹಿತ ಅವರ ಪಕ್ಷದ ನಾಯಕರಿಗೆ ರಿಲೀಫ್ ನಿಡಿತ್ತು.
2022ರ ಮಾರ್ಚ್ನಲ್ಲಿ ರ್ಯಾಲಿ ನಡೆದಿತ್ತು, ಈ ವೇಳೆ ನಡೆದಿದ್ದ ಧ್ವಂಸ ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಅವರಿಗೆ ರಿಲೀಫ್ ಸಿಕ್ಕಿತ್ತು. ಕರಾಚಿ ಠಾಣೆ ಸೇರಿ ಒಟ್ಟು 2 ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ಕೇಸ್ ರಿಜಿಸ್ಟಾರ್ ಆಗಿತ್ತು. ಇದೀಗ ಮತ್ತೆ ಎರಡು ಕೇಸ್ನಲ್ಲಿ ಖುಲಾಸೆಯಾಗಿದ್ದು, ಇಮ್ರಾನ್ ವಿರುದ್ಧ ನೂರಾರು ಕೇಸ್ಗಳು ಇವೆ. ಈ ಎಲ್ಲಾ ಪ್ರಕರಣದಲ್ಲೂ ಅವರಿಗೆ ರಿಲೀಫ್ ಸಿಗಬೇಕಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications