ಪಾಕಿಸ್ತಾನದ ಹೊಸ ವರಸೆ, ಇಸ್ಲಾಮಾಬಾದ್ ಬಾಂಬ್ ಸ್ಫೋಟಕ್ಕೆ ಅಫ್ಘಾನಿಸ್ತಾನ ಕಾರಣ ಅಂತೆ!
ಪಾಕಿಸ್ತಾನ ಅಂದ್ರೆ ಸುಳ್ಳು... ಪಾಕಿಸ್ತಾನ ಅಂದ್ರೆ ಬರೀ ಓಳು... ಪಾಕಿಸ್ತಾನ ಮಾಡುವ ಎಲ್ಲಾ ರೀತಿ ಎಡವಟ್ಟು ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಲೇ ಇರುತ್ತದೆ. ಯಾಕಂದ್ರೆ ಪಾಕಿಸ್ತಾನ ಅಷ್ಟು ಕೆಟ್ಟ ಹೆಸರು ಪಡೆದಿದೆ. ಹೀಗಿದ್ದರೂ ತನ್ನ ವರಸೆ ಬದಲಾಯಿಸಿಕೊಳ್ಳದ ಈ ದೇಶ ಇದೀಗ ಮತ್ತೊಂದು ಕಿರಿಕ್ ತೆಗೆದು, ತನ್ನ ದೇಶದಲ್ಲಿ ತಾನೇ ಸಾಕಿದ ಉಗ್ರರು ನಡೆಸಿದ ದಾಳಿಗೆ ಇದೀಗ ಬೇರೆ ದೇಶವನ್ನು ಹೊಣೆ ಮಾಡಲು ಮುಂದೆ ನುಗ್ಗಿದೆ. ಇದೇ ವಿಚಾರ ಈಗ ಹೊಸ ಕಿಚ್ಚು ಹೊತ್ತಿಕೊಳ್ಳಲು ಕಾರಣವಾಗಿದೆ.
ಉಗ್ರರ ತವರು ಎಂಬ ಕೆಟ್ಟ ಹೆಸರು ಪಡೆದಿರುವ ಪಾಕಿಸ್ತಾನದಲ್ಲಿ ಕೆಲವು ದಿನಗಳ ಹಿಂದೆ ಭೀಕರ ಘಟನೆ ಸಂಭವಿಸಿತ್ತು. ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣ ಬಳಿ ಸಂಭವಿಸಿದ್ದ ಭೀಕರ ಸ್ಫೋಟದ ಪರಿಣಾಮ 12 ಜನರು ಮೃತಪಟ್ಟಿದ್ದು, ಸುಮಾರು 20 ರಿಂದ 25 ಜನ ಗಾಯಗೊಂಡಿದ್ದರು. ಭಾರತದ ರಾಜಧಾನಿ ದೆಹಲಿ ಹೃದಯ ಭಾಗದಲ್ಲಿ ಭೀಕರ ಬ್ಲಾಸ್ಟ್ ಆದ ನಂತರ ಪಾಕಿಸ್ತಾನದಲ್ಲೂ ಭೀಕರವಾಗಿ ಬ್ಲಾಸ್ಟ್ ಆಗಿದ್ದು ಚರ್ಚೆಗೆ ಗ್ರಾಸವಾಗಿ, ಪಾಕಿಸ್ತಾನ ಬೇಕು ಅಂತಲೇ ತನ್ನ ನೆಲದಲ್ಲಿ ಈ ಕೃತ್ಯ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿತ್ತು. ಕೊನೆಗೆ ಈ ದಾಳಿ ವಿಚಾರವನ್ನು ಭಾರತದ ತಲೆಗೆ ಕಟ್ಟಲು ಬಂದಿದ್ದ ಪಾಪಿ ಪಾಕಿಸ್ತಾನ ಈಗ ಮತ್ತೆ ತಾಲಿಬಾನ್ ವಿರುದ್ಧ ವಾಗ್ದಾಳಿ ಮಾಡುತ್ತಿದೆ!

ತಾಲಿಬಾನ್ ವಿರುದ್ಧ ಪಾಕಿಸ್ತಾನ ಆರೋಪ
ಹೌದು, ಪಾಕಿಸ್ತಾನದಲ್ಲಿ ಇರುವ ತಾಲಿಬಾನ್ ಸಂಘಟನೆ ಇಸ್ಲಾಮಾಬಾದ್ ಭಾಗದಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಕಾರಣ ಎಂದು ಆರೋಪ ಮಾಡಲಾಗಿದೆ. ಈ ವಿಚಾರ ಇದೀಗ ಮತ್ತೆ ಸಂಚಲನ ಸೃಷ್ಟಿ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಕೂಡ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹಾಗೇ ಇನ್ನೊಂದು ಕಡೆಯಲ್ಲಿ ಉಗ್ರರ ತವರು ಎಂಬ ಕೆಟ್ಟ ಪಟ್ಟ ಕಟ್ಟಿಕೊಂಡಿರುವ ಪಾಕಿಸ್ತಾನ ಬದಲಾಗುವುದಿಲ್ಲ ಅನ್ನೋದು ಗೊತ್ತಾಗುತ್ತಿದೆ. ಹಾಗೇ ತನ್ನ ಜಾಗದಲ್ಲೇ ಉಗ್ರರನ್ನ ಬೆಳೆಸಿಕೊಂಡು ನರಳುತ್ತಿರುವ ಪಾಕಿಸ್ತಾನ ಹೀಗೆ ನಾಶವಾಗಿ ಹೋಗುವ ಮುನ್ಸೂಚನೆ ಕೂಡ ಇದೆ.
ಒಟ್ನಲ್ಲಿ ಪಾಕಿಸ್ತಾನ ಒಂದು ವಿಷಜಂತು ರೀತಿ ಅಕ್ಕಪಕ್ಕದ ದೇಶಗಳನ್ನು ಕಾಡುತ್ತಿದೆ. ಹಾಗೇ ಪಾಕಿಸ್ತಾನದ ಈ ಕೃತ್ಯದಿಂದ ಅಪ್ಘಾನಿಸ್ತಾನ ಕೂಡ ರೊಚ್ಚಿಗೆದ್ದು ಇತ್ತೀಚೆಗೆ ದಾಳಿ ಮಾಡಿತ್ತು. ಅಲ್ಲದೆ ಭಾರತಕ್ಕೆ ಕೂಡ ಭಾರಿ ದೊಡ್ಡ ಸಮಸ್ಯೆಯನ್ನ ಮಾಡುತ್ತಿದೆ ಪಾಪಿ ಪಾಕಿಸ್ತಾನದ ಸೇನೆ. ಹೀಗಾಗಿ ಜಾಗತಿಕವಾಗಿ ಕೂಡ ಪಾಕಿಸ್ತಾನ ದೊಡ್ಡ ಮಟ್ಟದಲ್ಲಿ ಕೆಟ್ಟ ಹೆಸರು ಪಡೆಯುತ್ತಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications