ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮತ್ತೆ ತಾಲಿಬಾನ್ ಎಂಟ್ರಿ ಗ್ಯಾರಂಟಿ?
ತಾಲಿಬಾನ್ & ಪಾಕಿಸ್ತಾನ ನಡುವೆ ಕೆಲವು ವಾರಗಳ ಹಿಂದೆ ದೊಡ್ಡ ಗಲಾಟೆ ನಡೆದಿತ್ತು, ಹೀಗೆ ಇಬ್ಬರೂ ಬಡಿದಾಡಿಕೊಂಡು ಹತ್ತಾರು ಜೀವಗಳು ಕೂಡ ಬಲಿಯಾಗಿದ್ದವು. ಅಲ್ಲದೆ ಪಾಪಿ ಪಾಕ್ ತಾನು ಮಾಡಿದ ಕೃತ್ಯಕ್ಕೆ ಸರಿಯಾಗಿ ಪಾಠ ಕೂಡ ಕಲಿತಿದೆ. ಪರಿಸ್ಥಿತಿ ಇಷ್ಟೆಲ್ಲಾ ವಿನಾಶಕಾರಿಯಾಗಿ ಇರುವಾಗ ಮತ್ತೆ ಇಬ್ಬರ ನಡುವೆ ಯುದ್ಧ ಶುರುವಾಗುತ್ತಾ? ಎಂಬ ಆತಂಕ ಕೂಡ ಇದ್ದೇ ಇದೆ. ಹೀಗಿದ್ದಾಗ ದಿಢೀರ್ ಪಾಕಿಸ್ತಾನದ ರಾಜಕಾರಣಿಗಳು ಡಿಸೈನ್ ಡಿಸೈನ್ ಹೇಳಿಕೆಯನ್ನು ನೀಡುತ್ತಿದ್ದು, ತಾಲಿಬಾನ್ ಕೂಡ ಪಾಕಿಸ್ತಾನ ವಿರುದ್ಧ ಮತ್ತೆ ರೊಚ್ಚಿಗೆದ್ದಿದೆ.
ಯಾರು ಎಷ್ಟೇ ಹೇಳಲಿ ಪಾಕಿಸ್ತಾನದ ಬುದ್ಧಿ ಮಾತ್ರ ಬದಲಾಗುವುದಿಲ್ಲ, ಹಾಗೇ ಪಾಕಿಸ್ತಾನ ತನ್ನ ಅಕ್ಕಪಕ್ಕದ ದೇಶಗಳ ಜೊತೆಗೆ ಕಿರಿಕ್ ತೆಗೆಯುವುದು ಕೂಡ ನಿಲ್ಲುವುದಿಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಅದರಲ್ಲೂ ತಾಲಿಬಾನ್ ಹಾಗೂ ಅಫ್ಘಾನಿಸ್ತಾನ ಜೊತೆಗೆ ರಾಜಿ ಮಾಡಿಕೊಳ್ಳುವ ಮಾತು ಆಡುತ್ತಲೇ ಬೆನ್ನಿಗೆ ಚೂರಿ ಹಾಕುವ ಪ್ರಯತ್ನ ಕೂಡ ಪಾಕಿಸ್ತಾನ ಕಡೆಯಿಂದ ಈಗ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ. ಹಾಗೇ ಪಾಕಿಸ್ತಾನದ ಈ ನಡೆ ವಿರುದ್ಧ ತಾಲಿಬಾನ್ ಕೂಡ ರೊಚ್ಚಿಗೆದ್ದು ಕೂತಿದ್ದು, ಇನ್ನೊಮ್ಮೆ ಯುದ್ಧದ ಆತಂಕ ಗಡಿ ಭಾಗದಲ್ಲಿ ಇದೀಗ ಆವರಿಸಿದೆ.

ಗುಪ್ತವಾಗಿ ದಾಳಿಗೆ ಪಾಕಿಸ್ತಾನ ಪ್ಲಾನ್?
ಒಂದು ಕಡೆ ತಾಲಿಬಾನ್ ಜೊತೆಗೆ ಮಾತುಕತೆ ಮಾಡಿ & ಸಂಘರ್ಷ ಸರಿ ಮಾಡಲು ಸಿದ್ಧ ಅಂತಾ ಹೇಳುತ್ತಿರುವ ಪಾಕಿಸ್ತಾನ, ಇನ್ನೊಂದು ಕಡೆ ಗುಟ್ಟಾಗಿ ದಾಳಿ ಮಾಡಲು ಸ್ಕೆಚ್ ಹಾಕಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಹಾಗೇ ಪಾಕಿಸ್ತಾನದ ಈ ರೀತಿಯ ಬುದ್ಧಿ ಬಗ್ಗೆ ಮೊದಲೇ ಚನ್ನಾಗಿ ಅರಿತಿರುವ ತಾಲಿಬಾನ್ ಪಡೆಗಳು ಹಾಗೂ ಅಪ್ಘಾನಿಸ್ತಾನದ ಯೋಧರು ಪಾಕ್ ದಾಳಿಗೆ ಪ್ರತ್ಯುತ್ತರ ಕೊಡಲು ಸಜ್ಜಾಗಿದ್ದಾರೆ. ಎಲ್ಲಾ ಇನ್ನೇನು ಸರಿ ಆಯ್ತು, ನೆಮ್ಮದಿ ನೆಲೆಸಲಿದೆ ಎನ್ನುವಾಗಲೇ ಈ ರೀತಿಯಾಗಿ ಪಾಕಿಸ್ತಾನ ಮತ್ತೆ ಕುತಂತ್ರ ಮಾಡುತ್ತಿರುವ ಆರೋಪ ಸಂಚಲನ ಸೃಷ್ಟಿ ಮಾಡಿದೆ.
ಗಡಿ ಭಾಗದಲ್ಲಿ ಮತ್ತೆ ಸೂಕ್ಷ್ಮ ಪರಿಸ್ಥಿತಿ
ಒಟ್ನಲ್ಲಿ ತಾಲಿಬಾನ್ ವಿರುದ್ಧ ಸಂಘರ್ಷಕ್ಕೆ ಇಳಿದು ಪಾಕಿಸ್ತಾನ ದೊಡ್ಡ ತಪ್ಪನ್ನೇ ಮಾಡಿಕೊಂಡಿದೆ. ಅದರಲ್ಲೂ ಭಾರತದ ಜೊತೆಗೆ ಉತ್ತಮ ಸ್ನೇಹ ಹೊಂದಿರುವ ತಾಲಿಬಾನ್ ಸರ್ಕಾರದ ವಿರುದ್ಧ ಈ ರೀತಿ ಪದೇ ಪದೇ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿ ತೋರಿಸುತ್ತಿದೆ, ಅಲ್ಲದೆ ಪಾಕ್ ಮಾಡ್ತಿರುವ ಇಂತಹ ಕೃತ್ಯಗಳಿಂದ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಅಫ್ಘಾನಿಸ್ತಾನ ಗಡಿ ಭಾಗದಲ್ಲಿ ಸೃಷ್ಟಿ ಆಗುತ್ತಿದೆ. ಹೀಗಾಗಿ ಇಬ್ಬರ ನಡುವಿನ ಈ ತಿಕ್ಕಾಟವು ಯಾವಾಗ ನಿಲ್ಲಲಿದೆ? ಎಂಬುದನ್ನ ಕಾದು ನೋಡಬೇಕಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications