Taliban Fight: ಕಾಬೂಲ್ ಮೇಲೆ ಬಾಂಬ್ ದಾಳಿ ನಡೆಸಿದ ಪಾಕಿಸ್ತಾನ ಸೇನೆ, ರೊಚ್ಚಿಗೆದ್ದ ತಾಲಿಬಾನ್
ಅಫ್ಘಾನಿಸ್ತಾನ ಮೇಲೆ ಹೇಗಾದರೂ ಮಾಡಿ ಹಿಡಿತ ಸಾಧಿಸಬೇಕು ಅನ್ನೋ ಹಠದಲ್ಲಿ ಪಾಕಿಸ್ತಾನ ಈಗ ನೇರವಾಗಿ ದಾಳಿ ಮಾಡುತ್ತಿದೆ. ಕೆಲವು ದಿನಗಳಿಂದ ಪಾಕಿಸ್ತಾನ & ಅಫ್ಘಾನಿಸ್ತಾನ ಗಡಿಯಲ್ಲಿ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಇಬ್ಬರ ನಡುವೆ ಶಾಂತಿ ಕಾಪಾಡಲು ಸ್ವತಃ ಸೌದಿ ಅರೇಬಿಯಾ ಮುಂದೆ ಬಂದು ಸಂಧಾನ ಮಾಡಿದ್ದರೂ ಅದು ಪ್ರಯೋಜನಕ್ಕೆ ಬಂದಿಲ್ಲ. ಇಷ್ಟೆಲ್ಲದರ ನಡುವೆ ದಿಢೀರ್ ಪಾಕಿಸ್ತಾನದ ಸೇನೆ ಅಫ್ಘಾನಿಸ್ತಾನದ ಕಾಬೂಲ್ ನಗರಕ್ಕೆ ನುಗ್ಗಿ ಭೀಕರವಾಗಿ ಬಾಂಬ್ ದಾಳಿ ನಡೆಸಿದೆ ಎಂಬ ಭಾರಿ ಗಂಭೀರ ಆರೋಪ ಮಾಡಲಾಗಿದೆ.
ಹೌದು, ಕಾಬೂಲ್ ನಗರದ ವಸತಿ ಪ್ರದೇಶದ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ ಪಾಪಿ ಪಾಕಿಸ್ತಾನ ಸೇನೆ ಎಂದು ಆರೋಪಿಸಲಾಗಿದೆ. ಆದರೆ ಈ ರೀತಿ ತಮ್ಮ ಮೇಲೆ ದಾಳಿ ನಡೆದಿದೆ ಅನ್ನೋದನ್ನ ಈಗ ಒಪ್ಪಿಕೊಳ್ಳಲು ತಾಲಿಬಾನ್ ಆಡಳಿತ ಸಿದ್ಧವಿಲ್ಲ. ಹೀಗಾಗಿ ಪಾಕಿಸ್ತಾನ ವಿರುದ್ಧ ತಾನು ಕೂಡ ಭೀಕರ ದಾಳಿ ನಡೆಸಲು ಈಗ ತಾಲಿಬಾನ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಮತ್ತೊಂದು ಕಡೆ ಈ ಬೆಳವಣಿಗೆಗಳ ಬೆನ್ನಲ್ಲೇ ಎರಡೂ ದೇಶಗಳ ಅಕ್ಕಪಕ್ಕದ ಗಡಿಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲಾ ರೀತಿ ಪರಿಸ್ಥಿತಿ ನಿಭಾಯಿಸಲು ವಿಶ್ವಸಂಸ್ಥೆ ಕೂಡ ಸಜ್ಜಾಗಬೇಕಿದೆ.

ನರಿ ಬುದ್ಧಿ ಪಾಕಿಸ್ತಾನದ ಕಿರಿಕ್
ಪಾಕಿಸ್ತಾನ ಅಂದ್ರೆ ಗೋಸುಂಬೆ ಇದ್ದಂತೆ ಅನ್ನೋ ಆರೋಪ ಇದೆ, ಪದೇ ಪದೇ ಇದು ಪ್ರೂವ್ ಆಗಿದೆ. ಜಗತ್ತಿನಲ್ಲಿ ಯಾರನ್ನು ಬೇಕಾದರೂ ನಂಬಬಹುದು, ಆದರೆ ಪಾಕಿಸ್ತಾನವನ್ನು ಇಡೀ ಜಗತ್ತಿನಲ್ಲಿ ಯಾರು ಕೂಡ ನಂಬಲು ಸಿದ್ಧವಿಲ್ಲ. ಚೀನಾ ಕೂಡ ಈ ವಿಚಾರದಲ್ಲಿ ಪಾಕಿಸ್ತಾನ ಎಂಬ ನರಿ ಬುದ್ಧಿಯ ದೇಶವನ್ನ ನಂಬಲಾರದು. ತಿಂದ ಮನೆಗೇ ಬೆಂಕಿ ಇಡುವ ಬುದ್ಧಿ ಪಾಕಿಸ್ತಾನ ರಾಜಕಾರಣಿಗಳದ್ದು, ಹೀಗೆ ಪಾಕಿಸ್ತಾನ ತನ್ನ ನೆರೆ ದೇಶಗಳ ಜೊತೆ ಸುಖಾಸುಮ್ಮನೆ ಕಿರಿಕ್ ಮಾಡಿ ಫೈಟ್ ಮಾಡುವುದು ಮಾಮೂಲಿ.
ಭಾರತ ಸೇನೆಯಿಂದ ಸಿಗುತ್ತಾ ಬೆಂಬಲ?
ಅದ್ರಲ್ಲೂ ಇದೇ ರೀತಿ ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನ ನೆಲದ ಮೇಲೂ ದಾಳಿ ಮಾಡಿ, ಕಿರಿಕ್ ಮಾಡಿತ್ತು ಪಾಪಿ ಪಾಕ್. ಈಗ ದಿಢೀರ್ ಕಾಬೂಲ್ ನಗರದ ವಸತಿ ಪ್ರದೇಶದ ಮೇಲೆ ಬಾಂಬ್ ದಾಳಿಯನ್ನ ಮಾಡಿದ ಆರೋಪವನ್ನ ಎದುರಿಸುತ್ತಿದ್ದು, ಈ ಕುರಿತು ತಾಲಿಬಾನ್ ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇನ್ನು ಕೆಲವೇ ದಿನಗಳಲ್ಲಿ ಭೀಕರ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ. ಹೀಗಿದ್ದರೂ, ವಾಯುಸೇನೆಯ ವಿಚಾರದಲ್ಲಿ ಪಾಕ್ ಸೇನೆಯಷ್ಟು ತಾಲಿಬಾನ್ ಬಲಿಷ್ಠವಾಗಿಲ್ಲ, ಹೀಗಾಗಿ ಅಫ್ಘಾನ್ಗೆ ಭಾರತ ಸಾಥ್ ಕೊಡುತ್ತಾ? ಈ ಮೂಲಕ, ತನ್ನ ಶತ್ರು ಪಾಕಿಸ್ತಾನವನ್ನು ಭಾರತ ನಾಶ ಮಾಡುತ್ತಾ? ಅನ್ನೋ ಚರ್ಚೆ ಶುರುವಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications