ಭಾರತವನ್ನ ಗ್ರೇಟ್ ಎಂದ ಪಾಕಿಸ್ತಾನ: ಪಾಕ್ ಮಾಜಿ ಪ್ರಧಾನಿ ಹೇಳಿದ್ದೇನು?
ಭಾರತ ಈಗ ಬಲಿಷ್ಠವಾಗಿ ಬೆಳೆಯುತ್ತಿದೆ. 1947ರಲ್ಲಿ ಸ್ವಾತಂತ್ರ್ಯ ಪಡೆದಿದ್ದ ಭಾರತ ಹಂತ ಹಂತವಾಗಿ ಮೇಲೆ ಬರುತ್ತಿದೆ. ಅದರಲ್ಲೂ ಕಳೆದ 20 ವರ್ಷದಲ್ಲಿ, ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಇಸ್ರೋ' ದೊಡ್ಡ ಸಾಧನೆ ಮಾಡುತ್ತಿದೆ. ಹೀಗಿದ್ದಾಗ ನೆರೆಯ ದೇಶ ಹಾಗೂ ಭಾರತದ ಶತ್ರು ಪಾಕಿಸ್ತಾನ ಮಾತ್ರ ಇಂದಿಗೂ ತುತ್ತು ಅನ್ನಕ್ಕಾಗಿ ಪರದಾಡುತ್ತಿದೆ. ಇದೇ ಸಮಯದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಭಾರತವನ್ನು ಹೊಗಳಿದ್ದಾರೆ.
ಭಾರತ 'ಚಂದ್ರಯಾನ-3' ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ರೋವರ್ನ ಇಳಿಸಿದೆ. ಈ ಬಗ್ಗೆ ಜಗತ್ತೇ ಹೆಮ್ಮೆ ವ್ಯಕ್ತಪಡಿಸಿದೆ. ಆದರೂ ಭಾರತ ಮಾಡಿದ ಸಾಧನೆಯ ಬಗ್ಗೆ ಪಾಕಿಸ್ತಾನ ದೇಶದ ಕೆಲ ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡಿ ಸುಮ್ಮನಾಗಿದ್ದರು. ಹೀಗಿದ್ದಾಗ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಭಾರತವನ್ನು ಹೊಗಳಿದ್ದರು. ಈಗ ಮತ್ತೆ ತಮ್ಮ ಅದೇ ಮಾತನ್ನು ರಿಪೀಟ್ ಮಾಡಿರುವ ನವಾಜ್ ಷರೀಫ್, ಪರೋಕ್ಷವಾಗಿ ಭಾರತವು ಗ್ರೇಟ್ ಅಂತಾ ಹೇಳಿದ್ದಾರೆ. ಹಾಗಾದರೆ ಅಸಲಿಗೆ ನವಾಜ್ ಷರೀಫ್ ಹೇಳಿದ್ದು ಏನು?

ಭಾರತವನ್ನು ಗ್ರೇಟ್ ಎಂದ ಪಾಕಿಸ್ತಾನ!
ಪಾಕಿಸ್ತಾನದಲ್ಲಿ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಮುಂದಿನ ವರ್ಷ ಫೆಬ್ರವರಿಯಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಪಾಕಿಸ್ತಾನ ರಾಜಕಾರಣಿಗಳು ಇದೀಗ ಪ್ರಚಾರದ ಭರಾಟೆಯಲ್ಲಿ ಬ್ಯುಸಿ ಆಗಿದ್ದಾರೆ. ಹೀಗಿದ್ದಾಗಲೇ ಇಸ್ಲಾಮಾಬಾದ್ನ ಪಿಎಂಎಲ್-ಎನ್ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ನವಾಜ್ ಷರೀಫ್ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಪಾಕಿಸ್ತಾನದ ಶೋಚನೀಯ ಪರಿಸ್ಥಿತಿ ಬಗ್ಗೆ ಹೇಳಿಕೆ ನೀಡಿದ್ದಾರೆ. 'ನಮ್ಮ ನೆರೆ ದೇಶಗಳೆಲ್ಲಾ ಚಂದ್ರನ ಕಡೆಗೆ ತಲುಪಿವೆ. ಆದರೂ ಪಾಕಿಸ್ತಾನಕ್ಕೆ ಇನ್ನೂ ಕೂಡಾ ನೆಲದಿಂದಲೇ ಎದ್ದೇಳಲು ಸಾಧ್ಯ ಆಗುತ್ತಿಲ್ಲ' ಎಂದಿದ್ದಾರೆ ನವಾಜ್ ಷರೀಫ್.
ಪಾಕಿಸ್ತಾನದ ಬಗ್ಗೆ ನವಾಜ್ ಆಕ್ರೋಶ
ಅಲ್ಲದೆ ಇದೇ ವೇಳೆ ಪಾಕಿಸ್ತಾನದ ಈಗಿನ ಪರಿಸ್ಥಿತಿ ಬಗ್ಗೆಯೂ ರೊಚ್ಚಿಗೆದ್ದು ಮಾತನಾಡಿದ ನವಾಜ್ ಷರೀಫ್ ಅವರು, ನಮ್ಮ ಪತನಕ್ಕೆ ನಾವೇ ಹೊಣೆ ಆಗಿದ್ದೇವೆ. ಅಕಸ್ಮಾತ್ ಹೀಗೆಲ್ಲಾ ಆಗದೇ ಇದ್ದಿದ್ದರೆ, ನಾವು ಬೇರೆ ಯಾವುದೋ ಸ್ಥಾನದಲ್ಲಿ ಇರಬೇಕಿತ್ತು. 2013 ರಲ್ಲಿ ನಾವು ವಿದ್ಯುತ್ ಅಭಾವ ಎದುರಿಸಿದ್ದೆವು. ನಾವು ಅಧಿಕಾರಕ್ಕೇರಿದ ಬಳಿಕ ಅದಕ್ಕೆ ಕೊನೆಹಾಡಿದ್ದೇವೆ ಎಂದು ಇದೇ ವೇಳೆ ನವಾಜ್ ಷರೀಫ್ ತಿಳಿಸಿದರು. ಈ ಮೂಲಕ ವಿರೋಧ ಪಕ್ಷಗಳಿಗೆ ತಮ್ಮ ಮಾತುಗಳಿಂದ ಕುಟುಕಿದ್ದಾರೆ ನವಾಜ್ ಷರೀಫ್.

ಇಮ್ರಾನ್ ಖಾನ್ ವಿರುದ್ಧ ಸಿಟ್ಟು?
ದೇಶಾದ್ಯಂತ ಭಯೋತ್ಪಾದನೆ ಅಂತ್ಯ ಮಾಡಿದ್ದೇವೆ. ಕರಾಚಿಯಲ್ಲಿ ಶಾಂತಿಯ ಮತ್ತೆ ಸ್ಥಾಪನೆ ಮಾಡಿದ್ದೇವೆ. ಹೆದ್ದಾರಿ ನಿರ್ಮಿಸಿದ್ದೆವು. ಚೀನಾ & ಪಾಕ್ ಕಾರಿಡಾರ್ ಯೋಜನೆಯು ಬಂತು. ಅಭಿವೃದ್ಧಿ ಹಾಗೂ ಸಮೃದ್ಧಿಯ ಹೊಸ ಯುಗ ಆರಂಭವಾಗಿತ್ತು' ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್. ಇದೇ ವೇಳೆ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಅಲ್ಲಿದ್ದ ಜನ ಪಾಕ್ ಮಾಜಿ ಪ್ರಧಾನಿಯ ಈ ಮಾತಿಗೆ ಶಿಳ್ಳೆ & ಚಪ್ಪಾಳೆ ಹಾಕಿ ಸ್ವಾಗತಿಸಿದರು.
'ನಮ್ಮ ಕಾಲಿಗೆ ನಾವೇ ಗುಂಡು ಹಾರಿಸಿದ್ದೇವೆ'
ಹಾಗೇ ತಮ್ಮ ಮಾತು ಮುಂದುವರಿಸಿದ ನವಾಜ್ ಷರೀಫ್, ಪಾಕಿಸ್ತಾನ ಈಗ ಎದುರಿಸುತ್ತಿರುವ ಸಮಸ್ಯೆಗೆ ಯಾರನ್ನು ಬೈಯಬೇಕಿದೆ? ನೀವೇ ಹೇಳಿ ಅಂತಾ ಜನರನ್ನೇ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ, 'ನಮ್ಮ ಕಾಲಿಗೆ ನಾವೇ ಗುಂಡು ಹಾರಿಸಿದ್ದೇವೆ' ಎಂದೂ ಅವರು ಹೇಳಿದ್ದಾರೆ. ಹಾಗೇ 2014 ರಲ್ಲಿ ತಮ್ಮ ಸರಕಾರದ ಆಡಳಿತದಲ್ಲಿ ಹಣದುಬ್ಬರ ಅತ್ಯಂತ ಕೆಳಮಟ್ಟದಲ್ಲಿತ್ತು. ಆಗ ಇಸ್ಲಾಮಾಬಾದ್ನಲ್ಲಿ ಪಾಕ್ನ 2 ರೂಪಾಯಿಗೆ ಸಿಗುತ್ತಿದ್ದ ರೋಟಿ ಈಗ ಪಾಕಿಸ್ತಾನದ 30 ರೂಪಾಯಿಗೆ ತಲುಪಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ಭರ್ಜರಿಯಾಗಿ ಚುನಾವಣಾ ಪ್ರಚಾರ ಮುಂದುವರಿಸಿದ್ದಾರೆ ನವಾಜ್ ಷರೀಫ್.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications