ಮದುವೆ ನಾಟಕವಾಡಿ 11 ಮಂದಿಗೆ ನಾಮವಿಟ್ಟ ಥಾಯ್ಲೆಂಡ್ ಹುಡ್ಗಿ
ಥಾಯ್ಲೆಂಡ್ ನ ಈ ಹುಡುಗಿಯ ವಂಚನೆ ಪುರಾಣ ಮಜವಾಗಿದೆ. ಆದರೆ ಈಕೆಯಿಂದ ಮೋಸ ಹೋದವರ ಸ್ಥಿತಿ ನೆನಪಿಸಿಕೊಂಡರೆ ಅಯ್ಯೋ ಪಾಪ ಅನಿಸುತ್ತದೆ. ಆಕೆ ಒಂದರ ಹಿಂದೆ ಒಂದರಂತೆ ಒಟ್ಟು ಹನ್ನೊಂದು ಪುರುಷರನ್ನು ಮದುವೆಯಾಗಿ, ಆ ನಂತರ ದುಡ್ದಿನ ಜತೆಗೆ ನಾಪತ್ತೆ ಆಗಿದ್ದಾಳೆ. ಪ್ರತಿಯೊಬ್ಬರಿಗೂ ಆರರಿಂದ ಹನ್ನೊಂದು ಸಾವಿರ ಅಮೆರಿಕನ್ ಡಾಲರ್ ನಾಮ ಹಾಕಿದ್ದಾಳೆ.
ತನ್ನ ಕುಟುಂಬಕ್ಕೆ ಹಣ ವಾಪಸ್ ಮಾಡಬೇಕು ಎಂಬುದು ಸೇರಿದ ಹಾಗೆ ನಾನಾ ನೆಪಗಳನ್ನು ಹೇಳಿ ಒಬ್ಬೊಬ್ಬರಿಗೂ ವಂಚಿಸಿದ್ದಾಳೆ. ಈಕೆ ಎಂಥ ಚಾಲಾಕಿ ಅಂದರೆ ಆಗಸ್ಟ್ ತಿಂಗಳೊಂದರಲ್ಲೇ ನಾಲ್ಕು ಮಂದಿಯನ್ನು ಮದುವೆಯಾಗಿದ್ದಾಳೆ. ಪೊಲೀಸರ ಮಾಹಿತಿ ಪ್ರಕಾರ ಒಟ್ಟು ಹನ್ನೊಂದು ಮಂದಿಯನ್ನು ಮದುವೆಯಾಗಿದ್ದಾಳೆ.

ಯಾವಾಗ ಈಕೆ ಬಗ್ಗೆ ಫೇಸ್ ಬುಕ್ ನಲ್ಲಿ ಎಚ್ಚರಿಕೆಯ ಪೋಸ್ಟ್ ವೊಂದು ಪ್ರಕಟವಾಯಿತೋ ಆಗ ಎಲ್ಲವೂ ಬಯಲಿಗೆ ಬಂದಿದೆ. ಆದರೆ ಈ ಪೋಸ್ಟ್ ಹಾಕಿದವರು ಯಾರು ಎಂದು ಮಾತ್ರ ಗೊತ್ತಾಗಿಲ್ಲ. ಈ ಪೋಸ್ಟ್ ನೋಡಿದ ನಂತರ ಮೋಸಕ್ಕೊಳಗಾದವರು ಪೊಲೀಸರ ಬಳಿ ತೆರಳಿ ತಮ್ಮ ಕಥೆಗಳನ್ನು ಹೇಳಿಕೊಂಡಿದ್ದಾರೆ.
ಅವಳು ಫೇಸ್ ಬುಕ್ ನಲ್ಲೇ ಪುರುಷರನ್ನು ಹುಡುಕಿಕೊಳ್ಳುತ್ತಿದ್ದಳಂತೆ. ಆ ನಂತರ ಅವರನ್ನು ಭೇಟಿಯಾಗಿ, ದೈಹಿಕ ಸಂಪರ್ಕ ಬೆಳೆಸಿ, ಆಮೇಲೆ ಹಣದ ಜತೆಗೆ ಪರಾರಿಯಾಗುತ್ತಿದ್ದಳಂತೆ. ಸದ್ಯಕ್ಕೆ ಆಕೆ ವಿರುದ್ಧ ತನಿಖೆ ಜಾರಿಯಲ್ಲಿದೆ.
ಆದರೆ, ಆ ಮಹಿಳೆಗೆ ಮೋಸ ಮಾಡುವ ಉದ್ದೇಶವಿರಲಿಲ್ಲ. ಮದುವೆ ಆಗಿದ್ದು ಏಳೇ ಮಂದಿಯನ್ನು ಹನ್ನೊಂದಲ್ಲ. ಆಕೆ ಕುಟುಂಬದವರು ನಡೆಸುವ ಹಣ್ಣಿನ ವ್ಯಾಪಾರದಲ್ಲಿ ಅವರೆಲ್ಲ ತಾವಾಗಿಯೇ ಹಣ ತೊಡಗಿಸಿದರು ಎಂಬ ಸುದ್ದಿ ಕೂಡ ಇದೆ.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications