ಸರ್ವಾಧಿಕಾರಿ ಅಥವಾ ಸೈಕೋಪಾತ್? ದಕ್ಷಿಣ ಕೊರಿಯಾಗೆ ನಿಲ್ಲುತ್ತಿಲ್ಲ ಕಿರುಕುಳ!
ಕಿಮ್ ಜಾಂಗ್ ಉನ್ ಮಾಡುತ್ತಿರುವ ಕಿರಿಕ್ ಈಗ ಮತ್ತಷ್ಟು ಜೋರಾಗಿದ್ದು, ಇದರಿಂದ ಇಡೀ ದಕ್ಷಿಣ ಕೊರಿಯಾ ನಲುಗಿ ಹೋಗಿದೆ. ಇಷ್ಟುದಿನ ಬಾಂಬ್ & ಮಿಸೈಲ್ ತೋರಿಸಿ ಬೆದರಿಕೆ ಹಾಕುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಈಗ, ಶತ್ರು ದೇಶಕ್ಕೆ ಕಸ ಕಳುಹಿಸಿ ಹಿಂಸೆ ನೀಡುತ್ತಿದ್ದಾನೆ. ಈ ಮೂಲಕ ಕಿಮ್ ಜಾಂಗ್ ಉನ್ & ಶತ್ರುಗಳ ನಡುವಿನ ತಿಕ್ಕಾಟ ಮತ್ತಷ್ಟು ಜೋರಾಗಿದೆ.
ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾಗೆ ದೊಡ್ಡ ದೊಡ್ಡ ಬಲೂನ್ ಬಳಸಿ ಕಸ ಕಳುಹಿಸಿದ್ದ. ಈ ಘಟನೆ ಇನ್ನೂ ಹಸಿಯಾಗಿ ಇರುವಾಗಲೇ ಮತ್ತೊಮ್ಮೆ ಅಂತಹದ್ದೇ ಕೃತ್ಯ ಎಸಗಿದ್ದಾನೆ ಕಿಮ್ ಜಾಂಗ್ ಉನ್. ಈ ಬಾರಿ ಬರೋಬ್ಬರಿ 600 ಕಸ ತುಂಬಿದ ಬಲೂನ್ ಹಾರಿಸಿದ್ದು. ದಕ್ಷಿಣ ಕೊರಿಯಾದ ಗಡಿಯಲ್ಲಿ ಬಂದು ಬಿದ್ದಿವೆ. ಇದು ದಕ್ಷಿಣ ಕೊರಿಯಾ ಜನರಲ್ಲಿ ಆತಂಕವನ್ನ ಕೂಡ ಹೆಚ್ಚಿಸಿದೆ. ಯಾಕಂದ್ರೆ ಬಲೂನ್ ಮೂಲಕ ಬಂದ ಕಸದಲ್ಲಿ ಏನೇನು ಇದೆಯೋ? ಎಂಬ ಆತಂಕ ಆವರಿಸಿದೆ. ಮತ್ತೊಂದು ಕಡೆ ಅಮೆರಿಕ ಕೂಡ ಈ ಘಟನೆ ಕುರಿತು ಮಾಹಿತಿ ಪಡೆದಿದೆ ಎನ್ನಲಾಗಿದೆ.

ಶಾಕ್ ಮೇಲೆ ಶಾಕ್ ಕೊಟ್ಟ!
ಕಳೆದ ಬಾರಿ ಹೀಗೆ 'ಬಲೂನ್' ಹಾರಿ ಬಂದಿದ್ದನ್ನು ನೋಡಿ ದಕ್ಷಿಣ ಕೊರಿಯಾ ನಡುಗಿತ್ತು. ಉತ್ತರ ಕೊರಿಯಾ ಹೀಗೆ ಕಸ ತುಂಬಿದ ಬಲೂನ್ಗಳ ರಾಶಿಯನ್ನೇ ತನ್ನ ಮೇಲೆ ಸುರಿದಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್ ಆಗಿತ್ತು ದಕ್ಷಿಣ ಕೊರಿಯಾ. ಕೂಡಲೇ ಆ ಕಸದಲ್ಲಿ ಇರುವ ವಸ್ತುಗಳನ್ನ ಪರಿಶೀಲನೆ ಮಾಡಿತ್ತು. ಆದ್ರೆ ಮೇಲ್ನೋಟಕ್ಕೆ ಕಸದ ಚೀಲಗಳಲ್ಲಿ ಹಾನಿಗೊಳಗಾದ ವಸ್ತು, ಪೇಪರ್ ಪೀಸ್, ಪ್ಲಾಸ್ಟಿಕ್ ಬಾಟಲಿ, ಬ್ಯಾಟರಿ, ಗೊಬ್ಬರ, ಶೂ ಬಿಡಿಭಾಗ ಸೇರಿದಂತೆ ಬೇಡವಾದ ವಸ್ತುಗಳೇ ಕಂಡುಬಂದಿದ್ದವು.
ಕಸದ ಪರಿಶೀಲನೆ ನಡೆಯುತ್ತಿದೆ!
ಹೀಗಿದ್ದರೂ ಎಲ್ಲಾ ವಸ್ತುಗಳನ್ನ ಸಂಗ್ರಹ ಮಾಡಿರುವ ದಕ್ಷಿಣ ಕೊರಿಯಾ, ಅದನ್ನ ಪರಿಶೀಲನೆ ಮಾಡುತ್ತಿದೆ. ಈ ಸಮಯದಲ್ಲಿ ಮತ್ತಷ್ಟು ಕಸ ತುಂಬಿದ ಚೀಲಗಳನ್ನು ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ ಮೇಲೆ ಎಸೆದಿದ್ದಾನೆ. ಇದು ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವಂತೆ ಮಾಡುತ್ತಿದೆ. ಮತ್ತೊಂದು ಕಡೆ ಇದೇ ವಿಚಾರ ಎರಡೂ ದೇಶಗಳ ನಡುವೆ ಮತ್ತಷ್ಟು ಕಿರಿಕ್ ಮಾಡಿಸುವ ಮುನ್ಸೂಚನೆ ನೀಡುತ್ತಿದೆ. ದಕ್ಷಿಣ ಕೊರಿಯಾ & ಉತ್ತರ ಕೊರಿಯಾ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ತಿಕ್ಕಾಟವು ಮತ್ತೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications