ಮಂಗಳನ ಅಂಗಳದಲ್ಲಿ ಉಪ್ಪು ನೀರಿದೆ : ನಾಸಾ
ಬೆಂಗಳೂರು, ಸೆಪ್ಟೆಂಬರ್ 29 : ಮಂಗಳ ಗ್ರಹದ ಅಂಗಳದಲ್ಲಿ ನೀರಿನ ಅಂಶವಿರುವುದಕ್ಕೆ ಖಚಿತವಾದ ದಾಖಲೆಗಳು ಲಭ್ಯವಾಗಿವೆ ಎಂದು ನಾಸಾ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಮಾರ್ಸ್ ರಿಕಾನಿಸನ್ಸ್ ಆರ್ಬಿಟ್ ನೌಕೆ ಈ ಕುರಿತು ಮಾಹಿತಿಗಳನ್ನು ಸಂಗ್ರಹಣೆ ಮಾಡಿದೆ.
ಮಂಗಳನ ಅಧ್ಯಯನಕ್ಕೆ ಕಳಿಸಲಾದ ಮಾರ್ಸ್ ರಿಕಾನಿಸನ್ಸ್ ಆರ್ಬಿಟ್ ನೌಕೆಯು ಪರ್ಕ್ಲೋರೇಟ್ಸ್ ಎಂದು ಕರೆಯಲಾಗುವ ಹೈಡ್ರೇಟ್ ಸಾಲ್ಟ್ಗಳನ್ನು ಗುರುತಿಸಿದೆ. ಈ ಹೈಡ್ರೇಟ್ ಸಾಲ್ಟ್ಗಳು ಮೈನಸ್ 70 ಡಿಗ್ರಿ ಉಷ್ಣಾಂಶದಲ್ಲಿಯೂ ನೀರು ಘನೀಕರಣಗೊಳ್ಳದಂತೆ ತಡೆಯ ಬಲ್ಲವು ಎಂಬುದು ವಿಜ್ಞಾನಿಗಳ ವಾದ. [ಮಂಗಳನ ಅಂಗಳದಲ್ಲಿ ನೀರಿದೆ]

'ಮಂಗಳನ ಅಧ್ಯಯನದಲ್ಲಿ ಇಂದೊಂದು ಮಹತ್ವದ ಬೆಳವಣಿಗೆಯಾಗಿದೆ. ಸಂಶೋಧನೆ ಪ್ರಕಾರ ಮಂಗಳನ ಅಂಗಳದಲ್ಲಿ ನೀರಿದೆ ಎಂಬ ಅಂಶ ಪತ್ತೆಯಾಗಿದೆ' ಎಂದು ನಾಸಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. [ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]
This image shows dark streaks from flow of briny liquid water on Mars: http://t.co/lp6Der5qbe #MarsAnnouncement pic.twitter.com/4D3isI2zyj
— NASA (@NASA) September 28, 2015 2011ರಲ್ಲಿ ಲುಜೇಂದ್ರ ಓಝಾ ಎಂಬ ಪಿಎಚ್ಡಿ ವಿದ್ಯಾರ್ಥಿ ಚಿತ್ರಗಳ ಸಹಾಯದಿಂದ ಮಂಗಳನ ಅಂಗಳದಲ್ಲಿ ಉಪ್ಪುನೀರಿನ ಅಂಶವಿರುವ ಬಗ್ಗೆ ಮೊದಲು ಹೇಳಿದ್ದರು. ಈಗ ಈ ಕುರಿತು ಖಚಿತವಾದ ದಾಖಲೆ ಲಭ್ಯವಾಗಿದೆ.
Dark, narrow streaks formed by seasonal water flow on modern-day Mars: http://t.co/hYX3XGaK01 #MarsAnnouncement pic.twitter.com/egPmFNT9eD
— NASA (@NASA) September 28, 2015 2015ರ ಏಪ್ರಿಲ್ನಲ್ಲಿ ಮಂಗಳನ ಮೇಲ್ಪದರದಲ್ಲಿ ನೀರಿನ ಅಂಶ ಪತ್ತೆಯಾಗಿದೆ ಎಂದು ನಾಸಾ ಹೇಳಿತ್ತು. ಮೊದಲು ಮಂಗಳ ಗ್ರಹದಲ್ಲಿ ಅಪಾರ ಪ್ರಮಾಣದ ಮಂಜುಗಡ್ಡೆ ಪದರಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಆದರೆ, ನಂತರ ದ್ರವ ರೂಪದಲ್ಲಿಯೇ ನೀರು ಪತ್ತೆಯಾಗಿದೆ. ಮಣ್ಣಿನಲ್ಲಿ ನೀರಿನ ಅಂಶ ಪತ್ತೆಯಾಗಿದ್ದು ಇದು ಅಪಾರ ಪ್ರಮಾಣದ ಲವಣಾಂಶದಿಂದ ಕೂಡಿದೆ ಎಂದು ವಿಜ್ಞಾನಿಗಳು ಹೇಳಿದ್ದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications