Get Updates
Get notified of breaking news, exclusive insights, and must-see stories!

ಆರ್ಥಿಕ ಕುಸಿತ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ, ನೀರಿನ ಅಭಾವದತ್ತ ದಾಯಾದಿ ರಾಷ್ಟ್ರ

ಇಸ್ಲಾಮಾಬಾದ್, ಮಾರ್ಚ್. 30: ಪವಿತ್ರ ರಂಜಾನ್ ಮಾಸದಲ್ಲಿ ಆಹಾರದ ಬಿಕ್ಕಟ್ಟಿನ ಜೊತೆಗೆ ಪ್ರಸ್ತುತ ತನ್ನ ಕೆಟ್ಟ ಆರ್ಥಿಕ ಕುಸಿತವನ್ನು ಎದುರಿಸುತ್ತಿರುವ ದೇಶ ಪಾಕಿಸ್ತಾನದಲ್ಲಿ ಈಗ ಮುಂಬರುವ ಖಾರಿಫ್ ಋತುವಿನಲ್ಲಿ ಭಾರಿ ನೀರಿನ ಕೊರತೆ ಉಂಟಾಗಲಿದೆ. ಈಗಾಗಲೇ ಆಹಾರ ಕೊರತೆಯಿಂದ ಸಂಕಷ್ಟದಲ್ಲಿರುವ ನೆರೆಯ ದೇಶದ ಜನತೆ ನೀರಿಗೂ ಪರದಾಡುವಂತಾಗಲಿದೆ.

ಸಿಂಧ್ ಮತ್ತು ದಕ್ಷಿಣ ಪಂಜಾಬ್‌ನಾದ್ಯಂತ ಬಂದ ಭಾರೀ ಪ್ರವಾಹದಿಂದ ದೊಡ್ಡ ದೊಡ್ಡ ಭೂಪ್ರದೇಶಗಳೇ ಮುಳುಗಡೆಯಾಗಿದ್ದು, ಪ್ರವಾಹದಿಮದ ಚೇತರಿಕೊಳ್ಳಲು ಪ್ರಯತ್ನಿಸುತ್ತಿರುವ ನಾಡಿಗೆ ಆರ್ಥಿಕ ಕುಸಿತ ಮತ್ತಷ್ಟು ಪೆಟ್ಟು ನೀಡಿದೆ. ಈಗ ನೀರಿನ ಅಭಾವ ಮತ್ತೆ ಸಂಕಷ್ಟಕ್ಕೆ ನೂಕಲಿದೆ. ಈಗಾಗಲೇ ಕರಾಚಿ ಸುತ್ತಮುತ್ತ ನೀಎಇಗಾಘಿ ಜನರು ಪರದಾಡುತ್ತಿದ್ದಾರೆ.

Massive Water Shortage To Hit Pakistan in Kharif season

ಪಾಕಿಸ್ತಾನದ ಡಾನ್‌ನೊಂದಿಗೆ ಮಾತನಾಡಿಎಉವ ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ (ಇರ್ಸಾ) ಪ್ರಾಂತ್ಯಗಳಿಗೆ ನೀರು ವಿತರಣೆಗಾಗಿ ವಿವಾದಾತ್ಮಕ ಮೂರು ಹಂತದ ನೀರು ನಿರ್ವಹಣಾ ಕಾರ್ಯವಿಧಾನವನ್ನು ಅನುಸರಿಸಲು ಒತ್ತಾಯಿಸಲಾಗುವುದು ಎಂದು ಹೇಳಿದೆ. ಇರ್ಸಾ ತಾಂತ್ರಿಕ ಸಮಿತಿಯು ಮಾರ್ಚ್ 24 ರಂದು ಸಂಭವನೀಯ ನೀರಿನ ಕೊರತೆಯ ಕುರಿತು ಸಭೆ ನಡೆಸಿತ್ತು. ಆದರೂ, 2023 ರ ಖಾರಿಫ್‌ಗೆ ಒಟ್ಟಾರೆ ನೀರಿನ ಲಭ್ಯತೆಯ ಅಂದಾಜುಗಳನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಈಗ ಅದನ್ನು ಪರಿಶೀಲಿಸಲು ಇಂದು ಮಾರ್ಚ್ 30 ರಂದು ಸಭೆ ನಡೆಸಲು ತನ್ನ ಸಲಹಾ ಸಮಿತಿಯನ್ನು ಕರೆದಿದೆ.

ಸಂತ್ರಸ್ತರಿಗೆ ರಂಜಾನ್ ಪರಿಹಾರ ಪ್ಯಾಕೇಜ್ ಘೋಷಿಸಿದ್ದರೂ ಹಣದ ಕೊರತೆಯಿಂದ ದೇಶವು ಆಹಾರದ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ದೇಶದ ಹಲವಾರು ಭಾಗಗಳಲ್ಲಿ ಉಚಿತ ಗೋಧಿ ಹಿಟ್ಟಿಗಾಗಿ ಜನರು ಉದ್ದನೆಯ ಸರತಿ ಸಾಲಿನಲ್ಲಿರುವುದನ್ನು ಕಾಣಬಹುದು. ಉಚಿತ ಗೋಧಿ ಹಿಟ್ಟು ಪಡೆಯಲು ನಡೆದ ಜಗಳಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡ ವಿಡಿಯೋವೊಂದರಲ್ಲಿ, ಪೇಶಾವರದ ಅನೇಕ ಪಾಕಿಸ್ತಾನಿ ಪ್ರಜೆಗಳು ಬಡವರಿಗೆ ಮೀಸಲಾದ ಗೋಧಿ ಹಿಟ್ಟನ್ನು ಸಾಗಿಸುತ್ತಿದ್ದ ಟ್ರಕ್‌ನ ಹಿಂದೆ ಓಡುತ್ತಿರುವುದು ಕಂಡುಬಂದಿದೆ. ಉಚಿತ ಗೋಧಿ ಹಿಟ್ಟನ್ನು ತಲುಪಿಸುತ್ತಿದ್ದ ಟ್ರಕ್‌ಗೆ ಜನರು ಹತ್ತುತ್ತಿರುವುದು ಕಂಡುಬಂದಿದೆ. ವಿತರಣಾ ಕೇಂದ್ರವನ್ನು ತಲುಪುವ ಮೊದಲು ಸ್ಥಳೀಯರು ಟ್ರಕ್ ಅನ್ನು ಲೂಟಿ ಮಾಡಿದ್ದಾರೆ ಎಂದು ನಂತರದ ವರದಿಗಳು ತಿಳಿಸಿವೆ.

Massive Water Shortage To Hit Pakistan in Kharif season

ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಬೇಲ್‌ಔಟ್ ಪ್ಯಾಕೇಜ್ ಪಡೆಯಲು ಸರ್ಕಾರ ಹೆಣಗಾಡುತ್ತಿರುವಾಗ ಏರುತ್ತಿರುವ ಹಣದುಬ್ಬರದಿಂದ ಜನರು ತೀವ್ರ ಹೊಡೆತ ತಿಂದಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತಮ್ಮ ಜೀವನವನ್ನೇ ಅಂತ್ಯಗೊಳಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ಗೋಧಿ ಹಿಟ್ಟಿನ ಸಾರ್ವಕಾಲಿಕ ಹೆಚ್ಚಿನ ಬೆಲೆಯು ಮಾರ್ಚ್ 23 ರಂದು ಮತ್ತೆ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವ ಪರಿಣಾಮವಾಗಿ ಹಣದುಬ್ಬರ ಒಂದೇ ವಾರದಲ್ಲಿ ಶೇ.38.4 ಕ್ಕೆ ಏರಿಕೆ ಕಂಡಿದೆ. ಐಎಂಎಫ್ ನಿಂದ 1.1 ಬಿಲಿಯನ್ ಡಾಲರ್ ಸಾಲ ಪಡೆಯುವುದಕ್ಕೆ ಅದರ ಸಲಹೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಹೊಸ ತೆರಿಗೆಗಳನ್ನು ವಿಧಿಸಿದೆ. ಇದರ ಜೊತೆಗೆ ಪೆಟ್ರೋಲ್ ದರ ಏರಿಸಿರುವುದು ಹಣದುಬ್ಬರಕ್ಕೆ ಕಾರಣವಾಗಿದೆ.

ಕಳೆದ ವಾರ ಶುಕ್ರವಾರದಿಂದ ಭಾನುವಾರದವರೆಗೆ ದುಬಾರಿ ಹಣ್ಣುಗಳನ್ನು ಖರೀದಿಸುವುದನ್ನು ದೇಶದ ಜನರು ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಹಕರ ಶೋಷಣೆಯ ವಿರುದ್ಧ ನಿಲುವು ತೆಗೆದುಕೊಳ್ಳುವ ಇಚ್ಛಾಶಕ್ತಿಯನ್ನು ಸಾರ್ವಜನಿಕರು ಹೊಂದಿದ್ದಾರೆಂದು ಪ್ರದರ್ಶಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+