ಕ್ಯಾಂಡಿ ಕ್ರಷ್ ಹುಚ್ಚಾಟಕ್ಕೆ ಹೆಬ್ಬೆರಳೇ ಕ್ರಷ್!
ಲಾಸ್ಏಂಜಲೀಸ್ ಏ. 21: ಆ ಆಟದಲ್ಲಿ ಅದೇನು ಅಡಗಿದೆಯೋ ಗೊತ್ತಿಲ್ಲ. ಅನೇಕ ದಿನಗಳ ನಂತರ ಎದುರಾದ ಸ್ನೇಹಿತರು ಆರೋಗ್ಯ ಹೇಗಿದೆ ಎಂದು ಉಭಯಕುಶಲೋಪರಿ ವಿಚಾರಿಸದಿದ್ದರೂ ಕ್ಯಾಂಡಿ ಕ್ರಷ್ ನಲ್ಲಿ ನೀನು ಎಷ್ಟನೇ ಹಂತ ತಲುಪಿದ್ದೀಯಾ? ಎಂದು ಕೇಳಿಕೊಳ್ಳುವ ಮಟ್ಟಕ್ಕೆ ಈ ಆಟ ಹುಚ್ಚು ಹಿಡಿಸಿದೆ.
ಇಲ್ಲೊಬ್ಬ ಪುಣ್ಯಾತ್ಮ ಕ್ಯಾಂಡಿ ಕ್ರಷ್ ಆಟದ ಮೋಹಕ್ಕೆ ಸಿಕ್ಕು ತನ್ನ ಹೆಬ್ಬೆರಳಿಗೆ ಘಾಸಿ ಮಾಡಿಕೊಂಡಿದ್ದಾನೆ. ಒಂದು ತಿಂಗಳಿಗೂ ಹೆಚ್ಚು ಸಮಯ ತಡೆ ಇಲ್ಲದೇ ಸ್ಮಾರ್ಟ್ಫೋನ್ನಲ್ಲಿ ಕ್ಯಾಂಡಿ ಕ್ರಷ್ ಆಡಿದ ಕ್ಯಾಲಿಫೋರ್ನಿಯಾದ ವ್ಯಕ್ತಿಯ ಹೆಬ್ಬೆರಳು ಸಂಪೂರ್ಣ ಡ್ಯಾಮೇಜ್ ಆಗಿದೆ ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ.[ಬಿಜೆಪಿಯವರಿಗೆ ಕ್ಯಾಂಡಿ ಕ್ರಶ್ ರಿಕ್ವೆಸ್ಟ್ ಕಳಿಸಿದ್ದು ಕಾಂಗ್ರೆಸಿಗರು!]

ಎಡಗೈ ಹೆಬ್ಬೆರಳಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರನ್ನು ಭೇಟಿಯಾಗಿದ್ದ. ನೋವಿನಿಂದ ನರಳುತ್ತಿದವನನ್ನು ವಿಚಾರಣೆ ಮಾಡಿದಾಗ ಕ್ಯಾಂಡಿ ಕ್ರಷ್ ಆತನ ಬೆರಳನ್ನುಕ್ರಷ್ ಮಾಡಿದ್ದು ಗೊತ್ತಾಗಿದೆ. ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂದು ವೈದ್ಯರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮತ್ತೊಂದು ಸಂಗತಿಯೂ ಬೆಳಕಿಗೆ ಬಂದಿದ್ದು ಕೆಲ ವಿಡಿಯೋ ಗೇಮ್ ಗಳು ನೋವು ನಿವಾರಕ ರೀತಿಯಲ್ಲಿ ಕೆಲಸ ಮಾಡುತ್ತವೆಯಂಥೆ. ಆಟ ಆಡುವ ಸಮಯದಲ್ಲಿ ನೋವು ಗೊತ್ತಾಗುವುದಿಲ್ಲ ಎಂದು ಸಂಶೋಧನೆ ಹೇಳಿದೆ.[ಬಿಪಿ ಹೆಚ್ಚಿಸಲು ನಾಲ್ಕು ಇಮೇಲ್ ಸಾಕು]
ಫೇಸ್ ಬುಕ್ ಕೀಟಲೆ
ಆಟದ ಹುಚ್ಚು ಹಿಡಿಸಿಕೊಂಡವರು ಮುಂದಿನ ಹಂತಕ್ಕೆ ತಲುಪಲು ಹಪಹಪಿ ಮಾಡುತ್ತಿರುತ್ತಾರೆ. ಸಮಯವನ್ನು ಹಾಳು ಮಾಡುವ ಆಟ ನಿಮಗೂ ಕಿರಿಕಿರಿ ತರಬಹುದು. ಫೇಸ್ ಬುಕ್ ಸ್ನೇಹಿತರಿಂದ ಕ್ಯಾಂಡಿ ಕ್ರಷ್ ಆಡಲು ನಿಮಗೆ ಆಹ್ವಾನ ದೊರೆಯುತ್ತದೆ. ಅಪ್ಪಿ ತಪ್ಪಿ ಕ್ಲಿಕ್ ಮಾಡಿದರೆ ನೀವು ಆಟದ ಮೋಹದ ಪಾಶಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಿ!
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications