Get Updates
Get notified of breaking news, exclusive insights, and must-see stories!

ಮಾಲ್ಡೀವ್ಸ್ ಬುಡಕ್ಕೆ ಬೆಂಕಿ, ಸರಿಯಾಗಿ ಶಾಸ್ತಿ ಮಾಡಿದ ಭಾರತ!

ಭಾರತದ ಜೊತೆ ಕಿರಿಕ್ ಮಾಡಿಕೊಂಡು ಪರದಾಡುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಒಂದು ಕಡೆ ಪ್ರವಾಸಿಗರೇ ಇಲ್ಲದೆ ಪರದಾಡುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇಷ್ಟೆಲ್ಲಾ ಸಂಕಷ್ಟ ಇದ್ದರೂ ಭಾರತದ ಜೊತೆಗೆ ಮಾಲ್ಡೀವ್ಸ್ ಕಿರಿಕ್ ಮುಂದುವರಿಸಿದ ಕಾರಣ, ಭಾರತ ಸರಿಯಾಗಿಯೇ ಆಘಾತ ನೀಡಿದೆ! ಹಾಗಾದರೆ ಆ ಆಘಾತ ಏನು? ಮುಂದೆ ಓದಿ.

ಭಾರತ & ಮಾಲ್ಡೀವ್ಸ್ ಸಂಬಂಧ ಸರಿ ಹೋಗದೆ ಇರುವ ಮಟ್ಟಕ್ಕೆ ಹಾಳಾಗಿದೆ. ಹೀಗಿದ್ದರೂ ನಿತ್ಯ ಮಾಲ್ಡೀವ್ಸ್‌ ಹೊಸ ಅಧ್ಯಕ್ಷ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡ್ತಾನೆ ಇದ್ದಾರೆ. ಈಗಲೂ ಅಷ್ಟೇ ಭಾರತೀಯ ಸೈನಿಕರು ಮಾಲ್ಡೀವ್ಸ್ ದೇಶ ಬಿಟ್ಟು ಹೋಗುವ ಬಗ್ಗೆ ಪದೇ ಪದೇ ಹೇಳಿಕೆ ನೀಡಿ, ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತವೂ ದೊಡ್ಡ ಆಘಾತ ನೀಡಿದೆ. ಅದರಲ್ಲೂ ಭಾರತ ವಿರೋಧಿ ಮಾಲ್ಡೀವ್ಸ್ ದೇಶ ಇನ್ನು ಮುಂದೆ ಅನ್ನ ತಿನ್ನುವಾಗಲೂ ಒಂದೊಂದು ತುತ್ತಿಗೂ ಲೆಕ್ಕ ಇಟ್ಟು ತಿನ್ನಬೇಕು, ಹಂಗೆ ಮಾಡಿದೆ!

Maldives Got Big Shock After India Takes A New Decision

ಭಾರತ ಇಲ್ಲದೆ ಮಾಲ್ಡೀವ್ಸ್ ಬದುಕಲ್ಲ!

ಭಾರತದ ರೀತಿ ಮಾಲ್ಡೀವ್ಸ್ ತನಗೆ ಬೇಕಾದ ವಸ್ತುಗಳನ್ನ ತಾನೇ ಉತ್ಪಾದನೆ ಮಾಡಿಕೊಂಡ ದೇಶ ಅಲ್ಲ. ಅದರ ಬದಲು ಬೇರೆ ಬೇರೆ ದೇಶದ ಬಳಿ ಬೇಡುತ್ತಾ ಪರಾವಲಂಬಿ ಜೀವನ ನಡೆಸುತ್ತಿರುವ ದೇಶ ಮಾಲ್ಡೀವ್ಸ್. ಇಷ್ಟಾದ್ರೂ ಮಾಲ್ಡೀವ್ಸ್ ದೇಶದ ರಾಜಕಾರಣಿಗಳ ಅಹಂಕಾರ ಕಡಿಮೆ ಆಗಿಲ್ಲ ಎನ್ನಬಹುದು. ಪರಿಸ್ಥಿತಿ ಹೀಗಿದ್ದರೂ ಭಾರತ ಮಾತ್ರ ಮಾಲ್ಡೀವ್ಸ್‌ಗೆ ಬೇಕಾದ ಅಗತ್ಯ ವಸ್ತು ಪೂರೈಕೆ ಮಾಡುತ್ತಿದೆ. ಇದರ ಜೊತೆಗೆ ಕಠಿಣ ಷರತ್ತು ವಿಧಿಸಿರುವ ಭಾರತ, ಮಾಲ್ಡೀವ್ಸ್‌ಗೆ ಭರ್ಜರಿ ಶಾಕ್ ಕೊಟ್ಟಿದೆ!

ಕಸ್ಟಮ್ಸ್ ಹದ್ದಿನ ಕಣ್ಣಲ್ಲಿ ಆಹಾರ ಸರಬರಾಜು!

ಹೌದು ಭಾರತ ಇದೀಗ ಮಾಲ್ಡೀವ್ಸ್ ದೇಶಕ್ಕೆ ಸರಬರಾಜು ಆಗುವ ಅಕ್ಕಿ, ಗೋಧಿ & ಈರುಳ್ಳಿ ಸೇರಿದಂತೆ ಇತ್ಯಾದಿ ಅಗತ್ಯ ವಸ್ತು ರಫ್ತು ಮೇಲೆ ನಿಗಾ ಇಟ್ಟಿದೆ. ಇದೇ ಕಾರಣಕ್ಕೆ ಇನ್ನುಮುಂದೆ ಅಗತ್ಯ ವಸ್ತುಗಳನ್ನ ಸರಬರಾಜು ಮಾಡುವ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅದನ್ನ ಪರಿಶೀಲನೆ ಮಾಡಲಿದ್ದಾರೆ. DGFT ನೀಡಿರುವ ಸೂಚನೆ ಪ್ರಕಾರ, ಮುಂದ್ರಾ & ತೂತುಕುಡಿ ಸೇರಿದಂತೆ ಕೇವಲ 4 ಬಂದರುಗಳ ಮೂಲಕ, ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ಸರಬರಾಜು ಮಾಡಲು ಸೂಚನೆ ನೀಡಲಾಗಿದೆ.

Maldives Got Big Shock After India Takes A New Decision

ಭಾರತ ವಿರೋಧಿಗೆ ಬುದ್ಧಿ ಬರಲ್ವಾ?

ಇತ್ತೀಚೆಗಷ್ಟೇ ಗೋಧಿ, ಅಕ್ಕಿ, ಈರುಳ್ಳಿ ಇತ್ಯಾದಿ ಅಗತ್ಯ ವಸ್ತುಗಳ ರಫ್ತು ಕೋಟಾ ಶೇ. 5ರಷ್ಟು ಏರಿಕೆ ಮಾಡಿ ಮಾಲ್ಡೀವ್ಸ್‌ಗೆ ಭಾರತ ನೆರವಾಗಿತ್ತು. ಮಾಲ್ಡೀವ್ಸ್ ಸರ್ಕಾರದ ಮನವಿ ಮೇರೆಗೆ, 2024-25ರ ವರ್ಷದಲ್ಲಿ ನಿರ್ದಿಷ್ಟ ಪ್ರಮಾಣದ ಅಗತ್ಯ ವಸ್ತು ರಫ್ತಿಗೆ ಅನುಮತಿ ನೀಡಲಾಗಿತ್ತು. 1981 ರಲ್ಲಿ ಚಾಲನೆಗೆ ಬಂದ ದ್ವಿಪಕ್ಷೀಯ ವ್ಯವಸ್ಥೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿತ್ತು.

ಹಾಗೇ ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ & ಗೋಧಿ ಹಿಟ್ಟು, ಬೇಳೆ ಕಾಳು ಸೇರಿ ಇತ್ಯಾದಿ ಅಗತ್ಯ ಆಹಾರ ವಸ್ತು ರಫ್ತು ವಿಚಾರದಲ್ಲಿ ಶೇಕಡಾ 5ರಷ್ಟು ರಫ್ತು ಕೋಟಾ ಹೆಚ್ಚಿಸಿತ್ತು ಭಾರತ. ಆಹಾರ ಪದಾರ್ಥ ಮಾತ್ರವಲ್ಲ ನದಿ ಮರಳು ಮತ್ತು ಕಲ್ಲುಗಳ ಕೋಟಾವನ್ನ ಶೇಕಡಾ 25ರಷ್ಟು ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈಗ ಮಾಲ್ಡೀವ್ಸ್, ಮತ್ತೆ ಕಿತಾಪತಿ ಮಾಡುತ್ತಿರುವ ಕಾರಣಕ್ಕೆ ಭರ್ಜರಿ ಆಘಾತ ನೀಡಿದೆ ಭಾರತ. ಈ ಮೂಲಕ ಪರೋಕ್ಷವಾಗಿ, ಮಾಲ್ಡೀವ್ಸ್ ರಾಜಕೀಯ ನಾಯಕರಿಗೆ ಭಾರತ ಬುದ್ಧಿ ಕಲಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+