ರೂಪಾಂತರಗೊಂಡಿದೆ ಕೊರೊನಾ ವೈರಸ್: ಆಘಾತಕಾರಿ ಸಂಗತಿ ತಿಳಿಸಿದ ಮಲೇಷ್ಯಾ
ಕೌಲಾಲಂಪುರ, ಆಗಸ್ಟ್ 17: ಕೊರೊನಾ ವೈರಸ್ ಈ ಹಿಂದಿನಿಂದಲೂ ಪ್ರಾಣಿಗಳಲ್ಲಿ ಇತ್ತು. ಅದರ ಹೊಸ ನಮೂನೆಯ ವೈರಸ್ ಚೀನಾದಲ್ಲಿ ಮನುಷ್ಯರಿಗೆ ಹರಡಿ ಈಗ ವಿಶ್ವಕ್ಕೇ ವ್ಯಾಪಿಸಿದೆ. ನಾವೆಲ್ ಕೊರೊನಾ ವೈರಸ್ ಜಗತ್ತಿನಾದ್ಯಂತ ಮೂಡಿಸಿರುವ ಆತಂಕ, ಸಮಸ್ಯೆಗಳ ಮಧ್ಯೆಯೇ ಮತ್ತೊಂದು ಆಘಾತಕಾರಿ ಸಂಗತಿಯೊಂದನ್ನು ಮಲೇಷ್ಯಾ ತಿಳಿಸಿದೆ. ಈಗಿರುವ ಕೊರೊನಾ ವೈರಸ್ ಸೋಂಕಿಗಿಂತಲೂ ಹತ್ತು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿರುವ ಹೊಸ ಕೊರೊನಾ ವೈರಸ್ ಪತ್ತೆಯಾಗಿದೆ.
ಡಿ614ಜಿ ಎಂಬ ಹೆಸರಿನ ಈ ರೂಪಾಂತರಗೊಂಡ ಕೊರೊನಾ ವೈರಸ್, ಮಲೇಷ್ಯಾದ ಶಿವಗಂಗಾ ಕ್ಲಸ್ಟರ್ನಲ್ಲಿ ವರದಿಯಾದ 45 ಪ್ರಕರಣಗಳಲ್ಲಿ ಕನಿಷ್ಠ ಮೂರು ಮಂದಿಯಲ್ಲಿ ಕಂಡುಬಂದಿದೆ. ಇದು ಭಾರತದಿಂದ ಮಲೇಷ್ಯಾಕ್ಕೆ ಹಿಂದಿರುಗಿ, 14 ದಿನಗಳ ಕಡ್ಡಾಯ ಹೋಮ್ ಕ್ವಾರೆಂಟೈನ್ ಅವಧಿಯನ್ನು ಉಲ್ಲಂಘಿಸಿ ಅಡ್ಡಾಡುತ್ತಿದ್ದ ರೆಸ್ಟೋರೆಂಟ್ ಮಾಲೀಕರೊಬ್ಬರಲ್ಲಿ ಕಂಡುಬಂದಿದೆ.
ಆ ವ್ಯಕ್ತಿಯನ್ನು ಐದು ತಿಂಗಳ ಜೈಲು ಮತ್ತು ದಂಡ ಕಟ್ಟಬೇಕಾದ ಶಿಕ್ಷೆಗೆ ಒಳಪಡಿಸಲಾಗಿದೆ. ಫಿಲಿಪ್ಪೀನ್ಸ್ನಿಂದ ಮಲೇಷ್ಯಾಕ್ಕೆ ಮರಳಿರುವ ಜನರು ಇರುವ ಪ್ರದೇಶದಲ್ಲಿಯೂ ಈ ವೈರಸ್ನ ತೀವ್ರತೆ ಕಂಡುಬಂದಿದೆ. ಮುಂದೆ ಓದಿ.

ಔಷಧಗಳು ಪರಿಣಾಮ ಬೀರುತ್ತಿಲ್ಲ
ಕೊರೊನಾ ವೈರಸ್ನಿಂದ ಗುಣಮುಖರಾಗಲು ಈಗ ನೀಡಲಾಗುತ್ತಿರುವ ಮಾತ್ರೆ ಮತ್ತು ಲಸಿಕೆಗಳು ಹೊಸ ವೈರಸ್ ಅನ್ನು ಮಣಿಸಲು ಪರಿಣಾಮಕಾರಿಯಾಗುತ್ತಿಲ್ಲ. ಅಷ್ಟರಮಟ್ಟಿಗೆ ಹೊಸ ಕೊರೊನಾ ವೈರಸ್ ಪ್ರಬಲವಾಗಿವೆ ಎಂದು ಮಲೇಷ್ಯಾದ ಆರೋಗ್ಯ ಮಹಾ ನಿರ್ದೇಶಕ ನೂರ್ ಹಿಶಾಮ್ ಅಬ್ದುಲ್ಲಾ ತಿಳಿಸಿದ್ದಾರೆ.

ಜನರಲ್ಲಿ ಜಾಗ್ರತೆ ಮುಖ್ಯ
ಕೊರೊನಾ ವೈರಸ್ನ ಹೊಸ ರೂಪಾಂತರಿ ವೈರಸ್ ಮಲೇಷ್ಯಾದಲ್ಲಿ ಪತ್ತೆಯಾಗಿರುವುದರಿಂದ ಜನರು ಹೆಚ್ಚು ಜಾಗರೂಕ ಮತ್ತು ಇನ್ನಷ್ಟು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಯಾವುದೇ ಸ್ವರೂಪದಲ್ಲಿರುವ ಸೋಂಕಿನ ಪ್ರಭಾವವನ್ನು ತಗ್ಗಿಸಲು ಜನರ ಸಹಕಾರ ಅತಿ ಅಗತ್ಯ. ನಾವು ಜತೆಯಾಗಿ ಇದನ್ನು ನಿಯಂತ್ರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ವುಹಾನ್ ವೈರಸ್ಗಿಂತಲೂ ಅಪಾಯಕಾರಿ
ಚೀನಾದ ವುಹಾನ್ನಲ್ಲಿ ಮೊದಲು ಕಂಡುಬಂದ ವೈರಸ್ಗಿಂತಲೂ ಇದು ಹತ್ತುಪಟ್ಟು ಅಪಾಯಕಾರಿಯಾಗಿದೆ. ಉಲು ಟಿರಮ್ ಕ್ಲಸ್ಟರ್ನಲ್ಲಿ ಮೂರು ಪ್ರಕರಣಗಳಲ್ಲಿನ ಮಾದರಿಗಳಲ್ಲಿ ಈ ಪ್ರಬಲ ವೈರಸ್ ಕಂಡುಬಂದಿದೆ. ಇತರೆ ವೈರಸ್ಗಳಿಗೆ ಹೋಲಿಸಿದರೆ ಡಿ614ಜಿ ವೈರಸ್ ನಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ಹೆಚ್ಚು ವೈರಾಣುಗಳನ್ನು ಉತ್ಪಾದಿಸುತ್ತದೆ. ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೆ ಇನ್ನಷ್ಟು ಪ್ರಬಲವಾಗಿ ಹರಡುತ್ತದೆ.

ಎರಡೂ ಕ್ಲಸ್ಟರ್ಗಳು ನಿಯಂತ್ರಣದಲ್ಲಿ
ಜುಲೈನಲ್ಲಿ ಡಿ614ಜಿ ವೈರಸ್ ರೂಪಾಂತರ ಮೊದಲು ಪತ್ತೆಯಾಗಿದೆ. ಪ್ರಸ್ತುತ ಕೊವಿಡ್ 19 ಚಿಕಿತ್ಸೆಗೆ ಬಳಸಲಾಗುತ್ತಿರುವ ಯಾವ ಲಸಿಕೆಯೂ ಈ ರೂಪಾಂತರಗೊಂಡ ವೈರಸ್ ಇರುವವರಲ್ಲಿ ಕೆಲಸ ಮಾಡುವಷ್ಟು ಸಮರ್ಥವಾಗಿಲ್ಲ. ಎರಡು ಕ್ಲಸ್ಟರ್ಗಳಲ್ಲಿ ಕೊರೊನಾ ವೈರಸ್ನ ಹೊಸ ರೂಪಾಂತರ ಕಂಡುಬಂದಿದ್ದು, ಅವುಗಳು ಸಾರ್ವಜನಿಕ ಆರೋಗ್ಯ ನಿಯಂತ್ರಣದಲ್ಲಿವೆ ಎಂದು ನೂರ್ ಹಿಶಾಮ್ ಅಬ್ದುಲ್ಲಾ ಅವರು ತಿಳಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications