ರಂಜಾನ್ 'ವಸ್ತ್ರ ಸಂಹಿತೆ' ಬಿಸಿ, ಟಿವಿ ನಿರೂಪಕಿ ಅಮಾನತು!
ಕುವೈಟ್, ಜೂನ್ 15: ಮುಸ್ಲಿಮರ ಪವಿತ್ರ ಹಬ್ಬ ಈದ್ ಉತ್ ಫಿತ್ರ್ ಎಲ್ಲೆಡೆ ಆಚರಿಸಲಾಗುತ್ತಿದೆ. ಆದರೆ, ಕುವೈಟ್ ಟೆಲಿವಿಷನ್ ನ ನಿರೂಪಕಿ ಅಮಲ್ ಅಲ್ ಅವಧಿ ಅವರ ಹಬ್ಬದ ಸಂಭ್ರಮಕ್ಕೆ ಮಂಕು ಕವಿದಿದೆ. ಟಿವಿ ಲೈವ್ ಶೋ ನಿರೂಪಣೆ ಮಾಡುತ್ತಿದ್ದ ಸಂದರ್ಭದಲ್ಲೇ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದಕ್ಕೆ ಕಾರಣ, ಇಸ್ಲಾಂ ಮೂಲಭೂತವಾದಿಗಳ ವಸ್ತ್ರ ಸಂಹಿತೆ ನೀತಿ.
ರಂಜಾನ್ ಮಾಸಾಚಾರಣೆ ಸಂದರ್ಭದಲ್ಲಿ ಧರಿಸಬೇಕಿದ್ದ ವಸ್ತ್ರಗಳನ್ನು ಬಿಟ್ಟು, ಪಾಶ್ಚಾತ್ಯ ಶೈಲಿಯ ವಿನ್ಯಾಸ ಉಡುಪನ್ನು ಧರಿಸಿ ನಿರೂಪಣೆ ಮಾಡಲು ಮುಂದಾಗಿದ್ದು ಅಮಲ್ ಅವರ ಕೆಲಸಕ್ಕೆ ಕುತ್ತು ತಂದಿದೆ.
ಸರ್ಕಾರಿ ಸ್ವಾಮ್ಯದ ಕುವೈಟ್ ಟೆಲಿವಿಶನ್ (ಕೆಟಿವಿ1)ನಲ್ಲಿ ನಿರೂಪಕಿಯನ್ನು ಕಂಡ ಅನೇಕರು ಆಕೆಯ ದಿರಿಸಿನ ಬಗ್ಗೆ ದೂರು ನೀಡಿದ್ದಾರೆ. ತಕ್ಷಣವೆ ಆಕೆಯನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಮಲ್, ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ನ್ಯಾಯ ಕೇಳಿದ್ದಾರೆ. ಕುವೈಟ್ ನ ಮಾಹಿತಿ ಸಚಿವಾಲಯಕ್ಕೆ ಈ ಬಗ್ಗ ಪ್ರಶ್ನೆ ಮಾಡಿ, ಸ್ಪಷ್ಟನೆ ಕೋರಿದ್ದಾರೆ.

ದಿ ವಿನ್ನಿಂಗ್ ಟಚ್ ಎಂಬ ಕಾರ್ಯಕ್ರಮದ ಸಹ ನಿರೂಪಣೆ ಮಾಡುತ್ತಿದ್ದ ಅಮಲ್ ಅವರು, ತಮ್ಮ ಹೊಸ ಉಡುಪಿನೊಂದಿಗೆ ಸೆಲ್ಫಿ ತೆಗೆದುಕೊಂಡು ಇನ್ಸ್ಟಾಗ್ರಾಮ್ ಗೆ ಹಾಕಿದ್ದರು. ಇದು ರಂಜಾನ್ ತಿಂಗಳಲ್ಲಿ ಕೆಟ್ಟ ಸಂದೇಶ ನೀಡಿದಂತಾಗುತ್ತದೆ. ಈ ಶೋ ಈಗಲೇ ಬಂದ್ ಮಾಡಿ, ಇಲ್ಲವೇ ಚಾನೆಲ್ ಸಂಪೂರ್ಣ ಬಂದ್ ಆಗಲಿದೆ ಎಂಬ ಬೆದರಿಕೆ ಗಳು ಬಂದ ಮೇಲೆ, ಚಾನೆಲ್ ಮುಖ್ಯಸ್ಥರು ಈ ಕ್ರಮ ಜರುಗಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications