ಖೇಲ್ ಖತಂ.. ನಾಟಕ್ ಬಂದ್.. ಉತ್ತರ ಕೊರಿಯಾ ಅಧ್ಯಕ್ಷ ಮಾಡಿದ್ದೇನು?
ಉತ್ತರ ಕೊರಿಯಾ ಸರ್ವಾಧಿಕಾರಿ ಉರಿಯಬಾರದ ರೇಂಜ್ಗೆ ಉರಿಯುತ್ತಿದ್ದಾನೆ. ಸೈಲೆಂಟ್ ಆಗಿ ಇರದೆ ಸದಾ ಪರಮಾಣು ದಾಳಿ ಬಗ್ಗೆ ಅಂದ್ರೆ ನ್ಯೂಕ್ಲಿಯರ್ ಅಟ್ಯಾಕ್ ಬಗ್ಗೆ ಎಚ್ಚರಿಕೆ ನೀಡುತ್ತಾ ಬಂದಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, ಇದೀಗ ಮತ್ತೆ ಅಂತಹದ್ದೇ ಕೃತ್ಯಕ್ಕೆ ಕೈ ಹಾಕಿ ಭಯ ಹುಟ್ಟಿಸಿದ್ದಾನೆ. ಮೊನ್ನೆ ಮೊನ್ನೆ ತಾನೆ ಮಿಸೈಲ್ ಟೆಸ್ಟ್ ಮಾಡಿದ್ದ ಕಿಮ್ ಜಾಂಗ್ ಉನ್ಗೆ ಸಂಬಂಧಪಟ್ಟ ಭಯಾನಕ ಫೋಟೋ ಒಂದು ಇದೀಗ ರಿಲೀಸ್ ಆಗಿದೆ. ಹಾಗಾದ್ರೆ, ಯಾವುದು ಆ ಫೋಟೋ? ಬನ್ನಿ ತಿಳಿಯೋಣ.
ಕಿಮ್ ಜಾಂಗ್ ಉನ್ ಇದೀಗ ಯುರೇನಿಯಂ ಘಟಕದಲ್ಲಿ ಪತ್ತೆ ಆಗಿದ್ದಾರೆ. ಪರಮಾಣುಗಳ ಮೂಲಕ ಬಾಂಬ್ ತಯಾರಿಸಲು ಇದೇ ಯುರೇನಿಯಂ ಪದಾರ್ಥ ಪ್ರಮುಖ ವಸ್ತು. ಆದರೆ ಈ ಯುರೇನಿಯಂ ಸಂಸ್ಕರಣೆಗಾಗಿ ಇರುವ ಘಟಕದಲ್ಲೇ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಂಡು ಬಂದಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗುತ್ತಿದೆ ಹಾಗೂ ಫೋಟೋ ಕಂಡು ಇದೀಗ ದಕ್ಷಿಣ ಕೊರಿಯಾ & ಜಪಾನ್ ದೇಶಗಳು ಬೆಚ್ಚಿ ಬಿದ್ದಿವೆ. ಯಾಕೆ ಅಂದ್ರೆ ಕಿಮ್ ಜಾಂಗ್ ಉನ್ ತಲೆ ಕೆಟ್ಟು ಯಾವ ಕ್ಷಣದಲ್ಲಿ ಬೇಕಾದರೂ ಪರಮಾಣು ದಾಳಿ ಮಾಡುವ ಸಾಧ್ಯತೆ ಇದೆ ಎಂಬ ಭಯ ಆವರಿಸಿದೆ.

ಉ.ಕೊರಿಯಾ ಬಳಿ ಕ್ಷಿಪಣಿಗಳ ರಾಶಿ!
ಈಗಿನ ಪರಿಸ್ಥಿತಿಯಲ್ಲಿ ಉತ್ತರ ಕೊರಿಯಾ ಬಳಿ ಸಾಕಷ್ಟು ಕ್ಷಿಪಣಿಗಳು ಇವೆ. ಹಾಗೇ ಎಲ್ಲವು ಪರಮಾಣು ಸಾಮರ್ಥ್ಯ ಹೊಂದಿರುವ ಕ್ಷಿಪಣಿಗಳೇ ಆಗಿವೆ. ಇದೇ ಕಾರಣಕ್ಕೆ ದಕ್ಷಿಣ ಕೊರಿಯಾ & ಜಪಾನ್ ಬುಡ ಅಲುಗಾಡುತ್ತಿದೆ. ಮೊದಲೇ ತಿಕ್ಕಲು ತಿಕ್ಕಲು ರೀತಿ ವರ್ತಿಸುವ ಕಿಮ್ ಜಾಂಗ್ ಉನ್ ಯಾವ ಕ್ಷಣದಲ್ಲಿ ಬೇಕಾದರೂ ಪರಮಾಣು ಸಾಮರ್ಥ್ಯದ ಮಿಸೈಲ್ ಬಳಕೆ ಮಾಡಿ, ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಗಡಿ ಭಾಗದಲ್ಲಿ ಅಲರ್ಟ್ ಆಗಿರುವ ದಕ್ಷಿಣ ಕೊರಿಯಾ & ಜಪಾನ್ ಮಿಲಿಟರಿ ಯುದ್ಧಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಇವೆ.
ಶಕ್ತಿಶಾಲಿ ಮಿಸೈಲ್ ಹೊಂದಿದೆ ಉ.ಕೊರಿಯಾ
ಒಟ್ನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಾಟಕ್ಕೆ ದಕ್ಷಿಣ ಕೊರಿಯಾ & ಜಪಾನ್ ಸೇರಿದಂತೆ ಅಮೆರಿಕ ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕಂದ್ರೆ ಉತ್ತರ ಕೊರಿಯಾದ ಬಳಿ ಇರುವ ಮಿಸೈಲ್ ಅಂದ್ರೆ ಕ್ಷಿಪಣಿಗಳು ಅಮೆರಿಕ ಮುಟ್ಟುವ ಶಕ್ತಿ ಹೊಂದಿವೆ. ಹೀಗಾಗಿ ಉತ್ತರ ಕೊರಿಯಾದ ಪ್ರತಿಯೊಂದು ನಡೆಯನ್ನ ಕೂಡ ಅಮೆರಿಕ & ದಕ್ಷಿಣ ಕೊರಿಯಾ ಸೇರಿ ಜಪಾನ್ ಕೂಡ ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಲ್ಲದೆ ಯಾವುದೇ ಕ್ಷಣದಲ್ಲಿ ಉತ್ತರ ಕೊರಿಯಾ ದಾಳಿ ಎದುರಿಸಲು ಈ ಎಲ್ಲಾ ದೇಶಗಳು ಸನ್ನದ್ಧವಾಗಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications