ಕೋಮಾಕ್ಕೆ ಜಾರಿರುವ ಕಿಮ್ ಜೊಂಗ್ ಉನ್, ಶತ್ರುಪಡೆಯಿಂದ ಸತ್ಯ ಬಹಿರಂಗ
ಉತ್ತರ ಕೊರಿಯಾದ ಸರ್ವಾಧಿಕಾರಿ, ಅಮೆರಿಕದ ಪರಮ ಶತ್ರು ಕಿಮ್ ಜೊಂಗ್ ಉನ್ ಮತ್ತೊಮ್ಮೆ ಯುದ್ಧದ ಬಗ್ಗೆ ಮಾತನಾಡಿದ್ದು ನೆನಪಿರಬೇಕಲ್ಲ, ಭೂಮಿ ಮೇಲೆ ಇನ್ನು ಮುಂದೆ ಯುದ್ಧಗಳು ನಡೆಯೋದಿಲ್ಲ ಅಂತಾ ಸ್ವತಃ ಕಿಮ್ ಹೇಳಿದ್ದಾರೆ ಎಂಬ ಇತ್ತೀಚಿನ ಸುದ್ದಿಯ ಬೆನ್ನಲ್ಲೇ ಶತ್ರುಪಡೆಯ ಮಾಜಿ ಅಧಿಕಾರಿಯೊಬ್ಬರು ಕಿಮ್ ಬಗ್ಗೆ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಕಿಮ್ ಅಸಲಿಗೆ ಕೋಮಾಕ್ಕೆ ಜಾರಿ ಬಹಳ ದಿನಗಳಾಗಿವೆ. ಈಗ ಅಧಿಕಾರವು ಕಿಮ್ ಸೋದರಿ ಯೊ ಜೊಂಗ್ ಕೈಲಿದೆ ಎಂದಿದ್ದಾರೆ.
'ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಬ್ರೇನ್ ಡೆಡ್ ಆಗಿದೆ. ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆ'' ಎಂಬ ಸುದ್ದಿ ಹಬ್ಬಿದ್ದು ನೆನಪಿರಬಹುದು.
ಏಪ್ರಿಲ್ 15 ರಂದು ಕಿಮ್ ಜಾಂಗ್ ಉನ್ ಅವರ ತಾತ ದಿವಂಗತ ಕಿಮ್ ಇಲ್ ಸುಂಗ್ ಅವರ 108ನೇ ಜನ್ಮದಿನದ ಸ್ಮರಣೆ ಕಾರ್ಯಕ್ರಮಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಕಿಮ್ ಆವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿದ್ದವು.

2014ರಲ್ಲಿ ಕೂಡಾ ಕಣ್ಮರೆಯಾಗಿದ್ದ ಕಿಮ್
ಕಿಮ್ ಜಾಂಗ್ ಉನ್ ಸಾರ್ವಜನಿಕ ಜೀವನದಿಂದ ನಾಪತ್ತೆಯಾಗಿರುವುದು ಇದೇ ಮೊದಲನೇನಲ್ಲ. 2014 ಸೆಪ್ಟೆಂಬರ್ ನಲ್ಲೂ 40 ದಿನಗಳ ಕಾಲ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿ ಮತ್ತೆ ಕಾಣಿಸಿಕೊಂಡಿದ್ದರು. ದಕ್ಷಿಣ ಕೊರಿಯಾದ ದಿವಂಗತ ಅಧ್ಯಕ್ಷ ಕಿಮ್ ಡಿಯೊ ಜುಂಗ್ ಅವರ ಆಪ್ತ ಅಧಿಕಾರಿಯು, ಕಿಮ್ ಜೊನ್ ಉನ್ ಕೋಮಾದಲ್ಲಿದ್ದಾರೆ. ಕಿಮ್ ಯೋ ಜೊಂಗ್ ಸದ್ಯ ಉತ್ತರ ಕೊರಿಯಾವನ್ನು ಆಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ
ದಕ್ಷಿಣ ಕೊರಿಯಾದ ಅಧಿಕಾರಿ ಚಾಂಗ್ ಸಾಂಗ್ ಮಿನ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಿಮ್ ಜೊಂಗ್ ಉನ್ ಹಾಸಿಗೆ ಹಿಡಿದು ಬಹಳ ಕಾಲ ಆಗಿದೆ. ಆಡಳಿತ ನಡೆಸಲು ಕಷ್ಟವಾಗಿದೆ ಎಂದು ಈ ಹಿಂದೆ ಕೂಡಾ ಹೇಳಿದ್ದೆ. ಈಗ ಅದಕ್ಕೆ ಪುರಾವೆಗಳು ಸಿಕ್ಕಿವೆ. ಕಿಮ್ ಸೋದರಿಯಿಂದ ಆದೇಶಗಳು ಬರುತ್ತಿವೆ ಎಂದಿದ್ದಾರೆ.

ನಕಲಿ ಸುದ್ದಿಗಳನ್ನು ಸೃಷ್ಟಿಸಲಾಗಿದೆ
ಕಿಮ್ ಆರೋಗ್ಯವಾಗಿದ್ದಾರೆ ಎಂದು ತೋರಿಸಲಾದ ಚಿತ್ರಗಳು, ವಿಡಿಯೋ ಕ್ಲಿಪ್ಪಿಂಗ್ ಎಲ್ಲವೂ ಶುದ್ಧ ಸುಳ್ಳು. ಈ ಬಗ್ಗೆ ಘೋಷಣೆ ಮಾಡಿದರೆ ಉತ್ತರ ಕೊರಿಯಾದ ಆಡಳಿತ ಯಂತ್ರ ಕುಸಿಯುವ ಭೀತಿ ಎದುರಾಗಿರುವುದರಿಂದ ಎಲ್ಲವೂ ಸಮರ್ಪಕವಾಗಿ ವ್ಯವಸ್ಥೆ ರೂಪುಗೊಂಡು ಯೊ ಜೊಂಗ್ ಸಂಪೂರ್ಣ ಅಧಿಕಾರವಹಿಸಿಕೊಳ್ಳಲು ಸಿದ್ಧ ಎನಿಸಿದಾಗ ಕಿಮ್ ಜೊಂಗ್ ಉನ್ ಬಗ್ಗೆ ಘೋಷಣೆ ಹೊರಬರಲಿದೆ.

ಸಾಕು ಪ್ರಾಣಿಗಳನ್ನು ನೀಡಲು ಕರೆ
ಕೊವಿಡ್ 19 ನಿಂದ ಉತ್ತರ ಕೊರಿಯಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದರೆ, ಹುಂಬತನದಿಂದ ಆಡಳಿತ ನಡೆಸುವ ಕಿಮ್ ಗೆ ಇತರೆ ರಾಷ್ಟ್ರಗಳ ನೆರವು ಕೋರುವುದು ಬೇಕಿಲ್ಲ. ಹೀಗಾಗಿ, ಸಾಕುಪ್ರಾಣಿಗಳನ್ನು ರೆಸ್ಟೋರೆಂಟ್ ಗೆ ಕೊಡಿ, ಆಹಾರ ಕ್ಷಾಮ ಉಂಟಾಗದಂತೆ ನೋಡಿಕೊಳ್ಳಿ ಎಂಬ ವಿಚಿತ್ರ ಆದೇಶಗಳು ಬರುತ್ತಿವೆ ಎಂದಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications