Japan Snowfall: 30 ಜೀವಕ್ಕೆ ಕುತ್ತು ತಂದ ಭಾರಿ ಹಿಮಪಾತ, ಜಪಾನ್ ಪರಿಸ್ಥಿತಿ ಕಂಡು ಪ್ರಪಂಚದ ಕಂಬನಿ
ಜೋರು ಮಳೆ, ಮೈ ಸುಡುವಷ್ಟು ಬಿಸಿಲು, ನಿಂತಲ್ಲೇ ಹೆಪ್ಪುಗಟ್ಟುವ ಚಳಿ... ಹೀಗೆ ಮನುಷ್ಯ ತಾನು ಮಾಡಿಕೊಂಡ ತಪ್ಪಿಗೆ ಇದೀಗ ಪ್ರಕೃತಿ ಮಾತೆಯ ಮುನಿಸಿನ ಮೂಲಕ ನೂರಾರು ಸಮಸ್ಯೆ ಎದುರಿಸುತ್ತಿದ್ದಾನೆ. ಸಾಲು ಸಾಲು ಪ್ರಾಕೃತಿಕ ವಿಕೋಪಗಳು ಇದೀಗ ಮನುಷ್ಯರನ್ನು ದೊಡ್ಡದಾದ ಕಂಟಕಕ್ಕೆ ಸಿಲುಕಿಸಿದೆ. ಇದೇ ರೀತಿ ಜಪಾನ್ ನೆಲದಲ್ಲೂ ಪ್ರಕೃತಿಯ ಮುನಿಸಿಗೆ ದೊಡ್ಡ ಅವಾಂತರ ಈಗ ಸೃಷ್ಟಿಯಾಗಿದೆ, ಅಂದಹಾಗೆ ಜಪಾನ್ನ ಹಲವು ಪ್ರದೇಶಗಳಲ್ಲಿ ಚಳಿಗಾಲದ ಒತ್ತಡ ಮಾದರಿ ಭಾರಿ ಹಿಮಪಾತವಾಗಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣ ಆಗಿದೆ.
ಜಪಾನ್ ದೇಶದಲ್ಲಿ ಪದೇ ಪದೇ ಭೂಕಂಪನ ಸಂಭವಿಸುವುದು ಹಾಗೂ ಸುನಾಮಿ ಎಚ್ಚರಿಕೆಗಳು ಮಾಮೂಲಿ. ಆದರೆ ಈ ಬಾರಿ ಭೀಕರ ಹಿಮಪಾತ ಕೂಡ ಜಪಾನ್ ಜನರನ್ನು ಹಿಂಡುತ್ತಾ ಇದೆ, ಅಲ್ಲದೆ ಈ ರೀತಿ ಭೀಕರವಾಗಿ ಸುರಿಯುತ್ತಿರುವ ಹಿಮಪಾತ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಜನರ ಜೀವ ತೆಗೆದಿದೆ. ಇದರ ಜೊತೆಗೆ 324 ಜನರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದು, ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಿ ಜನರನ್ನು ರಕ್ಷಣೆ ಮಾಡಲು ಹಗಲು & ರಾತ್ರಿ ಪರದಾಡುತ್ತಿದ್ದಾರೆ. ಜನರು ಈಗ ಮನೆಯಿಂದ ಹೊರ ಬರಬೇಕು ಎಂದರೆ ನೂರು ಬಾರಿ ಯೋಚಿಸುವ ಪರಿಸ್ಥಿತಿ ಜಪಾನ್ ನೆಲದಲ್ಲಿ ನಿರ್ಮಾಣ ಆಗಿದೆ.

ಹಿಮ ತೆರವು ಮಾಡುವಾಗಲೇ ಸಮಸ್ಯೆ
ಕಳೆದ ಕೆಲ ವಾರಗಳಿಂದ ಜಪಾನ್ ದೇಶದಲ್ಲಿ ಚಳಿ ಹೆಚ್ಚಾಗಿದ್ದು, ಭಾರಿ ಪ್ರಮಾಣದಲ್ಲಿ ಹಿಮ ಬೀಳುತ್ತಿದೆ. ಹೀಗಿದ್ದಾಗಲೇ ಸರ್ಕಾರ ಕೂಡ ಪರಿಸ್ಥಿತಿ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ಜಾರಿಗೆ ತಂದಿದ್ದು, ಚಳಿಗಾಲದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಮುಕ್ತಿ ಕೊಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಹೀಗಿದ್ದರೂ ಪ್ರಕೃತಿ ಮಾತೆಯ ಮುನಿಸು ದೊಡ್ಡದಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಫೆಬ್ರವರಿ 2 ಮಂಗಳವಾರದ ತನಕ 8 ಪ್ರಾಂತ್ಯಗಳಲ್ಲಿ ಹಿಮಪಾತ ಹಿನ್ನೆಲೆ ಭಾರಿ ಪ್ರಮಾಣದ ಸಾವುನೋವು ವರದಿಯಾಗಿದೆ. ಹಿಮ ತೆರವುಗೊಳಿಸುವ ಸಮಯದಲ್ಲೇ ಭಾರಿ ಹೆಚ್ಚಿನ ಪ್ರಮಾಣದಲ್ಲಿ ಜೀವಹಾನಿ ಆಗಿರುವುದು ಬೆಳಕಿಗೆ ಬಂದಿದ್ದು, ಜನರಿಗೆ ಎಚ್ಚರಿಕೆಯಿಂದ ಇರಲು ಸರ್ಕಾರ ಸೂಚನೆ ನೀಡಿದೆ.
ಒಂದೇ ಕಡೆ 255 ಸೆಂ.ಮೀ. ಹಿಮ!
ಮತ್ತೊಂದು ಕಡೆ ಟೋಕಮಾಚಿ ನಗರದಲ್ಲಿ ಹಿಮದ ಆಳವು 255 ಸೆಂ.ಮೀ. ತಲುಪಿದ್ದು, ಇದನ್ನು ತೆರವು ಮಾಡಲು ಭಾರಿ ದೊಡ್ಡ ಸಮಸ್ಯೆಗಳು ಸೃಷ್ಟಿ ಆಗುತ್ತಿವೆ. ನೀಗಾಟಾ ಪ್ರಾಂತ್ಯದಲ್ಲಿ ಸರ್ಕಾರ ಮತ್ತಷ್ಟು ವಿಪತ್ತು ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದು, ಈಗಾಗಲೇ ಸಹಾಯ ಕೇಂದ್ರ ಸ್ಥಾಪಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಶಾನ್ಯ ಜಪಾನ್ನ ಅಮೋರಿ ಪ್ರಾಂತ್ಯದ ಮೇಲೂ ಹಿಮಪಾತ ದೊಡ್ಡ ಪರಿಣಾಮ ಬೀರಿದ್ದು, ಈ ಭಾಗದಲ್ಲಿ ಹಿಮ ಸಂಗ್ರಹವು ಬರೋಬ್ಬರಿ 183 ಸೆಂಟಿಮೀಟರ್ಗೆ ತಲುಪಿಬಿಟ್ಟಿದೆ. ಇದು ವಾರ್ಷಿಕ ಸರಾಸರಿಗಿಂತ ಸುಮಾರು 2.7 ಪಟ್ಟು ಹೆಚ್ಚು ಎಂದು ಅಂದಾಜು ಕೂಡ ಮಾಡಲಾಗಿದೆ. ಭಾರಿ ಹಿಮಪಾತದ ಹಿನ್ನೆಲೆ ಮನೆಗಳ ಛಾವಣಿ ಕುಸಿತ ಕೂಡ ದುರಂತಗಳು ಹೆಚ್ಚಲು ಕಾರಣ ಆಗುತ್ತಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications