ಜಪಾನ್ ಬುಲೆಟ್ ರೈಲಿಗೆ ವಿಮಾನವೂ ಸಾಟಿಯಿಲ್ಲ!
ಟೋಕಿಯೊ, ಏ. 22: ಬೆಳಕಿನ ವೇಗ, ಶಬ್ದದ ವೇಗ ಎಷ್ಟು? ಎಂಬುದನ್ನು ಕೇಳಿದ್ದೇವೆ ಆದರೆ ಅದನ್ನು ಅನುಭವಿಸಲು ಸಾಧ್ಯವಾಗಿಲ್ಲ. ಆದರೆ ಜಪಾನ್ ತಂತ್ರಜ್ಞಾನ ಈ ವೇಗಕ್ಕೆ ಸಾಟಿಯಾಗುವಂಥ ರೈಲನ್ನು ನಿರ್ಮಾಣ ಮಾಡಿ ಪ್ರಯೋಗಾರ್ಥ ಓಡಾಟನ್ನು ನಡೆಸಿದೆ.
ಜಪಾನ್ ಹೊಸ ವಿಕ್ರಮವೊಂದನ್ನು ಸಾಧಿಸಿದೆ. ವಿಶ್ವದ ಅತ್ಯಂತ ವೇಗದ ಬುಲೆಟ್ ರೈಲನ್ನು ಜಪಾನ್ನಲ್ಲಿ ಮಂಗಳವಾರ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೈಲು 603 ಕಿ.ಮೀ. (373 ಮೈಲು) ಪ್ರತಿ ಗಂಟೆ ವೇಗದಲ್ಲಿ ಸಂಚರಿಸಿ ದಾಖಲೆ ನಿರ್ಮಿಸಿದೆ.[ಬೆಂಗಳೂರು-ಮೈಸೂರು ಬುಲೆಟ್ ರೈಲು ಭಾಗ್ಯ ಅಸಾಧ್ಯ]

ಅಯಸ್ಕಾಂತ ಬಲದಿಂದ ಸಂಚರಿಸುವ ರೈಲು ಪರೀಕ್ಷಾರ್ಥ ಸಂಚಾರದಲ್ಲಿ ಗರಿಷ್ಠ 603 ಕಿ.ಮೀ. ವೇಗದಲ್ಲಿ ಸಂಚರಿಸಿದೆ. ಸರಾಸರಿ 600 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಮೂಲಕ ಹಿಂದಿನ ದಾಖಲೆಗಳನ್ನೆಲ್ಲ ಮುರಿದಿದೆ ಎಂದು ಜಪಾನ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರೈಲು ಒಂದು ವಾರದ ಹಿಂದೆ ಪ್ರಯೋಗಾರ್ಥ ಸಂಚಾರ ಮಾಡಿದ್ದಾಗ 590 ಕಿ.ಮೀ. ವೇಗದಲ್ಲಿ ಸಂಚರಿಸಿತ್ತು, ಈ ಮೂಲಕ 2003ರಲ್ಲಿ ನಿರ್ಮಿಸಿದ್ದ 581 ಕಿ.ಮೀ. ವೇಗದ ದಾಖಲೆಯನ್ನು ಅಳಿಸಿಹಾಕಿತ್ತು.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]
ಅಯಸ್ಕಾಂತಿಯ ಬಲದ ರೈಲು ಹಳಿಯಿಂದ 4 ಇಂಚು ಎತ್ತರದಲ್ಲಿ ತೇಲುತ್ತಾ ಸಂಚರಿಸುತ್ತದೆ. ರೈಲಿಗೆ ವಿದ್ಯುತ್ಚ್ಛಕ್ತಿ ಆಧರಿತ ಅಯಸ್ಕಾಂತಗಳು ಚಲನ ಶಕ್ತಿ ನೀಡುತ್ತವೆ. ಜಪಾನ್ 2027ರ ವೇಳೆಗೆ ಟೋಕಿಯೋ ಮತ್ತು ನಗೋಯ ನಗರಗಳ ನಡುವೆ 286 ಕಿ.ಮೀ. ದೂರದ ಹಳಿ ನಿರ್ಮಿಸಿ ರೈಲು ಸಂಚಾರ ಆರಂಭಿಸುವ ಯೋಜನೆ ಹೊಂದಿದೆ. ಕಾರಿನಲ್ಲಿ ಸಂಚರಿಸಲು 5 ಗಂಟೆ ಕಾಲ ಬೇಕು. ಆದರೆ ಈ ರೈಲು ಕಾರ್ಯರೂಪಕ್ಕೆ ಬಂದರೆ 40 ನಿಮಿಷದಲ್ಲಿ ಎರಡು ನಗರಗಳ ನಡುವೆ ಸಂಚರಿಸಬಹುದು.
ತಂತ್ರಜ್ಞಾನವನ್ನು ವಿದೇಶಗಳಿಗೆ ಮಾರಾಟ ಮಾಡಲು ಜಪಾನ್ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ವಿಮಾನ ಹಾರಾಟದ ಅನುಭವವನ್ನು ರೈಲಿನಲ್ಲಿಯೇ ಪಡೆಯಬಹುದಾಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications