ಕೊರೊನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಇಡೀ ವಿಮಾನವನ್ನೇ ಬುಕ್ ಮಾಡಿಕೊಂಡ ಪ್ರಯಾಣಿಕ
ಜಕಾರ್ತಾ, ಜನವರಿ 8: ಕೊರೊನಾ ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಿದ್ದರೂ ಅನೇಕರು ಸೋಂಕಿಗೆ ತುತ್ತಾಗಿದ್ದಾರೆ. ಹೀಗಿರುವಾಗ ತಮ್ಮ ವ್ಯವಹಾರ ಕೆಲಸಗಳಿಗಾಗಿ ಸದಾ ಪ್ರಯಾಣಿಸುತ್ತಿರಬೇಕಾದವರ ಪಾಡೇನು? ಕೋವಿಡ್ ಮಾರ್ಗಸೂಚಿಗಳಲ್ಲಿನ ನಿಯಮಗಳು ಸಡಿಲಿಕೆಯಾದಂತೆಯೇ ಅನೇಕರು ಲಭ್ಯವಿರುವ ವಿಮಾನ ವ್ಯವಸ್ಥೆಗಳನ್ನು ಬಳಸಿಕೊಂಡು ಓಡಾಟ ಅರಂಭಿಸಿದ್ದಾರೆ. ಹೆಚ್ಚಿನ ಪ್ರಯಾಣಿಕರು ಮಾಸ್ಕ್, ಪಿಪಿಇ ಕಿಟ್, ಶೀಲ್ಡ್ ಧರಿಸಿ ತಮ್ಮನ್ನು ವೈರಸ್ನಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಇಂಡೋನೇಷ್ಯಾದ ಜಕಾರ್ತಾದ ವ್ಯಕ್ತಿಯೊಬ್ಬರು ವಿನೂತನ ಮಾರ್ಗ ಅನುಸರಿಸಿದ್ದಾರೆ. ತನ್ನ ಹಾಗೂ ತನ್ನ ಸಂಗಾತಿಯನ್ನು ವೈರಸ್ನಿಂದ ರಕ್ಷಿಸಿಕೊಳ್ಳಲು ವಿಮಾನದಲ್ಲಿ ಬೇರೆ ಯಾವ ಪ್ರಯಾಣಿಕರೂ ಬರದಂತೆ ಇಡೀ ವಿಮಾನವನ್ನೇ ಬುಕ್ ಮಾಡಿಕೊಂಡಿದ್ದಾರೆ.
ವೈರಸ್ ಬಗ್ಗೆ ಭೀತಿ ಹೊಂದಿದ್ದ ರಿಚರ್ಡ್ ಮುಲ್ಜಾದಿ ಎಂಬುವವರು ಬಾಲಿಗೆ ಪ್ರಯಾಣಿಸಲು ಸಂಪೂರ್ಣ ವಿಮಾನವನ್ನೇ ಬುಕ್ ಮಾಡಿಕೊಂಡಿದ್ದರಂತೆ. ತಮಗೆ ಹಾಗೂ ತಮ್ಮ ಪತ್ನಿ ಶಲ್ವಿನ್ನೆ ಚಾಂಗ್ ಅವರಿಗಾಗಿ ವಿಮಾನದ ಎಲ್ಲ ಆಸನಗಳನ್ನೂ ಬುಕ್ ಮಾಡಿದ್ದಾಗಿ ಮುಲ್ಜಾದಿ ಅವರು ಜನವರಿ 4ರಂದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೊಂಡಿದ್ದರು. ಖಾಲಿವಿಮಾನದಲ್ಲಿ ಮುಲ್ಜಾದಿ ಅವರು ಕುಳಿತ ಫೋಟೊವನ್ನು ಕೂಡ ಹಂಚಿಕೊಂಡಿದ್ದರು. ವೈರಸ್ನಿಂದ ಕಾಪಾಡಿಕೊಳ್ಳಲು ಈ ಕ್ರಮ ಅನುಸರಿಸಿದ್ದಾಗಿ ತಿಳಿಸಿದ್ದರು.

'ನಾನು ಎಷ್ಟು ಸಾಧ್ಯವೋ ಅಷ್ಟು ಸೀಟ್ಗಳನ್ನು ಬುಕ್ ಮಾಡಿಕೊಂಡ ಬಳಿಕ ಗೊತ್ತಾಗಿದ್ದೇನೆಂದರೆ ಖಾಸಗಿ ಜೆಟ್ ಅನ್ನು ಹೊಂದುವುದಕ್ಕಿಂತ ಇದೇ ಅಗ್ಗ. ಇದು ಒಳ್ಳೆಯ ತಂತ್ರ' ಎಂದು ಅವರು ಹೇಳಿಕೊಂಡಿದ್ದಾರೆ.
ತಮ್ಮೊಂದಿಗೆ ಬರುವ ಇತರೆ ಪ್ರಯಾಣಿಕರು ವೈರಸ್ ಹೊತ್ತು ತರುವ ಅಪಾಯವಿರುವುದರಿಂದ ಅವರು ತಮ್ಮಿಬ್ಬರಿಗಾಗಿಯೇ ವಿಮಾನ ಬುಕ್ ಮಾಡಿಕೊಂಡಿದ್ದಾರೆ. ವಿಮಾನದಲ್ಲಿ ತಮ್ಮಿಬ್ಬರ ಹೊರತು ಯಾವ ಪ್ರಯಾಣಿಕರೂ ಇರಬಾರದು ಎನ್ನುವುದನ್ನು ನೋಡಿಕೊಳ್ಳುವುದು ತಮ್ಮ ಜವಾಬ್ದಾರಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಲಯನ್ ಏರ್ ಗ್ರೂಪ್ನ ಸ್ಥಳೀಯ ಪತ್ರಿಕೆ ಡೆಟಿಕ್ ಟ್ರಾವೆಲ್ ಜಕಾರ್ತಾದಿಂದ ಬಾಲಿಯ ಡೆನ್ಪಸಾರ್ಗೆ ವಿಮಾನದಲ್ಲಿ ಈ ಇಬ್ಬರು ಮಾತ್ರವೇ ತೆರಳಿದ್ದರು. ಆದರೆ ಇಬ್ಬರು ಪ್ರಯಾಣಿಕರು ಮಾತ್ರವೇ ಟಿಕೆಟ್ ಖರೀಸಿದ್ದರು ಎಂದು ಹೇಳಿದೆ. ದುಂದುವೆಚ್ಚಕ್ಕೆ ಹೆಸರಾದ ಮುಲ್ಜಾದಿ ಕುರಿತು ತಿಳಿದವರು ಅವರ ಹೇಳಿಕೆ ನಿಜವಾಗಿರುತ್ತದೆ ಎಂದಿದ್ದಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications