ಚರ್ಚೆ: ಭಾರತದ ಜತೆ ನಂಟು ಗಟ್ಟಿ ಮಾಡಿಕೊಳ್ಳಲು ತಪ್ಪಿಸಿಕೊಂಡಿತೆ ಯುಕೆ?
ಇದು ಯುಕೆ- ಭಾರತ ಸಪ್ತಾಹ. ಬ್ರೆಕ್ಸಿಟ್ ನಂತರ ಭಾರತದ ಜತೆ ಬಾಂಧವ್ಯ ಬೆಳೆಸುವ ಹಾಗೂ ಹತ್ತಿರವಾಗುವ ಅವಕಾಶವನ್ನು ಬ್ರಿಟನ್ ತಪ್ಪಿಸಿಕೊಂಡು ಬಿಟ್ಟಿತಾ? ಕೋಬ್ರಾ ಬಿಯರ್ ನ ಸ್ಥಾಪಕ ಹಾಗೂ ಅಧ್ಯಕ್ಷ ಮತ್ತು ಯು.ಕೆ. ಕೌನ್ಸಿಲ್ ಫಾರ್ ಇಂಟರ್ ನ್ಯಾಷನಲ್ ಸ್ಟೂಡೆಂಟ್ ಅಫೇರ್ಸ್ ಅಧ್ಯಕ್ಷ ಲಾರ್ಡ್ ಬಿಲಿಮೊರಿಯಾ ಪ್ರಕಾರ, ಇದಕ್ಕೆ ಉತ್ತರ ಹೌದು.
ಬ್ರಿಟನ್ ನ ವಲಸೆ ನೀತಿ ವಿಚಾರವಾಗಿ ಅಲ್ಲಿನ ಸರಕಾರ ಸಕಾರಾತ್ಮಕ ಹೆಜ್ಜೆಗಳನ್ನು ಇಡದ ಪರಿಣಾಮ ಭಾರತದ ಜತೆಗೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳುವ ಅವಕಾಶ ಕಡಿಮೆ ಮಾಡಿಕೊಂಡಿತು. ಚೀನಿಯರಿಗೆ ಹೋಲಿಸಿದರೆ ವ್ಯಾಪಾರ ಉದ್ದೇಶಕ್ಕೆ ಹಾಗೂ ಪ್ರವಾಸಿ ವೀಸಾಕ್ಕಾಗಿ ಭಾರತೀಯರು ನಾಲ್ಕು ಪಟ್ಟು ಹೆಚ್ಚು ವೀಸಾ ಶುಲ್ಕ ಪಾವತಿಸಬೇಕು. ಇದು ಎರಡು ವರ್ಷದ ಅವಧಿಯ ಮಲ್ಟಿಪಲ್ ವೀಸಾ ಎಂಟ್ರಿಗೆ.
ಮುಕ್ತ ವ್ಯಾಪಾರ ಒಪ್ಪಂದವೂ ಸೇರಿ ಯುಕೆ- ಭಾರತದ ಬಾಂಧವ್ಯ ಗಟ್ಟಿಯಾದರೆ ಬ್ರಿಟನ್ ಸರಕಾರದ ವಲಸೆ ನೀತಿಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ ಎಂದು ಬಿಲಿಮೊರಿಯಾ ಅಭಿಪ್ರಾಯಪಟ್ಟಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದ ಅಂದರೆ ಸುಂಕ- ತೆರಿಗೆ ಮಾತ್ರವಲ್ಲ, ಅದರಲ್ಲಿ ಜನರೂ ಸೇರಿರುತ್ತಾರೆ. ಉದ್ಯಮಿಗಳು, ನುರಿತ ಕೆಲಗಾರರು, ವಿದ್ಯಾರ್ಥಿಗಳು ಹೀಗೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಯುಕೆ ವಿವಿಗಳಲ್ಲಿ ವ್ಯಾಸಂಗಕ್ಕೆ ಕೆಲ ವಿನಾಯಿತಿ ನೀಡಬೇಕು. ಆದರೆ ಅದು ಸಾಧ್ಯವಾಗುವಂತೆ ಕಾಣುವುದಿಲ್ಲ ಎನ್ನುತ್ತಾರೆ ಅವರು.
ಆದರೆ, ಇಂಡಿಯಾ ಇಂಕ್ ನ ಸ್ಥಾಪಕರಾದ ಮನೋಜ್ ಲಾಡ್ವಾ ಯುಕೆ- ಇಂಡಿಯಾ ಸಪ್ತಾಹವನ್ನು ದೊಡ್ಡ ಮಟ್ಟದ ಸಕಾರಾತ್ಮಕ ಅವಕಾಶವಾಗಿ ನೋಡುತ್ತಾರೆ. ಭಾರತದ ಪಾಲಿಗೆ ಬ್ರಿಟನ್ ಇಡೀ ಯುರೋಪಿನ ಮುಖ್ಯಬಾಗಿಲು. ಭಾರತದಲ್ಲಿ ಹೂಡಿಕೆ ಹೆಚ್ಚಲು ಲಂಡನ್ ಷೇರು ಮಾರುಕಟ್ಟೆ ಒಳ್ಳೆ ಅವಕಾಶ ಎನ್ನುತ್ತಾರೆ.
ಇದೊಂದು ಜೀವನ ಬದಲಾವಣೆಯ ಕಾಲ. ಈ ಅವಕಾಶ ಸಿಕ್ಕಿರುವುದಕ್ಕೆ ನಾವು ಅದೃಷ್ಟವಂತರು ಎನ್ನುತ್ತಾರೆ ಮನೋಜ್ ಲಾಡ್ವಾ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications