Israel: ಮ್ಯೂಸಿಕ್ ಫೆಸ್ಟಿವಲ್ಗೆ ನುಗ್ಗಿ ನೂರಾರು ಜನರ ಕೊಂದ ಉಗ್ರರು
ಅವರು ವೀಕೆಂಡ್ ಮಸ್ತಿಯಲ್ಲಿ ಮುಳುಗಿದ್ದರು, ಮ್ಯೂಸಿಕ್ ಹಾಕಿಕೊಂಡು ವಾರದ ಅಷ್ಟೂ ನೋವು ಮರೆತು ಎಂಜಾಯ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ರಾಕೆಟ್ ಹಾರಿ ಹೋದವು. ಆಗಲೇ ಅವರೆಲ್ಲಾ ಎಚ್ಚೆತ್ತುಕೊಂಡು ಜಾಗ ಖಾಲಿ ಮಾಡಿದ್ದರೆ ಬಚಾವ್ ಆಗಿ ತಮ್ಮ ಜೀವ ಉಳಿಸಿಕೊಳ್ತಿದ್ದರು ಅಂತಾ ಕಾಣುತ್ತೆ. ಇಷ್ಟೆಲ್ಲಾ ನಡೆದರೂ ಮೈಮರೆತು ಕೇರ್ ಮಾಡದೆ ಡಾನ್ಸ್ ಮಾಡುತ್ತಿದ್ದವರ ಹೆಣ ಕೆಡವಿದ್ದಾರೆ ರಾಕ್ಷಸ ಉಗ್ರರು.
ಎಲ್ಲೆಲ್ಲೂ ಚೆಲ್ಲಾಡಿರುವ ರಕ್ತ, ಸ್ಫೋಟಗೊಂಡು ಚೆಲ್ಲಾಪಿಲ್ಲಿ ಆಗಿರುವ ಕಾರುಗಳು. ಇದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ದಾಳಿಯ ಭೀಕರ ದೃಶ್ಯ. ಅದ್ರಲ್ಲೂ ಪಾಪಿ ಉಗ್ರರ ದಾಳಿಯ ಭಯಾನಕತೆ ಬಿಂಬಿಸುವಂತೆ ಮ್ಯೂಸಿಕ್ ಫೆಸ್ಟಿವಲ್ ನಡೆಯುತ್ತಿದ್ದ ಜಾಗ ಇದೀಗ ಸ್ಮಶಾನವಾಗಿ ಬದಲಾಗಿದೆ. ಅಂದಹಾಗೆ ಹಮಾಸ್ ಉಗ್ರರ ಗ್ಯಾಂಗ್ ಇಸ್ರೇಲ್ ಮೇಲೆ ದಾಳಿ ಮಾಡಿದ ವೇಳೆ, ಗಾಜಾ ಪಟ್ಟಿಯಿಂದ ಕೇವಲ 14 ಕಿ.ಮೀ ದೂರದಲ್ಲಿನ ಕಿಬ್ಬುಟ್ಸ್ ಎಂಬ ಮರುಭೂಮಿಯಲ್ಲಿ ಮ್ಯೂಸಿಕ್ ಫೆಸ್ಟಿವಲ್ ನಡೆಯುತ್ತಿತ್ತು. ಆಗಲೇ ನೋಡಿ ಅಲ್ಲಿಗೆ ನುಗ್ಗಿದ್ದು ಗನ್ ಹಿಡಿದ ಈ ಹಮಾಸ್ ಬಂಡುಕೋರರ ಗ್ಯಾಂಗ್.

ಮ್ಯೂಸಿಕ್ ಫೆಸ್ಟಿವಲ್ ಸ್ಮಶಾನವಾಯ್ತು!
ಅಂದಹಾಗೆ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಯಾವಾಗ ಹಮಾಸ್ ಉಗ್ರಪಡೆ ನುಗ್ಗಿತ್ತೋ, ಆಗಲೇ ನೋಡಿ ರಕ್ತಪಾತ ನಡೆದಿತ್ತು. ಇಡೀ ಇಸ್ರೇಲ್ ಮೇಲೆ ಮೊನ್ನೆ ನಡೆದ ದಾಳಿ ಒಂದು ಕಡೆಯಾದರೆ, ಮ್ಯೂಸಿಕ್ ಫೆಸ್ಟಿವಲ್ ಮೇಲೆ ನಡೆದಿರುವ ದಾಳಿ ಮತ್ತೊಂದು ಭಯಾನಕ ಅಧ್ಯಾಯ ಬಿಡಿಸಿಟ್ಟಿದೆ. ಈ ಪ್ರದೇಶಕ್ಕೆ ಗಾಜಾ ಪಟ್ಟಿಯಿಂದ ನುಗ್ಗಿ ಬಂದಿದ್ದ ಹಮಾಸ್, ಕಂಡ ಕಂಡವರ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ನೂರಾರು ಇಸ್ರೇಲ್ನ ನಾಗರಿಕರು ಮೃತಪಟ್ಟಿದ್ದು, ಸುಮಾರು 260ಕ್ಕೂ ಹೆಚ್ಚು ಶವ ಇಲ್ಲಿ ತನಕ ಪತ್ತೆಯಾಗಿವೆ.
Missiles were seen flying towards the Music Festival in Israel when the Hamas Militants stormed the Israeli territory 🇮🇱🇵🇸#Israel #Palestine #War #Hamas #Rockets #Gaza #Palestinian#TelAviv #IsraelUnderAttack #IDF #Lebanon #Jerusalem #Hezbollah pic.twitter.com/b7rXVavvrI
— T R U T H P O L E (@Truthpole) October 9, 2023
ಉಗ್ರರಿಂದ 30 ಜನರ ಅಪಹರಣ?
ಹಮಾಸ್ ಉಗ್ರರು ಕೇವಲ ಜೀವ ತೆಗೆದಿಲ್ಲ, ಇದರ ಜೊತೆಗೆ ಹಲವರನ್ನು ಅಪಹರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ ಇದಕ್ಕೆ ಸಾಕ್ಷಿಯಾಗಿ, ಹತ್ತಾರು ವಿದ್ಯಾರ್ಥಿಗಳು ಮತ್ತು ಇಸ್ರೇಲ್ ಪ್ರಜೆಗಳನ್ನೂ ಹಮಾಸ್ ಉಗ್ರರು ಅಪಹರಣ ಮಾಡಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಇಸ್ರೇಲಿ ವಿದ್ಯಾರ್ಥಿನಿಯನ್ನ ಹಮಾಸ್ ಬಂಡುಕೋರರು ಕಿಡ್ನಾಪ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಹೀಗೆ ಸುಮಾರು 30 ಜನ ಹಮಾಸ್ ಉಗ್ರರ ವಶದಲ್ಲಿರುವ ಆರೋಪ ಕೇಳಿಬಂದಿದೆ.
Praying for the people of Israel pic.twitter.com/lvmDv4ko7K
— ❤️LoLo (@ZOrtiz99) October 7, 2023
ಯುದ್ಧ ಶುರುವಾಗಿದ್ದು ಯಾವಾಗ?
ಶನಿವಾರ ಹಮಾಸ್ ಉಗ್ರ ಪಡೆ, ಇಸ್ರೇಲ್ನ ಕಡೆಗೆ 5000ಕ್ಕೂ ಹೆಚ್ಚು ರಾಕೆಟ್ನ್ನ ಒಂದೇ ಬಾರಿಗೆ ಉಡಾಯಿಸಿತ್ತು. ಅಲ್ಲದೆ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ಹೀಗೆ ಗಾಜಾಪಟ್ಟಿಯ ಮೂಲಕ ಹಮಾಸ್ ಉಗ್ರರು ಇಸ್ರೇಲ್ನ ಒಳಗೆ ಬರುವಾಗ, ಇಸ್ರೇಲ್ನ ಮ್ಯೂಸಿಕ್ ಫೆಸ್ಟಿವಲ್ ಜಾಗ ಸುಮಾರು 14 ಕಿ.ಮೀ. ದೂರ ಇತ್ತು. ಮೊದಲು ಅಲ್ಲಿಗೆ ನುಗ್ಗಿದ ಉಗ್ರರು ಮನಸ್ಸಿಗೆ ಬಂದಂತೆ ಹಿಂಸೆ ನಡೆಸಿದ್ದಾರೆ. ಇದು ಮಾತ್ರವಲ್ಲದೆ ಇಸ್ರೇಲ್ನ ವಿವಿಧೆಡೆ ಹಮಾಸ್ ನಡೆಸಿದ ದಾಳಿಗೆ, ಇಸ್ರೇಲ್ನಲ್ಲಿ ಈವರೆಗೂ 500ಕ್ಕೂ ಹೆಚ್ಚು ಜನರು ಬಲಿಯಾಗಿರುವ ಆರೋಪ ಕೇಳಿಬಂದಿದೆ. ಹಾಗೂ ಎರಡೂ ಕಡೆ 1000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
Aftermath of shooting massacre at the Supernova music festival in Israel pic.twitter.com/V6OZ9x7SB8
— News Now 24🌐 (@GlobalNewsNow24) October 8, 2023
ಇರಾನ್ ಬೆಂಬಲದಿಂದ ಉಗ್ರರ ದಾಳಿ?
ಹಮಾಸ್ ಉಗ್ರರು ಇಷ್ಟೊಂದು ಭೀಕರ ದಾಳಿ ನಡೆಸಲು ಶಸ್ತ್ರಾಸ್ತ್ರಗಳು ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆ ಜಗತ್ತನ್ನೇ ಕಾಡುತ್ತಿದೆ. ಮತ್ತೊಂದು ಕಡೆ ಇರಾನ್ ವಿರುದ್ಧ ಆರೋಪ ಇದೀಗ ಕೇಳಿಬರುತ್ತಿದೆ. ಅಲ್ಲದೆ ಹಮಾಸ್ ದಾಳಿ ನಡೆಸಿದ್ದ ದಿನ ಇರಾನ್ ಸೇನಾ ಕಮಾಂಡರ್ ಈ ದಾಳಿಯನ್ನ ಸಮರ್ಥಿಸಿಕೊಂಡಿದ್ದರು. ಹೀಗಾಗಿ ಇರಾನ್ ಕೈವಾಡ ಇದೆ ಎಂಬ ಆರೋಪದ ಮಧ್ಯೆ, ಇಸ್ರೇಲ್ಗೆ ಅಮೆರಿಕ ಬೆಂಬಲ ನೀಡಿದೆ. ಸಾವಿರಾರು ಕೋಟಿ ರೂಪಾಯಿ ಸಹಾಯ ಮಾಡಿರುವ ಅಮೆರಿಕ, ಇಸ್ರೇಲ್ಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾಗಿದೆ. ಈ ಮೂಲಕ ಮತ್ತೊಂದು ಘೋರ ಯುದ್ಧಕ್ಕೆ ಜಗತ್ತು ಸಜ್ಜಾಗಿದೆ.
Noa was partying in the south of Israel in a peace music festival when Hams terrorists kidnapped her and dragged her from Israel into Gaza.
— Hen Mazzig (@HenMazzig) October 7, 2023
Noa is held hostage by Hamas.
She could be your daughter, sister, friend.#BringBackOurFamily pic.twitter.com/gi2AStVdTQ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications