Israel War: ಜೀವ ಉಳಿಸಿಕೊಳ್ಳಲು ಗಂಟು-ಮೂಟೆ ಕಟ್ಟಿಕೊಂಡು ಓಡಿದ ಜನ
ಹಮಾಸ್ ವಿರುದ್ಧ ಕೋಪಕ್ಕೆ, ಇಡೀ ಗಾಜಾಪಟ್ಟಿ ನಗರವನ್ನೇ ಸರ್ವನಾಶ ಮಾಡುತ್ತಿದೆ ಇಸ್ರೇಲ್ ಸೇನೆ. ಇದೇ ಸಮಯದಲ್ಲಿ ಗಾಜಾಪಟ್ಟಿ ಜನರಿಗೆ ಊರು ಬಿಟ್ಟು ಹೋಗಿ ಅಂತಾ ಇಸ್ರೇಲ್ ಸೇನೆ ಖಡಕ್ ಎಚ್ಚರಿಕೆ ನೀಡಿದೆ. ಈಗಾಗಲೇ ಸಾವಿರಾರು ಅಮಾಯಕರು ಬಲಿಯಾದ ಹಿನ್ನೆಲೆ ಜನರು ತಮ್ಮ ಮತ್ತು ತಮ್ಮ ಕುಟುಂಬದ ಜೀವ ಉಳಿಸಿಕೊಳ್ಳಲು ಗಾಜಾಪಟ್ಟಿ ಬಿಟ್ಟು ಹೋಗುತ್ತಿದ್ದಾರೆ. ಹಾಗಾದರೆ ಹೇಗಿದೆ ಈಗ ಗಾಜಾಪಟ್ಟಿ ಪರಿಸ್ಥಿತಿ? ಸಂಪೂರ್ಣ ಚಿತ್ರಣ ಇಲ್ಲಿದೆ.
ಹಮಾಸ್ & ಇಸ್ರೇಲ್ ನಡುವೆ ಯುದ್ಧ ಶುರುವಾಗಿ ಇಂದಿಗೆ ಸರಿಯಾಗಿ ಒಂದು ವಾರ ಕಳೆದಿದೆ. ಈ ಸಮಯದಲ್ಲೇ ಇಸ್ರೇಲ್ ಕಡೆ 1300 ಕ್ಕೂ ಹೆಚ್ಚು ಜನ ಹಾಗೂ ಪ್ಯಾಲೆಸ್ತೀನ್ ಕಡೆ 1800 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ವಾಯುದಾಳಿ ಜೊತೆ ಇಸ್ರೇಲ್ ಗಾಜಾಪಟ್ಟಿ ಮೇಲೆ ಭೂಸೇನೆಯನ್ನೂ ನುಗ್ಗಿಸುತ್ತಿದೆ. ಹೀಗಾಗಿ ಸ್ಥಿತಿ ಕೈಮೀರಿ ಹೊಗಿದ್ದು ನೀವು ಗಾಜಾಪಟ್ಟಿ ಬಿಟ್ಟು ಹೋಗಿ ಅಂತಾ ಇಸ್ರೇಲ್ ಸೇನೆ ಗಾಜಾ ನಿವಾಸಿಗಳಿಗೆ ಆಗ್ರಹಿಸಿದೆ. ಇಷ್ಟೆಲ್ಲ ಹಿಂಸಾಚಾರ ನಡುವೆ ಜನ ಕೂಡ ಜೀವ ಉಳಿಸಿಕೊಳ್ಳಲು ಗಂಟು-ಮೂಟೆ ಕಟ್ಟಿದ್ದಾರೆ.

ಎಲ್ಲಿಗೆ ಹೋಗುವುದು.. ಏನು ಮಾಡುವುದು?
ಗಾಜಾಪಟ್ಟಿ ಸಂಪೂರ್ಣ ನಾಶವಾಗಿ ಹೋಗಿದೆ ಏನೂ ತಪ್ಪು ಮಾಡದ ಸಾಮಾನ್ಯ ಜನರು ಇಲ್ಲಿ ಸಮಸ್ಯೆ ಸುಳಿಗೆ ಸಿಲುಕಿದ್ದಾರೆ ಎಂಬ ಆರೋಪ ಇದೆ. ಈ ಎಲ್ಲಾ ನೋವುಗಳ ನಡುವೆ ಜನರಿಗೆ ಎಲ್ಲಿ ಹೊಗುವುದು? ಏನು ಮಾಡುವುದು? ಅನ್ನೋದೆ ತಿಳಿಯುತ್ತಿಲ್ಲ. ಬಹುತೇಕ ಉತ್ತರ ಗಾಜಾ ಪ್ರದೇಶದಿಂದ, ಸಾಮಾನ್ಯ ಜನರು ಬೇರೆ ಬೇರೆ ಜಾಗಗಳಿಗೆ ಹೋಗುತ್ತಿದ್ದಾರೆ. ಹೀಗಾಗಿ ಟ್ರಾಫಿಕ್ ಕೂಡ ಉಂಟಾಗಿದೆ. ಕಾರುಗಳು ಮುಖ್ಯ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿವೆ.
Gaza |
— Younis Tirawi | يونس (@ytirawi) October 13, 2023
Residents in North Gaza (Gaza City, Beit Lahia, Beit Hanoun, and Jabalia RC) are evacuating their homes in response to the Israeli military's threat that those who stay could face deadly consequences. pic.twitter.com/ZOlU0Rg5Rj
ಹಾಗೇ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗಾಜಾಪಟ್ಟಿ ಬಿಟ್ಟು ಹೋದರೆ ನಾವು ಸುರಕ್ಷಿತ ಎಂಬುದು ಜನರಿಗೆ ಗೊತ್ತಾಗಿದೆ. ಹೀಗಾಗಿ ಜನರನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಹಾಗೇ ಜನರು ಹಾಸಿಗೆ, ದಿಂಬು, ಬಟ್ಟೆಗಳನ್ನ ಕಾರ್ ಮೇಲೆ ಕಟ್ಟಿಕೊಂಡು ಹೋಗುತ್ತಿದ್ದಾರೆ. ಗಾಜಾದ ಗಲ್ಲಿ ಗಲ್ಲಿಗಳಲ್ಲೂ ಇದೇ ಸೀನ್ ಕಾಣುತ್ತಿದೆ. ಕಾರಿನ ವ್ಯವಸ್ಥೆ ಇಲ್ಲದವರು & ಬಡವರು ಇತರರ ಜೊತೆ ಸೇರಿ ಟ್ರಕ್ಗಳ ಮೂಲಕ ತಮ್ಮ ವಸ್ತುಗಳೊಂದಿಗೆ ಸುರಕ್ಷಿತ ಜಾಗಗಳಿಗೆ ಹೋಗುತ್ತಿದ್ದಾರೆ.

ಹಮಾಸ್ ನೆಲೆಗಳ ಮೇಲೆ ಭೀಕರ ದಾಳಿ?
ಗಾಜಾಪಟ್ಟಿ ಮೊದಲೇ ಬಡತನ ಹಸಿವಿನಿಂದ ಬಳಲಿದೆ. ಈ ಮಧ್ಯೆ ಹಮಾಸ್ ಕಾಟ ಶುರುವಾಗಿದೆ. ಉಗ್ರರು & ಬಡತನ ನಡುವೆ ನರಳುತ್ತಿದ್ದ ಗಾಜಾಪಟ್ಟಿಯ ಸಾಮಾನ್ಯ ಜನರೀಗ ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಮಾಸ್ ಹೊಡೆದು ಹಾಕಲು ಇಸ್ರೇಲ್ ಮುಂದಾಗಿದ್ದರೆ, ಕೈಗೆ ಸಿಗುತ್ತಿರುವುದು ಮಾತ್ರ ಸಾಮಾನ್ಯ ಜನ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ವಿರುದ್ಧ ಆಕ್ರೋಶ ಕೂಡ ಮೊಳಗಿತ್ತು. ಹೀಗಾಗಿ ಅಲರ್ಟ್ ಆಗಿರುವ ಇಸ್ರೇಲ್ ಸೇನೆ, ಮೊದಲು ಸಾಮಾನ್ಯ ಜನರು ಗಾಜಾಪಟ್ಟಿ ಬಿಟ್ಟು ಹೋಗಲಿ ಎಂದು ಆದೇಶ ನೀಡಿದೆ. ಆ ನಂತರ ಹಮಾಸ್ ನೆಲೆಗಳ ಮೇಲೆ ಭೀಕರ ದಾಳಿ ನಡೆಸಲು ಇಸ್ರೇಲ್ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.
ಇಸ್ರೇಲ್ ಸೇನಾ ಶಕ್ತಿ ಬಲಶಾಲಿ ದೇಶಗಳನ್ನೇ ಮೀರಿಸುತ್ತೆ ಇಸ್ರೇಲ್ ವಾಯು ಸೇನೆಯ ಬಳಿ ಡ್ರೋನ್ ಸೇರಿ 684 ಯುದ್ಧ ವಿಮಾನ ಇವೆ. ಇಸ್ರೇಲ್ ಭೂ ಸೇನೆ ಬಲವಾಗಿದ್ದು, 2500 ಯುದ್ಧ ಟ್ಯಾಂಕರ್ ಹಾಗೂ 5000 ಶಸ್ತ್ರಾಸ್ತ್ರ ಸಾಗಿಸುವ ವಾಹನ ಇದೀಗ ಗಾಜಾಪಟ್ಟಿ ಕಡೆಗೆ ನುಗ್ಗುತ್ತಿವೆ. ಇದರ ಜೊತೆ ಸುಮಾರು 3,00,000 ಇಸ್ರೇಲಿ ಸೈನಿಕರು ಗಾಜಾಪಟ್ಟಿ ಮೇಲೆ ದಾಳಿ ಮಾಡಿ, ಹಮಾಸ್ ನೆಲೆಗಳ ನಾಶ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಮೊದ್ಲು ಜೀವ ಉಳಿಸಿಕೊಳ್ಳೋಣ ಅಂತಾ ಜನರು ಕೂಡ ಓಡಿ ಹೋಗುತ್ತಿದ್ದಾರೆ. ತಮ್ಮ ಹಾಸಿಗೆ & ದಿಂಬು ಎಲ್ಲವನ್ನೂ ಕಾರ್ಗೆ ಕಟ್ಟಿಕೊಂಡು ಓಡುತ್ತಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications