ಕನ್ನಡತಿ ಸವಿತಾ ಬಲಿದಾನದಿಂದ ಬದಲಾಯಿತು ಐರ್ಲೆಂಡ್ ಕಾನೂನು
ಡುಬ್ಲಿನ್, ಡಿಸೆಂಬರ್ 15: ಕನ್ನಡತಿ ಸವಿತಾ ಹಾಲಪ್ಪನವರ್ ಅವರ ಬಲಿದಾನದಿಂದ ಐರ್ಲೆಂಡ್ನಲ್ಲಿ ಕಾನೂನಿನಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿರುವ ಮಹತ್ತರ ಘಟನೆ ನಡೆದಿದೆ.
ಐರ್ಲೆಂಡ್ನಲ್ಲಿ ಇದುವರೆಗೆ ಇದ್ದ ಗರ್ಭಪಾತ ನಿಷೇಧ ಕಾನೂನಿಗೆ ತಿದ್ದುಪಡಿ ತಂದಿದ್ದು, ಇನ್ನು ಮುಂದೆ ಗರ್ಭವತಿಯ ಆರೋಗ್ಯಕ್ಕೆ ಕೆಡುಕಾಗುವಂತಿದ್ದರೆ ಗರ್ಭಪಾತ ಮಾಡಿಸಬಹುದಾಗಿದೆ. ಆದರೆ ಈ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿತ್ತು ಒಬ್ಬ ಕನ್ನಡತಿ.

ಬೆಳಗಾವಿ ಮೂಲಕ ದಂತವೈದ್ಯೆ ಸವಿತಾ ಹಾಲಪ್ಪನವರ್ ಅವರು ಐರ್ಲೆಂಡ್ನಲ್ಲಿದ್ದಾಗ ಗರ್ಭವತಿ ಆಗಿದ್ದ ಸಮಯದಲ್ಲಿ ರಕ್ತದ ಸೋಂಕಿಗೆ ತುತ್ತಾಗಿದ್ದರು. ಗರ್ಭಪಾತ ಆಗದಿದ್ದರೆ ಅವರು ಬದುಕುಳಿಯುವುದು ಅಸಾಧ್ಯವಾಗಿತ್ತು. ಸವಿತಾ ಅವರು ಗರ್ಭಪಾತಕ್ಕೆ ಅನುಮತಿ ಕೋರಿದರಾದರೂ ಕಾನೂನಿನಲ್ಲಿ ಅವಕಾಶ ಇರದ ಕಾರಣ ಗರ್ಭಪಾತ ಸಾಧ್ಯವಾಗದೆ ಅವರು ಸಾವನ್ನಪ್ಪಿದರು.
ಸವಿತಾ ಹಾಲಪ್ಪನವರ್ ಅವರ ಸಾವಿನ ನಂತರ ಐರ್ಲೆಂಡ್ನಲ್ಲಿ ಭಾರಿ ಜನಾಕ್ರೋಶ ಭುಗಿಲೆದ್ದಿತು. ಐರ್ಲೆಂಡ್ನ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅದರ ಪರಿಣಾಮ ನಿನ್ನೆಯಷ್ಟೆ ಐರ್ಲೆಂಡ್ ಸಂಸತ್ನಲ್ಲಿ ಗರ್ಭಪಾತ ನಿಷೇಧ ಕಾಯ್ದೆಯನ್ನು ಅಂಗೀಕರಿಸಿದೆ.
ಹೊಸ ಕಾನೂನಿನ ಅನ್ವಯ ಭ್ರೂಣದ ಬೆಳವಣಿಗೆ ಸ್ವಾಭಾವಿಕವಾಗಿರದೇ, ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಪಾಯವಿದ್ದರೆ ಅಂತಹ ಸಂದರ್ಭದಲ್ಲಿ 12 ವಾರಗಳವರೆಗಿನ ಭ್ರೂಣದ ಗರ್ಭಪಾತಕ್ಕೆ ಅವಕಾಶ ಸಿಗಲಿದೆ.
ಕಾನೂನು ತಿದ್ದುಪಡಿ ಆದ ಕೂಡಲೇ ಐರ್ಲೆಂಡ್ನಲ್ಲಿ ಸಂಭ್ರಮೋತ್ಸವ ಆಚರಿಸಲಾಗುತ್ತಿದ್ದು, ಸವಿತಾ ಹಾಲಪ್ಪನವರ್ ಅವರ ಭಾವಚಿತ್ರಕ್ಕೆ ಗೌರವನ್ನೂ ಸಲ್ಲಿಸಲಾಗುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications