US-Iran Talks: ಪಾಕ್ ನೆಲದಲ್ಲಿ 21 ಗಂಟೆಗಳ ಸಂಧಾನ ಮಾತುಕತೆ ವಿಫಲ: ಹೆಚ್ಚಿದ ಯುದ್ಧ ಭೀತಿ- ಪ್ರಮುಖಾಂಶಗಳು
ಕೊಲ್ಲಿ ರಾಷ್ಟ್ರಗಳ ಯುದ್ಧಕ್ಕೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿತ್ತು. ಈ ಸಂಬಂಧ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಇಸ್ರೇಲ್ ಮತ್ತು ಅಮೆರಿಕ-ಇರಾನ್ ಕದನ ವಿರಾಮ ಮಾತುಕತೆಗಳು ವಿಫಲವಾಗಿವೆ. ಉಭಯ ದೇಶಗಳು ಒಮ್ಮತ ನಿರ್ಧಾರಕ್ಕೆ ಬಂದಿಲ್ಲ, ಹೀಗಾಗಿ ಸಂಧಾನ ಮಾತುಕತೆ ಯಶಸ್ವಿಯಾಗಲಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ.
ಹಣಕಾಸು ಮತ್ತು ಭದ್ರತೆಗೆ ಅಮೆರಿಕವನ್ನು ಅವಲಂಬಿಸಿ, ನೆರೆಯ ಇರಾನ್ ಸಂಘರ್ಷದಿಂದ ದಶಕಗಳಷ್ಟು ಹಿಂದೆ ಸರಿಯುವ ಅಪಾಯದಲ್ಲಿದೆ ಪಾಕಿಸ್ತಾನ. ಇಸ್ಲಾಮಾಬಾದ್ನಲ್ಲಿ ನಡೆದ ಈ ಮಾತುಕತೆಗಳ ಮುನ್ನ ವ್ಯಾನ್ಸ್, ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಉಪಪ್ರಧಾನಿ ಮೊಹಮ್ಮದ್ ಇಶಾಕ್ ದಾರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಸಂಧಾನ ವಿಫಲ ಹಿನ್ನೆಲೆ ಅಮೆರಿಕ ನಿಯೋಗ ಅತೃಪ್ತಿಯಿಂದ ಪಾಕಿಸ್ತಾನವನ್ನು ತೊರೆದಿದೆ.

ಸುಮಾರು 21 ಗಂಟೆಗಳ ಕಾಲ ಇಸ್ಲಾಮಾಬಾದಿನಲ್ಲಿ ನಡೆದ ಮಾತುಗಳು ಫಲಿಸಲಿಲ್ಲ. ಇರಾನ್ vs ಇಸ್ರೇಲ್- ಅಮೆರಿಕಾ ಮಧ್ಯೆ ಅನಿಶ್ಚಿತೆ ಮುಂದುವರಿಯಲಿದೆ. ಅದು ಜಾಗತಿಕವಾಗಿಯು ಪರಿಣಾಮ ಬೀರಲಿದೆ. ಹಿಂದಿನಿಂದಲೂ ಇರಾನ್ಗೆ ಸಾಕಷ್ಟು ಆಫರ್ಗಳನ್ನು ನೀಡಿದ್ದಾಗಿ ಯುಎಸ್ ಹೇಳಿಕೊಂಡಿದೆ.
ಪಾಕಿಸ್ತಾನಕ್ಕೆ ರಾಜತಾಂತ್ರಿಕ ಹಿನ್ನಡೆ
ಇಂದಿನ ಈ ನಿರ್ಣಾಯಕ ಮಾತುಕತೆಗಳ ವೈಫಲ್ಯ ಪಾಕಿಸ್ತಾನಕ್ಕೆ ಕೇವಲ ರಾಜತಾಂತ್ರಿಕ ಹಿನ್ನಡೆಯಾದಂತಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆಯಾಗಿದೆ. ಇದೇ ಕಾರಣಕ್ಕಾಗಿ ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರು ಎರಡೂ ರಾಷ್ಟ್ರಗಳ ನಡುವೆ ಒಂದು ಮಹತ್ವದ ಒಪ್ಪಂದಕ್ಕಾಗಿ ತೀವ್ರವಾಗಿ ಪ್ರಯತ್ನಪಟ್ಟಿದ್ದರು. ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ದೇಶಗಳಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಒತ್ತಡದಲ್ಲಿ ಸಿಲುಕಿದೆ.
ಸಂಧಾನ ಮಾತುಕತೆ ವಿಫಲ, ಪ್ರಮುಖಾಂಶಗಳು
* ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕಾ ಮತ್ತು ಇಸ್ರೇಲ್ ಮಧ್ಯೆ 21 ಗಂಟೆ ಹೈವೋಲ್ಟೇಟ್ ಮಾತುಕತೆ/ಸಭೆ ನಡೆಯಿತು.
* ಶಾಂತಿ ಮಾತುಕತೆ ಹಿನ್ನೆಯಲ್ಲಿ ಪಾಕಿಸ್ತಾನ ನಿನ್ನೆ (ಶುಕ್ರವಾರ) ಸೌದಿ ಅರೇಬಿಯಾಕ್ಕೆ ಯುದ್ಧ ವಿಮಾನ, ಸೇನಾಪಡೆಗಳನ್ನು ಕಳುಹಿಸಿತ್ತು.
* ಇರಾನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಹತ್ತಿಕ್ಕುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗುರಿಯಾಗಿತ್ತು. ಆದರೆ ಇರಾನ್ ಈ ಷರತ್ತುಗಳಿಗೆ ಪೂರ್ಣವಾಗಿ ಒಪ್ಪದ ಕಾರಣ ಮಾತುಕತೆ ಹಳಿ ತಪ್ಪಿದೆ.
* 2025ರ ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದ'ದಂತೆ, ಸೌದಿ ಅರೇಬಿಯಾದ ಭೂಪ್ರದೇಶ ರಕ್ಷಣೆಗೆ ಪಾಕಿಸ್ತಾನ ಬದ್ಧವಾಗಿದೆ.
* ಮಾತುಕತೆಗಳು ವಿಫಲಗೊಂಡ ಬಳಿಕ ಒಂದು ವೇಳೆ ಅಮೆರಿಕ-ಇರಾನ್ ಯುದ್ಧ ತೀವ್ರಗೊಂಡರೆ, ಪಾಕಿಸ್ತಾನಕ್ಕೆ ಸೌದಿಯನ್ನು ಕಾನೂನುಬದ್ಧವಾಗಿ, ಮಿಲಿಟರಿ ಬಲದಿಂದ ರಕ್ಷಿಸುವುದು ಅನಿವಾರ್ಯವಾಗುತ್ತದೆ.
* ಯುದ್ಧ ತೀವ್ರಗೊಂಡರೆ ಸೇನಾ ಗಡಿಗಳನ್ನು ಮೀರಿ ಭಾರಿ ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.
* ಪಾಕಿಸ್ತಾನ ನೆಲದಲ್ಲಿ ಅಮೆರಿಕಾ-ಇರಾನ್ ಸಂಧಾನ ಮಾತುಕತೆ ವಿಫಲ, ಪಾಕಿಸ್ತಾನಕ್ಕೆ ಹಿನ್ನಡೆ ಆದಂತಾಗಿದೆ. ಹೀಗಿದ್ದರೂ ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನ ಪಾತ್ರಕ್ಕೆ ಒಂದಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿವೆ.
* ವಾಷಿಂಗ್ಟನ್ ಇರಾನ್ನ ಪರಮಾಣು ನೆಲೆ, ಪೂರ್ವ ಪ್ರದೇಶಗಳ ಮೇಲೆ ದಾಳಿಗೆ ಪಾಕ್ ವಾಯುನೆಲೆಗಳಿಗೆ (ನಿರ್ದಿಷ್ಟವಾಗಿ ಬಲೂಚಿಸ್ತಾನದಲ್ಲಿ) ಪ್ರವೇಶ ಕೇಳಬಹುದು. ಈ ಪ್ರವೇಶವನ್ನು ನೀಡಿದರೆ, ಪಾಕಿಸ್ತಾನ ನೇರವಾಗಿ ಇರಾನ್ನ ಸೇನಾ ದಾಳಿಗೆ ಗುರಿಯಾಗಬಹುದು.
* ಅಮೆರಿಕದ ಕಾರ್ಯಾಚರಣೆಗಳಿಗೆ ತನ್ನ ನೆಲವನ್ನು ಬಳಸಲು ಅವಕಾಶ ನೀಡುವ ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡುವುದಾಗಿ ಟೆಹ್ರಾನ್ ಎಚ್ಚರಿಕೆ
* ವಿಶ್ವದ ಎರಡನೇ ದೊಡ್ಡ ಶಿಯಾ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದಲ್ಲಿ, ಇರಾನ್ ವಿರುದ್ಧ ಯಾವುದೇ ಮಿಲಿಟರಿ ಸಹಕಾರವು ಪಾಕಿಸ್ತಾನದ ನಗರಗಳಲ್ಲಿ ವ್ಯಾಪಕ ಕೋಮುವಾದಿ ಹಿಂಸಾಚಾರ ಮತ್ತು ಅಂತರ್ಯುದ್ಧದಂತಹ ಪರಿಸ್ಥಿತಿಗಳನ್ನು ಪ್ರಚೋದಿಸಬಹುದು.
* ಸಂಧಾನ ಸಭೆ ವೀಫಲದಿಂದ ಗಡಿ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ನಿರೀಕ್ಷೆಗಳಿವೆ. ಇದು ಬಲೂಚಿಸ್ತಾನ ಪ್ರದೇಶದ ಆರ್ಥಿಕ ಜೀವನಾಡಿಗೆ ಪೆಟ್ಟು ಕೊಟ್ಟಂತಾಗುತ್ತದೆ.
* ಪೂರ್ಣ ಪ್ರಮಾಣದ ಯುದ್ಧ ಭಾರಿ ನಿರಾಶ್ರಿತರ ಬಿಕ್ಕಟ್ಟು ಸೃಷ್ಟಿಸಿ, ಲಕ್ಷಾಂತರ ಜನರನ್ನು ಪಾಕಿಸ್ತಾನಕ್ಕೆ ವಲಸೆ ಬರುವಂತೆ ಮಾಡಲಿದೆ. ಇದು ಪಾಕಿಸ್ತಾನಕ್ಕೆ ಪ್ರಸ್ತುತ ಭರಿಸಲಾಗದ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ.
-
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ














Click it and Unblock the Notifications