ಇಂಡೋನೇಷಿಯಾ: ಫುಟ್ಬಾಲ್ ಪಂದ್ಯದ ಬಳಿಕ ಫ್ಯಾನ್ಸ್ ಕಿತ್ತಾಟ, 129 ಮಂದಿ ಸಾವು
ಜಕಾರ್ತ, ಅ.2: ಇಂಡೋನೇಷಿಯನ್ ಲೀಗ್ ಫುಟ್ಬಾಲ್ ಪಂದ್ಯದ ಬಳಿಕ ಅಭಿಮಾನಿಗಳ ನಡುವೆ ನಡೆದ ಕಿತ್ತಾಟ, ಬಡಿದಾಟ, ಕಾಲ್ತುಳಿತದ ಪರಿಣಾಮ ಸುಮಾರು 129ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 180ಕ್ಕೂ ಅಧಿಕ ಮಂದಿಗೆ ತೀವ್ರಗಾಯಗಳಗಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಜಾವ ಮೂಲದ ಕ್ಲಬ್ ಅರೆಮಾ ಹಾಗೂ ಪರ್ಸೆಬಾಯ ಸುರಾಬಾಯ ಕ್ಲಬ್ ನಡುವಿನ ಪಂದ್ಯದ ಫಲಿತಾಂಶವೆ ಉಭಯ ತಂಡಗಳ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಪೂರ್ವ ಜಾವದ ಮಲಾಂಗ್ ಪ್ರಾಂತ್ಯದ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸುರಾಬಾಯ ಕ್ಲಬ್ ವಿರುದ್ಧ ಅರೆಮಾ ತಂಡ 3-2ರಲ್ಲಿ ಸೋಲು ಕಂಡಿತ್ತು.

ಸೋಲನ್ನು ಸಹಿಸಿಕೊಳ್ಳದ ಅರೆಮಾ ತಂಡದ ಪರ ಅಭಿಮಾನಿಗಳು ಮೈದಾನದಲ್ಲಿ ರಂಪಾಟ ಆರಂಭಿಸಿದರು ನಂತರ ಫ್ಯಾನ್ಸ್ ನಡುವಿನ ಕಿತ್ತಾಟ ವಿಕೋಪಕ್ಕೆ ತಿರುಗಿದ ಪರಿಣಾಮ ಹಲವರ ಸಾವಿಗೆ ಕಾರಣವಾಯಿತು ಎಂದು ತಿಳಿದು ಬಂದಿದೆ.
BREAKING: More than 100 people died after a riot broke out at an Liga 1 football match between Arema and Persebaya at Kanjuruhan Stadium in Malang, Indonesia pic.twitter.com/YsDWQfbkRZ
— Insider Paper (@TheInsiderPaper) October 1, 2022
ಕಂಜುರುಹಾನ್ ಮೈದಾನದಲ್ಲಿ ನಡೆದ ಗಲಭೆ, ಕಿತ್ತಾಟ ಹತ್ತಿಕ್ಕಲು ಪೊಲೀಸರು ತಕ್ಷಣವೇ ಅಶ್ರುವಾಯು ಪ್ರಯೋಗಿಸಿದರೂ ಪ್ರಯೋಜನವಾಗಿಲ್ಲ. ಕೆಲವರು ಕಿತ್ತಾಟದಲ್ಲಿ ತೊಡಗಿದ್ದರೆ, ಇನ್ನು ಕೆಲವರು ಮೈದಾನದಿಂದ ಹೊರಕ್ಕೆ ಹೋಗಲು ಯತ್ನಿಸಿ ವಿಫಲರಾಗಿ ಕಾಲ್ತುಳಿತಕ್ಕೆ ಒಳಗಾದರು ಎಂದು ಪೊಲೀಸರು ಹೇಳಿದ್ದಾರೆ.
ಪೂರ್ವ ಜಾವಾದ ಪೊಲೀಸ್ ಮುಖ್ಯಸ್ಥ ನಿಕೋ ಅಫಿಂಟಾ ಮಾತನಾಡಿ, ಸೋತ ತಂಡದ ಪರ ಅಭಿಮಾನಿಗಳು ಮೈದಾನದೊಳಗೆ ಇಳಿದು ಗಲಾಟೆ ಮಾಡಲು ಆರಂಭಿಸಿದರು, ಪೊಲೀಸರು ಅಶ್ರುವಾಯು ಪ್ರಯೋಗಿಸಿದರು, ಅಭಿಮಾನಿಗಳ ಪರಸ್ಪರ ಕಿತ್ತಾಟ, ಕಾಲ್ತುಳಿತದ ಕಾರಣ ಮೈದಾನದಲ್ಲೇ 34 ಮಂದಿ ಮೃತ ಪಟ್ಟರೆ, ಮಿಕ್ಕವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ, ಸುಮಾರು 180 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡಾ ಇದ್ದಾರೆ ಎಂದರು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications