ರಷ್ಯಾ-ಉಕ್ರೇನ್ ಸಂಘರ್ಷ ಸಮಯದಲ್ಲೇ ಪುಟಿನ್, ಝೆಲೆನ್ಸ್ಕಿ ಭೇಟಿಯಾದ ಮೋದಿ, ರಾಜತಾಂತ್ರಿಕ ತಂತ್ರ
ಭೌಗೋಳಿಕ ರಾಜಕೀಯದ ಕಠಿಣ ಪರಿಸ್ಥಿತಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ಮಾಡಿದರು. ವಿಶ್ವದ ವೇದಿಕೆಯಲ್ಲಿ ಇದು ಭಾರತಕ್ಕೆ ಗಮನಾರ್ಹವಾದ ಸ್ಥಾನವನ್ನು ನೀಡಿತು.
ವಿಶ್ವದ ಅನೇಕ ನಾಯಕರು ಉಕ್ರೇನ್ ಪರವಾಗಿ ನಿಂತು ರಷ್ಯಾವನ್ನು ಅಕ್ರಮಣಕಾರಿ ಎಂದು ಖಂಡಿಸುವಾಗ, ಎರಡೂ ಕಡೆಯ ಮೋದಿಯ ರಾಜತಾಂತ್ರಿಕ ತಂತ್ರಗಳು ಅಂತರಾಷ್ಟ್ರೀಯ ಸಂಬಂಧದಲ್ಲಿ ಮೋದಿಯ ಸೂಕ್ಷ್ಮತೆಯನ್ನು ಸಾರಿತು. ಶಾಂತಿ ಕಾಪಾಡಲು ಇರುವ ಬದ್ಧತೆ, ಐತಿಹಾಸಿಕ ಒಪ್ಪಂದಗಳು, ನಿಗದಿತ ಕಾರ್ಯತಂತ್ರಗಳು ಮೆಚ್ಚುಗೆಗೆ ಕಾರಣವಾದವು.

ಮೋದಿ ರಾಜತಾಂತ್ರಿಕತೆಯ ಮಹತ್ವ
ಸಂದಿಗ್ಧ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಝೆಲೆನ್ಸ್ಕಿ ಮತ್ತು ಪುಟಿನ್ ಭೇಟಿಯಾದರು. ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಸ್ಥಿತಿಯಲ್ಲಿ ಉಕ್ರೇನ್ ವಿಶ್ವದ ಸಮಯದಾಯವನ್ನು ತನ್ನ ಕಡೆ ಸೆಳೆಯುವ ಪ್ರಯತ್ನವನ್ನು ಬಹು ದೊಡ್ಡಮಟ್ಟದಲ್ಲಿಯೇ ಮಾಡುತ್ತಿದೆ. ಅಮೆರಿಕ ಮುಂದಾಳತ್ವದಲ್ಲಿ ಪಶ್ಚಿಮದ ದೇಶಗಳು ರಷ್ಯಾದ ಮೇಲೆ ಹಲವಾರು ಕಠಿಣ ನಿರ್ಬಂಧಗಳನ್ನು ಹೇರಿದವು, ಉಕ್ರೇನ್ ಬೆಂಬಲಿಸಿದವು. ಆದರೆ ಭಾರತದ ಅನುಸಂಧಾನ ತಂತ್ರವೇ ಬೇರೆಯಾಗಿದೆ. ಸಮತೋಲನ ತಂತ್ರದ ಮೂಲಕ ಯಾವುದೇ ಒಂದು ಕಡೆ ಇರದಂತೆ ದೇಶ ಹೆಜ್ಜೆ ಇಟ್ಟಿದೆ.
ಭಾರತಕ್ಕೆ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ವ್ಲಾಡಿಮಿರ್ ಪುಟಿನ್ ಭೇಟಿ ರಾಜತಾಂತ್ರಿಕವಾಗಿ ಮಹತ್ವದ್ದಾಗಿದೆ. ಇದು ದೇಶದ ನಿಲುವು ಮತ್ತು ಸಂಘರ್ಷದ ಸಮಯದಲ್ಲಿ ಮಧ್ಯಸ್ಥಿಕೆ ವಹಿಸುವ ಚಿತ್ರಣವನ್ನು ತರೆದಿಟ್ಟಿದೆ. ಶಾಂತಿಯುತ ವೇದಿಕೆ ನಿರ್ಮಾಣ ಮಾಡಲು ಇಬ್ಬರೂ ನಾಯಕರನ್ನು ಒಳಗೊಂಡು ಸಾಗುವ ಮೋದಿ ನಡೆ, ಭಾರತದ ಬಹು ಹಿಂದಿನ ಹೊಂದಾಣಿಕೆ ಇಲ್ಲದ ನೀತಿಯ ಭಾಗವಾಗಿದೆ. ಈ ನಡೆ ವಿಶ್ವದ ವೇದಿಕೆಯಲ್ಲಿ ಭಾರತ ನಿಲುವು ಸ್ಪಷ್ಟಪಡಿಸಿದ್ದಲ್ಲದೇ ವಿಶ್ವ ಶಾಂತಿಗೆ ಆತಂಕ ಉಂಟಾಗಿರುವ ಸಂದರ್ಭದಲ್ಲಿ ಶಾಂತಿ ಕಾಪಾಡಲು ನವದೆಹಲಿಯ ಪ್ರಯತ್ನದ ಮಾರ್ಗವನ್ನು ವಿಶ್ವಕ್ಕೆ ತೆರೆದಿಟ್ಟಿತು.
ರಷ್ಯಾ ಮತ್ತು ಅಮೆರಿಕ ನಡುವೆ ಸಮತೋಲಿತ ಸಂಬಂಧ
ರಷ್ಯಾದ ಜೊತೆ ಭಾರತದ ಸಂಬಂಧ ಐತಿಹಾಸಿಕವಾದದ್ದು, ಸೋವಿಯತ್ ಒಕ್ಕೂಟದ ಕಾಲದ್ದು. ಶೀತಲ ಸಮರದ ಸಮಯದಲ್ಲಿ ಸೋವಿಯತ್ ಒಕ್ಕೂಟದ ಸ್ನೇಹಿ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿತ್ತು, ರಾಜತಾಂತ್ರಿಕ ಮತ್ತು ರಕ್ಷಣಾ ನೆರವು ಹಂಚಿಕೆಯಾಗಿತ್ತು. ಇಂದು ರಕ್ಷಣಾ ಕ್ಷೇತ್ರದಲ್ಲಿ ರಷ್ಯಾ ಭಾರತದ ಪ್ರಮುಖ ಪಾಲುದಾರ. ಭಾರತ ರಷ್ಯಾದ ಮಿಲಿಟರಿ ತಂತ್ರಜ್ಞಾನ, ಉಪಕರಣಗಳ ಮೇಲೆ ಅವಲಂಬಿತವಾಗಿದೆ. ಇದೇ ಮಾದರಿಯಲ್ಲಿ ಭಾರತ ಅಮೆರಿಕ ಜೊತೆಗೂ ಉತ್ತಮ ಬಾಂಧವ್ಯವನ್ನು ಹೊಂದಿದೆ. ಅದರಲ್ಲೂ ವಿಶೇಷವಾಗಿ ರಕ್ಷಣೆ, ವಾಣಿಜ್ಯ ಮತ್ತು ತಂತ್ರಜ್ಞಾನದ ವಿಚಾರದಲ್ಲಿ. ಈ ಸಂಬಂಧಗಳೇ ಭಾರತಕ್ಕೆ ಸಂಘರ್ಷದ ಕಾಲದಲ್ಲಿ ಪರೀಕ್ಷೆಯನ್ನು ತಂದೊಡ್ಡಿತು. ಹೊರಗಿನ ಒತ್ತಡಗಳಿಗೆ ಮಣಿಯದೇ ಅಂತರಾಷ್ಟ್ರೀಯ ಸಂಬಂಧಗಳನ್ನು ಉಳಿಸಿಕೊಳ್ಳುವ ಸವಾಲು ತಂದಿತು.
ಪ್ರಧಾನಿ ಮೋದಿ ಸಾಮರ್ಥ್ಯದಿಂದಾಗಿ ವಿಭಿನ್ನ ನಿಲುಗಳ ಹೊರತಾಗಿಯೂ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದ ಸಮಯದಲ್ಲಿ ಭಾರತ ರಷ್ಯಾ ಮತ್ತು ಅಮೆರಿಕ ನಡುವಿನ ಸಂಬಂಧಗಳನ್ನು ಉಳಿಸಿಕೊಂಡಿತು, ಮತ್ತಷ್ಟು ಗಟ್ಟಿಗೊಳಿಸಿಕೊಂಡಿತು. ಇದೊಂದು ಗಮನಾರ್ಹವಾದ ರಾಜತಾಂತ್ರಿಕ ನಡೆಯಾಗಿದೆ. ರಷ್ಯಾದ ಜೊತೆ ಕಚ್ಚಾ ತೈಲ ಖರೀದಿಯನ್ನು ಮುಂದುವರೆಸುತ್ತಲೇ ಭಾರತ ಅಮೆರಿಕದ ಜೊತೆಗಿನ ರಕ್ಷಣೆ, ವಾಣಿಜ್ಯ ಪಾಲುದಾರಿಕೆಯನ್ನು ವಿಸ್ತರಣೆ ಮಾಡಿತು. ಈ ಸಮತೋಲಿತ ನಿರ್ಧಾರ ಭಾರತದ ನಿಗದಿತ ತಂತ್ರವನ್ನು ಎಲ್ಲರಿಗೂ ಪರಿಚಯಿಸಿತು, ಸ್ವತಂತ್ರವಾಗಿ ನಿಲ್ಲುವ ಸಾಮರ್ಥ್ಯವನ್ನು ಸಾರಿತು.
ಯುರೇಷಿಯಾ ಮತ್ತು ಯುರೋಪ್ನಲ್ಲಿ ಭೌಗೋಳಿಕ ರಾಜಕೀಯದ ಪರಿಣಾಮಗಳು
ರಷ್ಯಾ ಮತ್ತು ಉಕ್ರೇನ್ ನಡುವಿನ ಭಾರತದ ಸಂಬಂಧ ಯುರೇಷಿಯಾ ಮತ್ತು ಯುರೋಪಿಯನ್ ಗಡಿಗಳಲ್ಲಿ ಪರಿಣಾಮಗಳನ್ನು ಬೀರಿತು. ಯುರೇಷಿಯಾದಲ್ಲಿ ರಷ್ಯಾ ಪ್ರಬಲ ಶಕ್ತಿಯಾಗಿದೆ. ಭಾರತದ ಸಮತೋಲಿತ ತಂತ್ರ ಪ್ರದೇಶದ ರಕ್ಷಣಾ ವೇದಿಕೆಯಲ್ಲಿ ಭಾರತ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿತು. ಈ ನಡೆ ಪ್ರಾದೇಶಿಕ ಕಾರ್ಯತಂತ್ರ ಮತ್ತು ವಿಶ್ವದ ಶಕ್ತಿಗಳ ಅಧಿಕಾರದ ಹೋರಾಟದಲ್ಲಿ ಪ್ರಮುಖ ಪಾತ್ರ ನೀಡಿತು.
ಯುರೋಪ್ನಲ್ಲಿ ಮೋದಿಯ ಉಕ್ರೇನ್ ಕುರಿತ ನಿಲುವು ವಿಶಾಲವಾದ ಅಂತರಾಷ್ಟ್ರೀಯ ಮಾನದಂಡಗಳ ನಡುವೆಯೂ ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವ ಕಾಪಾಡಲು ಭಾರತದ ಸಹಕಾರ ಪ್ರಶಂಸೆಗೆ ಕಾರಣವಾಯಿತು. ಅದೇ ಸಮಯದಲ್ಲಿ ರಷ್ಯಾದ ಜೊತೆಗಿನ ಸಂಬಂಧವೂ ರಾಜತಾಂತ್ರಿಕತೆ ಮತ್ತು ಸಂಘರ್ಷ ನಿವಾರಣೆಗೆ ವೇದಿಕೆ ನಿರ್ಮಾಣಕ್ಕೆ ಆದ್ಯತೆ ನೀಡಿತು. ಈ ನೀತಿಯ ಅಧಿಕಾರ ಹೋರಾಟದ ಸಂದರ್ಭ ಇತರ ದೇಶಗಳಿಗೆ ಮಾದರಿಯಾಯಿತು. ಎಲ್ಲರನ್ನೂ ಒಂದುಗೂಡಿಸಿಕೊಂಡು ಸಂಪರ್ಕ ಸಮನ್ವಯ ಸಾಧಿಸಬೇಕು ಎಂಬುದುನ್ನು ಒತ್ತಿ ಹೇಳಿತು.
ಭಾರತದ ಅನುಸಂಧಾನದಿಂದ ಪಾಠ
ಮೋದಿ ನೇತೃತ್ವದಲ್ಲಿನ ರಾಜತಾಂತ್ರಿಕ ತಂತ್ರದಿಂದ ವಿಶ್ವ ಭಾರತದಿಂದ ಅನೇಕ ಪಾಠಗಳನ್ನು ಕಲಿಯಬೇಕಿದೆ. ಮೊದಲನೇಯದಾಗಿ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಸ್ವಾಯತ್ತತೆಯನ್ನು ಹೇಗೆ ಕಾಯ್ದಕೊಳ್ಳಬೇಕು ಎಂಬುದು. ಇದು ರಾಷ್ಟ್ರ ತನ್ನ ಹಿತವನ್ನು ಕಾಯ್ದುಕೊಂಡು ವಿಶ್ವಶಾಂತಿಗಾಗಿ ಹೇಗೆ ಪ್ರಯತ್ನಿಸಬೇಕು ಎಂದು ತಿಳಿಸಿತು. ಎರಡನೇಯದಾಗಿ ಅಹಿಂಸೆಯ ವಿಚಾರದಲ್ಲಿ ಭಾರತದ ಬದ್ಧತೆ, ಐತಿಹಾಸಿಕ ನೀತಿ, ಸಂಸ್ಕೃತಿಗಳ ರಕ್ಷಣೆ, ಸಂಘರ್ಷ ನಿವಾರಣೆಗೆ ಹೊಸ ಬಗೆಯ ನೀತಿಯನ್ನು ಮಂಡಿಸುವ ಪಾಠವನ್ನು ಸಾರಿತು.
ಒಂದು ಅಭೂತಪೂರ್ವ ಸ್ವಾಗತ
ಸದ್ಯದ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ರಷ್ಯಾ ಮತ್ತು ಉಕ್ರೇನ್ನಲ್ಲಿ ಅಭೂತಪೂರ್ವವಾದ ಸ್ವಾಗತವನ್ನು ಸ್ವೀಕರಿಸಿದರು. ಇದು ಎರಡೂ ದೇಶಗಳ ನಡುವಿನ ಗೌರವ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸಿತು. ಭಾರತ ವಿರೋಧಿಗಳ ಜೊತೆಯೂ ಸೇತುವೆಯಾಗಿ ನಿಲ್ಲುವ ಭಾರತದ ನಾಯಕತ್ವ ಸಾಮರ್ಥ್ಯ ಬಿಂಬಿಸಿತು. ಇದು ಕೇವಲ ಮೋದಿಯ ರಾಜತಾಂತ್ರಿಕ ತಂತ್ರ ಮಾತ್ರವಲ್ಲ ವಿಶ್ವಮಟ್ಟದಲ್ಲಿ ಬೆಳೆಯುತ್ತಿರುವ ಭಾರತದ ಪ್ರಭಾವವನ್ನು ತಿಳಿಸಿತು.
ಅಹಿಂಸೆ ವಿಚಾರದಲ್ಲಿ ಭಾರತದ ಬದ್ಧತೆ
ರಾಷ್ಟ್ರಪಿತ ಮಹಾತ್ಮ ಗಾಂಧಿ ಸಾರಿದ ಅಹಿಂಸಾ ತತ್ವ ಭಾರತದ ವಿದೇಶಾಂಗ ನೀತಿಯಲ್ಲಿಯೇ ಇದೆ. ರಷ್ಯಾ ಮತ್ತು ಉಕ್ರೇನ್ ಇಬ್ಬರನ್ನೂ ಒಳಗೊಂಡು ಈ ತತ್ವವನ್ನೇ ಮೋದಿ ಹೇಳಿದರು. ಶಾಂತಿಯುತವಾದ ವೇದಿಕೆ ನಿರ್ಮಾಣವಾಗಬೇಕು, ಸಂಘರ್ಷಕ್ಕೆ ಪರಿಹಾರ ಸಿಗಬೇಕು ಎಂದರು. ಭಾರತದ ರಾಜತಾಂತ್ರಿಕ ಪ್ರಯತ್ನಗಳು ಅಹಿಂಸೆಯ ತಳಹದಿಯಲ್ಲಿಯೇ ಇವೆ, ಇವು ವಿಶ್ವವನ್ನು ಸಂಘರ್ಷದಿಂದ ದೂರ ವಿರುವ ಭರವಸೆಯನ್ನು ತಂದಿವೆ.












Click it and Unblock the Notifications