ಗಲ್ಫ್ ದೇಶದಲ್ಲಿರುವ ಭಾರತೀಯರಿಗೆ ನೋಟು ಬದಲಾವಣೆ ಸಂಕಷ್ಟ!
ದುಬೈ: ₹2,000 ನೋಟುಗಳ ಆಯಸ್ಸು ಇನ್ನೇನು ಕೆಲವೇ ತಿಂಗಳಲ್ಲಿ ಖತಂ ಆಗಲಿದೆ. 2000 ರೂ. ನೋಟು ಚಲಾವಣೆ ಸ್ಥಗಿತಗೊಳಿಸಿ, ವಾಪಸ್ ಪಡೆಯಲು ಬ್ಯಾಂಕ್ಗಳಿಗೆ ಆರ್ಬಿಐ ಆದೇಶ ನೀಡಿದೆ. ಈ ನಡುವೆ ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದ ಪ್ರಜೆಗಳಿಗೆ ₹2,000 ನೋಟುಗಳೇ ಟೆನ್ಷನ್ ಕೊಡ್ತಿವೆ. ತವರು ಬಿಟ್ಟು ಬೇರೆ ದೇಶಕ್ಕೆ ಉದ್ಯೋಗಕ್ಕಾಗಿ ಹೋದವರು & ಪ್ರವಾಸಕ್ಕೆ ಹೋದವರು ಪರದಾಡುತ್ತಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.
ಅಂದಹಾಗೆ ಭಾರತದಿಂದ ಸಾಕಷ್ಟು ಜನ ವಿವಿಧ ಕಾರಣಗಳಿಗೆ ಗಲ್ಫ್ ರಾಷ್ಟ್ರಗಳಿಗೆ ತೆರಳುತ್ತಾರೆ. ಆದರೆ ಹೀಗೆ ತೆರಳಿದ ಭಾರತೀಯ ಪ್ರಜೆಗಳಿಗೆ ₹2,000 ನೋಟುಗಳನ್ನ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತ ಸರ್ಕಾರವು ₹2,000 ನೋಟುಗಳ ಬದಲಾವಣೆಗೆ ಅನುಸರಿಸುತ್ತಿರುವ ನಿಯಮದ ಬಗ್ಗೆ ಗಲ್ಫ್ ರಾಷ್ಟ್ರಗಳ ಬ್ಯಾಂಕ್ಗಳಿಗೆ ಯಾವುದೇ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ಭಾರತೀಯರು ತಮ್ಮ ಬಳಿ ಇರುವ ₹2,000 ನೋಟನ್ನ ವಿನಿಮಯ ಮಾಡಿಕೊಳ್ಳಲು ಆಗುತ್ತಿಲ್ಲ. ದೇಶ ಬಿಟ್ಟು ಬೇರೆ ದೇಶಕ್ಕೆ ಹೋದವರು ಪರದಾಡುತ್ತಿದ್ದಾರೆ.

ಕಂತೆ ಕಂತೆ ನೋಟ್ ಇದ್ದರೂ ಪ್ರಯೋಜನ ಆಗ್ತಿಲ್ಲ!
ಹೌದು, ಗಲ್ಫ್ ರಾಷ್ಟ್ರಗಳಿಗೆ ಪ್ರವಾಸಕ್ಕೆ ಅಂತಾ ಹೋದವರು ಈಗ ಅಲ್ಲಿನ ರೂಲ್ಸ್ ಕೇಳಿ ಸುಸ್ತಾಗಿದ್ದಾರೆ. ಗಲ್ಫ್ ದೇಶಗಳ ಬ್ಯಾಂಕ್ಗಳಲ್ಲಿ ಭಾರತದ ₹2,000 ನೋಟುಗಳನ್ನ ಪಡೆಯದಂತೆ ಆಡಳಿತ ಮಂಡಳಿ ಸೂಚನೆ ನೀಡಿದೆಯಂತೆ. ಇದೇ ಕಾರಣಕ್ಕೆ ಕಂತೆ ಕಂತೆ ನೋಟ್ ಇದ್ದರೂ ಪ್ರಯೋಜನ ಆಗುತ್ತಿಲ್ಲ. ಜೊತೆಗೆ ಹಣ ವಿನಿಮಯ ಮಾಡಿಕೊಳ್ಳೋದಕ್ಕೂ ಭಾರತ ಮೂಲದ ಪ್ರಜೆಗಳು ಪರದಾಡ್ತಿದ್ದಾರೆ ಅದ್ರಲ್ಲೂ ಪ್ರವಾಸಕ್ಕೆ ಅಂತಾ ಹೋದವರು ಮುಂದೆ ಏನು ಮಾಡ್ಬೇಕು ಅನ್ನೋದು ತೋಚದೆ ಕೂರುವಂತಾಗಿದೆ. ಯಾಕಂದ್ರೆ ಗಲ್ಫ್ ರಾಷ್ಟ್ರಗಳ ಬ್ಯಾಂಕ್ ಸಿಬ್ಬಂದಿ ಇವರ ಮನವಿಗೆ ಪ್ರತಿಕ್ರಿಯೆ ನೀಡುತ್ತಿಲ್ಲವಂತೆ.
ಗಲ್ಫ್ಗೆ ಸೂಚನೆ ನೀಡುತ್ತಾ ಆರ್ಬಿಐ?
ಒಟ್ನಲ್ಲಿ ₹2,000 ನೋಟುಗಳ ಬದಲಾವಣೆ ವಿಚಾರ ಭಾರತದಲ್ಲಿ ನೆಲೆಸಿದವರಿಗೆ ಮಾತ್ರವಲ್ಲ, ವಿದೇಶದಲ್ಲಿ ನೆಲೆಸಿದ ಭಾರತ ಮೂಲದ ಪ್ರಜೆಗಳಿಗೂ ಟೆನ್ಷನ್ ಕೊಡುತ್ತಿದೆ. ಅದರಲ್ಲೂ ಪ್ರವಾಸಕ್ಕಾಗಿ ಗಲ್ಫ್ ದೇಶಗಳಿಗೆ ಹೋದವರು ಅಲ್ಲಿ ಏನು ಮಾಡಬೇಕು, ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಅಂತಾ ಪರದಾಡುತ್ತಿದ್ದಾರೆ. ಕೈಯಲ್ಲಿ ಕಂತೆ ಕಂತೆ ಕಾಸು ಇದ್ರೂ ಪ್ರಯೋಜನಕ್ಕೆ ಬರುತ್ತಿಲ್ಲ. ಹೀಗಾಗಿ ಗಲ್ಫ್ ದೇಶಗಳ ಬ್ಯಾಂಕ್ಗಳಿಗೆ ಭಾರತ ಸರ್ಕಾರ ಹಾಗೂ ಆರ್ಬಿಐ ಸೂಕ್ತವಾದ ಸೂಚನೆ ನೀಡಬೇಕು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಸೂಚನೆ ಸಿಕ್ಕ ನಂತರವಾದ್ರೂ ಗಲ್ಫ್ ದೇಶದ ಬ್ಯಾಂಕ್ಗಳು ತಮ್ಮ ನಿಲುವು ಬದಲಿಸಬಹುದು.

4 ತಿಂಗಳು ಅವಕಾಶ ನೀಡಿದ RBI!
2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡುತ್ತಿಲ್ಲ ಆರ್ಬಿಐ. ಈಗ ಜನರಿಗೆ ಅನುಕೂಲ ಆಗಲಿ ಎಂದು ಬರೋಬ್ಬರಿ 4 ತಿಂಗಳ ಅವಕಾಶ ಕಲ್ಪಿಸಿದೆ. ನೀವು ನಿಮ್ಮ ಬಳಿ ಇರುವ 2000 ಮುಖಬೆಲೆ ನೋಟ್ ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ ನೋಟ್ ಚಲಾವಣೆ ಸಂಪೂರ್ಣ ಬ್ಯಾನ್ ಮಾಡಲಾಗುವುದು ಎಂದು ಆರ್ಬಿಐ ಹೇಳಿದೆ. ಹೀಗಾಗಿ ಟೆನ್ಷನ್ ಮಾಡಿಕೊಳ್ಳದೆ ನಿಮ್ಮ ಹತ್ತಿರ ಇರುವ 2000 ರೂ. ಮುಖಬೆಲೆ ನೋಟ್ಗಳನ್ನ ಎಕ್ಸ್ಚೇಂಜ್ ಮಾಡಿಕೊಳ್ಳಿ.

ತಿಜೋರಿಯಲ್ಲಿದ್ದ ₹2000 ನೋಟು ಹೊರಗೆ!
2016ರಲ್ಲಿ 500, 1000ರ ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ (Note Ban) ಬಳಿಕ 2000 ಮುಖಬೆಲೆಯ ನೋಟ್ ಚಲಾವಣೆಗೆ ಬಂತು. ಆದ್ರೆ ಆರ್ಬಿಐ ಭಾರತದಲ್ಲಿ ಚಲಾವಣೆಯಲ್ಲಿದ್ದ 2000 ರೂ. ನೋಟ್ ಚಲಾವಣೆ ಸ್ಥಗಿತಗೊಳಿಸಿದೆ (2000 Note). ವಾಪಸ್ ಪಡೆಯಲು ಆರ್ಬಿಐ ಬ್ಯಾಂಕ್ಗಳಿಗೆ ಆದೇಶ ನೀಡಿದೆ. ಈಗ ಜನ 2000 ರೂ. ನೋಟ್ಗಳನ್ನ ಬ್ಯಾಂಕ್ಗೆ ವಾಪಸ್ ಮಾಡುವ ಬದಲು ಹೊರಗೆ ಬಳಸಲು ಮುಂದಾಗುತ್ತಿದ್ದು, ಭಾರತದಲ್ಲಿ ಚಿಲ್ಲರೆ ಸಮಸ್ಯೆ ಕೂಡ ಶುರುವಾಗಿದೆ. ಇದರ ಜೊತೆಗೆ ವಿದೇಶಕ್ಕೆ ತೆರಳಿದ ಭಾರತೀಯರಿಗೂ ಇದೇ ಟೆನ್ಷನ್ ಶುರುವಾಗಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications