ರಾಷ್ಟ್ರಪಿತ ಗಾಂಧೀಜಿಗೆ ವಿದೇಶದಲ್ಲಿ ರಾಷ್ಟ್ರಪತಿ ಗೌರವ!
ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೇ ಬದಲಿಸಿದ್ದ, ಬ್ರಿಟಿಷರ ಪಾಲಿಗೆ ಸಿಂಹವಾಗಿದ್ದ ಮಹಾತ್ಮ ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಹಾಗೇ ಬ್ರಿಟಿಷರು ಭಾರತದಲ್ಲಿ ನಡೆಸುತ್ತಿದ್ದ ದೌರ್ಜನ್ಯ ಖಂಡಿಸಿ ಗಾಂಧೀಜಿ ಅವರು ಅನೇಕ ಹೋರಾಟಗಳನ್ನು ಸಂಘಟಿಸಿದ್ದರು. ಈ ಪೈಕಿ ದಂಡಿ ಉಪ್ಪಿನ ಸತ್ಯಗ್ರಹ ಕೂಡ ಒಂದು. ಹೀಗಾಗಿ ಐತಿಹಾಸಿಕ ದಂಡಿ ಯಾತ್ರೆ ವಾರ್ಷಿಕೋತ್ಸವದ ಅಂಗವಾಗಿ ಮಾರಿಷಸ್ನಲ್ಲಿ ಭಾರತದ ರಾಷ್ಟ್ರಪತಿ ಅವರು ವಿಶೇಷ ಗೌರವ ಸಲ್ಲಿಸಿದ್ದಾರೆ.
ಭಾರತ & ಮಾರಿಷಸ್ ಸಂಬಂಧ ವೃದ್ಧಿಗಾಗಿ ಇದೀಗ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರಿಷಸ್ ಪ್ರವಾಸದಲ್ಲಿ ಇದ್ದಾರೆ. ಒಟ್ಟು 3 ದಿನಗಳ ಪ್ರವಾಸದಲ್ಲಿ ಇರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅಲ್ಲದೆ ಈ ವೇಳೆ ದಂಡಿ ಯಾತ್ರೆ ವಾರ್ಷಿಕೋತ್ಸವದ ಅಂಗವಾಗಿ, ಮಾರಿಷಸ್ನ ಮೋಕಾದಲ್ಲಿ ಇರುವ ಮಹಾತ್ಮ ಗಾಂಧಿ ಇನ್ಸ್ಟಿಟ್ಯೂಟ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ವಿಶೇಷ ಗೌರವ ಸಲ್ಲಿಸಿದರು.

ಮೆಟ್ರೋದಲ್ಲಿ ರಾಷ್ಟ್ರಪತಿ ಸಂಚಾರ
ಅಲ್ಲದೆ ಇದೇ ಸಮಯದಲ್ಲಿ ಗಾಂಧೀಜಿ ಅವರ ಆದರ್ಶಗಳನ್ನು ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಮಾರಿಷಸ್ನ ಅಭಿವೃದ್ಧಿ ಯೋಜನೆಗಳನ್ನು ಕೂಡ ಪರಿಶೀಲಿಸಿದ್ದಾರೆ. ಈ ಪೈಕಿ ಮಾರಿಷಸ್ ಮೆಟ್ರೋ ಭಾರತದ ನೆರವಿನ ಪ್ರಮುಖ ಯೋಜನೆ ಆಗಿದ್ದು ವಿದೇಶದಲ್ಲಿ ಭಾರತದ ರಾಷ್ಟ್ರಪತಿ ಮೆಟ್ರೋ ಪ್ರಯಾಣ ಮಾಡಿದ್ದಾರೆ. ಮಾರಿಷಸ್ ದೇಶದ, ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮುರ್ಮು ಭಾಗವಹಿಸಿದ್ದರು. ಆ ಬಳಿಕ ದಂಡಿ ಯಾತ್ರೆ ಆರಂಭದ ಐತಿಹಾಸಿಕ ದಿನದಂದು ಮಾರಿಷಸ್ನ ಮಹಾತ್ಮ ಗಾಂಧಿ ಮೆಟ್ರೋ ನಿಲ್ದಾಣಕ್ಕೆ ಕೂಡ ಆಗಮಿಸಿದರು. ಈ ವೇಳೆ ಅವರು ಕೆಲಕಾಲ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ.
On the historic day of the commencement of the Dandi March by Mahatma Gandhi, President Droupadi Murmu @rashtrapatibhvn took a short metro ride and arrived at the iconic Mahatma Gandhi Metro Station in Mauritius.
— Randhir Jaiswal (@MEAIndia) March 12, 2024
Mauritius Metro, a flagship India-assisted project, has a… pic.twitter.com/I51vlECTCF
ಭಾರತದ ಮೂಲಕ ಮೆಟ್ರೋ ನಿರ್ಮಾಣ
ಮೊದಲೇ ಹೇಳಿದಂತೆ ಮಾರಿಷಸ್ ಮೆಟ್ರೋ ಭಾರತದ ನೆರವಿನ ಪ್ರಮುಖ ಯೋಜನೆಯಾಗಿದ್ದು, ಈ ಯೋಜನೆ ಅಲ್ಲಿನ ಜನರ ಜೀವನಕ್ಕೆ ಸಹಾಯಕವಾಗಿದೆ. 2019 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್ನಲ್ಲಿ ಮೆಟ್ರೋ ಎಕ್ಸ್ಪ್ರೆಸ್ ಸೇವೆ & ಆಸ್ಪತ್ರೆಯನ್ನು ಅಲ್ಲಿನ ಪ್ರಧಾನ ಮಂತ್ರಿ ಪ್ರವಿಂದ್ ಜಗನ್ನಾಥ್ ಅವರ ಜೊತೆಗೆ, ಜಂಟಿಯಾಗಿ ವರ್ಚುವಲ್ ಮೂಲಕ ಉದ್ಘಾಟನೆ ಮಾಡಿದ್ದರು. ಇದೀಗ ಭಾರತದ ರಾಷ್ಟ್ರಪತಿಗಳು, ಮಾರಿಷಸ್ನ ಮೆಟ್ರೋದಲ್ಲೂ ಪ್ರಯಾಣ ಮಾಡಿರುವುದು ಜಗತ್ತಿನ ಗಮನ ಸೆಳೆದಿದೆ.

ಒಟ್ನಲ್ಲಿ ಭಾರತದ ಸಹಾಯ ಪಡೆದು ಇದೀಗ ಮಾರಿಷಸ್ ತನ್ನ ನೆಲದಲ್ಲಿ ಯಶಸ್ವಿಯಾಗಿ, ಮೆಟ್ರೋ ಯೋಜನೆ ಜಾಲ ರೂಪಿಸಿದೆ. ಈ ಮೂಲಕ ಮತ್ತೊಮ್ಮೆ ಭಾರತ ಜಾಗತಿಕವಾಗಿ, ತನ್ನ ಆರ್ಥಿಕ ಶಕ್ತಿಯನ್ನು ತೋರಿಸಿದೆ. ಭಾರತ ತಾನು ಬೆಳೆಯುವ ಜೊತೆಗೆ ಅಕ್ಕಪಕ್ಕದಲ್ಲಿ ಇರುವ ದೇಶಗಳಿಗೂ ನೆರವು ನೀಡುತ್ತಾ ಬೆಳೆಯುತ್ತಿರುವುದು ವಿಶೇಷ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications