ಭಾರತೀಯ ಸಂಜಾತ ನೀಲ್ ಮುಖರ್ಜಿ ಕೈತಪ್ಪಿದ ಬೂಕರ್
ಲಂಡನ್, ಅ. 15 : ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಭಾರತೀಯ ಮೂಲದ ಲೇಖಕ ನೀಲ್ ಮುಖರ್ಜಿ ಕೈ ತಪ್ಪಿದೆ. ನಾಮಕರಣಗೊಂಡಿದ್ದ ಮುಖರ್ಜಿ ಕೃತಿ 'ದಿ ಲೈವ್ಸ್ ಆಫ್ ಅದರ್ಸ್' ಅಂತಿಮ ಸ್ಪರ್ಧೆಯಲ್ಲಿ ತೀರ್ಪುಗಾರರ ಮನ ಗೆಲ್ಲುವಲ್ಲಿ ವಿಫಲವಾಗಿದೆ.
ಬೂಕರ್ ಪ್ರಶಸ್ತಿ ಆಸ್ಟ್ರೇಲಿಯಾದ ಲೇಖಕ ರಿಚರ್ಡ್ ಪಾಲಾಗಿದೆ. ಯುದ್ಧ ಕಾಲದ ಕೆಟ್ಟ ಸನ್ನಿವೇಶಗಳು ಮತ್ತು ಅದರ ನಂತರದ ಘೋರ ಪರಿಣಾಮಗಳ ಕುರಿತು ಬರೆದ ಪುಸ್ತಕಕ್ಕೆ ಬೂಕರ್ ದೊರೆತಿದೆ. ಮಂಗಳವಾರ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು ಭಾರತ ಮೂಲದ ಮುಖರ್ಜಿ ನಿರಾಸೆ ಅನುಭವಿಸಿದ್ದಾರೆ.[ಪ್ರಶಸ್ತಿ ಹಾದಿಯಲ್ಲಿ ಭಾರತ ಮೂಲದ ಲೇಖಕ]

ಎರಡನೇ ಮಹಾಯುದ್ಧದ ನಂತರದ ಸನ್ನಿವೇಶಗಳನ್ನು ರಿಚರ್ಡ್ ತಮ್ಮ ತಂದೆಯ ಅನುಭವದ ಸಹಾಯದಿಂದ ಚಿತ್ರಿಸಿದ್ದರು. 53 ವರ್ಷದ ರಿಚರ್ಡ್ ಪ್ಲಾಗ್ನಂ ವಿರಚಿತ 'ದಿ ನ್ಯಾರೋ ರೋಡ್ ಟು ದಿ ಡೀಪ್ ನಾರ್ತ್' ಪ್ರಶಸ್ತಿ ಗಳಿಸಿಕೊಂಡಿದೆ.
1960ನೇ ಇಸವಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಚಾಲ್ತಿಯಲ್ಲಿದ್ದ ನಕ್ಸಲಿಸಂ ಕತೆ ಆಧಾರಿತ ಕೃತಿ 'ದಿ ಲೈವ್ಸ್ ಆಫ್ ಅದರ್ಸ್' 2014ರ ಬೂಕರ್ಗೆ ನಾಮನಿರ್ದೇಶನಗೊಂಡಿತ್ತು. 2013ರಲ್ಲಿ ದಿವಗಂತ ಯು.ಆರ್.ಅನಂತಮೂರ್ತಿ ನಾಮನಿರ್ದೇಶನಗೊಂಡಿದ್ದರು. ಕಳೆದ ಮೇ ತಿಂಗಳಲ್ಲಿ ಪ್ರಕಟವಾದ ಪುಸ್ತಕ ಬಹಳಷ್ಟು ಜನರಿಗೆ ಇಷ್ಟವಾಗಿತ್ತು. ಅಲ್ಲದೇ ಬೂಕರ್ ತೀರ್ಪುಗಾರರು ಮುಖರ್ಜಿ ಕೃತಿ ಬಗ್ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಪ್ರಶಸ್ತಿ ಕೈ ತಪ್ಪಿದೆ.[ಯು.ಆರ್.ಅನಂತಮೂರ್ತಿ ಕೈ ತಪ್ಪಿದ ಬೂಕರ್ ಪ್ರಶಸ್ತಿ]
ಏನಿದು ಪ್ರಶಸ್ತಿ?
ಮ್ಯಾನ್ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ವಿಶ್ವದ ಯಾವುದೇ ದೇಶದ, ಇಂಗ್ಲೀಷ್ ಭಾಷೆ ತರ್ಜುಮೆಗೆ ಲಭ್ಯವಿರುವ ಯಾವುದೇ ಭಾಷೆಯ ಕೃತಿಗೆ ನೀಡಲಾಗುತ್ತದೆ. 2005ರಿಂದ ಈ ಪ್ರಶಸ್ತಿಯನ್ನು ಪ್ರತಿ 2 ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ಪ್ರಶಸ್ತಿಯೂ 51 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications