ಕೆಲಸದಾಕೆಯನ್ನು ನಾಯಿಗಿಂತ ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ 87 ಲಕ್ಷ ರು ದಂಡ
ಭಾರತೀಯ ಮೂಲದ ಅಮೆರಿಕದ ಮಹಿಳಾ ಸಿಇಒ ತನ್ನ ಮನೆಗೆಲಸದಾಕೆಯನ್ನು ನಾಯಿಗಿಂತ ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ 1,35,000 ಅಮೆರಿಕನ್ ಡಾಲರ್ (ಎಂಬತ್ತೇಳು ಲಕ್ಷ ರುಪಾಯಿ) ಪರಿಹಾರ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ
ನ್ಯೂಯಾರ್ಕ್, ಏಪ್ರಿಲ್ 20: ಭಾರತೀಯ ಮೂಲದ ಅಮೆರಿಕದ ಮಹಿಳಾ ಸಿಇಒಗೆ ಮನೆಗೆಲಸದಾಕೆಗೆ 1,35,000 ಅಮೆರಿಕನ್ ಡಾಲರ್ ಮೊತ್ತ ಪಾವತಿಸುವಂತೆ ಸೂಚಿಸಲಾಗಿದೆ. ಭಾರತದಿಂದ ಮನೆಗೆಲಸಕ್ಕಾಗಿ ಕರೆದೊಯ್ದಿದ್ದ ಮಹಿಳೆಗೆ ಕಡಿಮೆ ಸಂಬಳ ನೀಡಿದ್ದಕ್ಕಾಗಿ ಹಾಗೂ ಆಕೆಯನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ಅಮೆರಿಕದ ಕಾರ್ಮಿಕ ಇಲಾಖೆ ವಿಚಾರಣೆ ನಡೆಸಿ, ಕೋರ್ಟ್ ಈ ರೀತಿ ಸೂಚಿಸಿದೆ.
ರೋಸ್ ಇಂಟರ್ ನ್ಯಾಷನಲ್ ಹಾಗೂ ಐಟಿ ಸ್ಟಾಫಿಂಗ್ ನ ಸಿಇಒ ಹಿಮಾಂಶು ಭಾಟಿಯಾ ಇದೀಗ ತನ್ನ ಮಾಜಿ ಮನೆಗೆಲಸದಾಕೆಗೆ ಆಗಿರುವ ತೊಂದರೆಗೆ ಪರಿಹಾರ ಕಟ್ಟಿ ಕೊಡಬೇಕಿದೆ. ಕ್ಯಾಲಿಫೋರ್ನಿಯಾದ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಪರಿಹಾರ ನೀಡಬೇಕಿದೆ.[ಏರ್ ಟೆಲ್ ಗೆ 50 ಸಾವಿರ ದಂಡ, ಮಂಗಳೂರು ಗ್ರಾಹಕರ ಖುಲ್ ಜಾ ಸಿಮ್ ಸಿಮ್]

ಕಳೆದ ವರ್ಷ ಆಗಸ್ಟ್ ನಲ್ಲಿ ಅಮೆರಿಕದ ಕಾರ್ಮಿಕ ಇಲಾಖೆ ದೂರು ದಾಖಲಿಸಿತ್ತು. ಅದರ ತೀರ್ಪು ಏಪ್ರಿಲ್ 11ರಂದು ಬಂದಿದೆ. 2012 ಜುಲೈನಿಂದ 2014 ಡಿಸೆಂಬರ್ ವರೆಗೆ ಭಾಟಿಯಾ ಉದ್ದೇಶಪೂರ್ವಕವಾಗಿ ಹಾಗೂ ಪದೇಪದೇ ಕಾರ್ಮಿಕ ನಿಯಮಾನುಸಾರ ನೀಡಬೇಕಾದ ಕನಿಷ್ಠ ಕೂಲಿಯನ್ನು ನೀಡಿಲ್ಲ. ಹಾಗೂ ದಾಖಲೆಗಳನ್ನು ಇಟ್ಟಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಸ್ಯಾನ್ ಜುಯಾನ್ ಕ್ಯಾಪಿಸ್ಟ್ರಾನೋ, ಮಿಯಾಮಿ, ಲಾಸ್ ವೇಗಾಸ್ ಮತ್ತು ಲಾಂಗ್ ಬೀಚ್ ನಲ್ಲಿ ಉಳಿದುಕೊಳ್ಳಲು ಅವಕಾಶ, ಊಟ ಹಾಗೂ ನಾನೂರು ಅಮೆರಿಕನ್ ಡಾಲರ್ ಸಂಬಳವನ್ನು ಶೀಲಾ ನಿಂಗ್ ವಾಲ್ ಎಂಬ ಮನೆಗೆಲಸದಾಕೆಗೆ ಭಾಟಿಯಾ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.[ಪ್ರಯಾಣಕ್ಕೆ ಅವಕಾಶ ನೀಡದ ಕೆಎಸ್ ಆರ್ ಟಿಸಿಗೆ 10 ಸಾವಿರ ದಂಡ]
ಭಾಟಿಯಾ ಮನೆಯ ನಾಯಿಗಳು ಇರುವ ಜಾಗದಲ್ಲಿ ಅನಾರೋಗ್ಯಪೀಡಿತಳಾಗಿದ್ದ ಮನೆಗೆಲಸದಾಕೆಯನ್ನು ಮಲಗಲು ಹೇಳುತ್ತಿದ್ದರು. ಜತೆಗೆ ಶೀಲಾ ಪಾಸ್ ಪೋರ್ಟ್ ಅನ್ನು ಸಹ ಕಸಿದುಕೊಳ್ಳಲಾಗಿತ್ತು ಎಂದು ದೂರಲಾಗಿದೆ. ಕೂಲಿ ಹಣವಾಗಿ 54,348 ಡಾಲರ್ ಹಾಗೂ ಇತರ ಹಾನಿಗಾಗಿ 26,304 ಅಮೆರಿಕನ್ ಡಾಲರ್ ನೀಡಲು ಭಾಟಿಯಾ ಒಪ್ಪಿದ್ದಾರೆ.
ಎಲ್ಲ ವೇತನ ನೀಡಲಾಗಿದೆ, ಭಾಟಿಯಾರೊಂದಿಗೆ ಯಾವುದೇ ವ್ಯಾಜ್ಯವಿಲ್ಲ ಎಂದ ದಾಖಲೆಗೆ ಸಹಿ ಮಾಡಿಸಿಕೊಳ್ಳಲು ಯತ್ನಿಸಲಾಗಿದೆ. ಆದರೆ ಅದಕ್ಕೆ ಶೀಲಾ ಒಪ್ಪಿಲ್ಲ. "ಈ ತೀರ್ಪಿನಿಂದ ಕಾರ್ಮಿಕ ಇಲಾಖೆಯ ಬದ್ಧತೆ ಗೊತ್ತಾಗುತ್ತದೆ. ನೌಕರರನ್ನು ಸೋಷಣೆಯಿಂದ ಕಾಪಾಡುವ ಅವರ ಧ್ಯೇಯ ಮೆಚ್ಚುವಂಥದ್ದು" ಎಂದು ಇಲಾಖೆ ಸಾಲಿಸಿಟರ್ ಜಾನೆಟ್ ಹೆರಾಲ್ಡ್ ಹೇಳಿದ್ದಾರೆ.
ಇಂಥ ಪ್ರಕರಣದಲ್ಲಿ ನೌಕರರ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಬಿಡುವುದಿಲ್ಲ. ಅವರ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications