ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಮೇಲೆ ಹಲ್ಲೆ
ಪೀಟ್ಸ್ ಬರ್ಗ್ ನ ಸೌತ್ ಹಿಲ್ಸ್ ವಿಲೇಜೇ ನಲ್ಲಿರುವ ರೆಡ್ ರಾಬಿನ್ ರೆಸ್ಟೋರೆಂಟ್ ನಲ್ಲಿ ಜೆಫ್ರೆ ಅರೆನ್ ಬರ್ಗಿಸ್ ಎಂಬಾತನಿಂದ ಭಾರತೀಯ ಮೂಲದ ಅಂಕುರ್ ಮೆಹ್ತಾ ಎಂಬುವರ ಮೇಲೆ ಹಲ್ಲೆ.
ವಾಷಿಂಗ್ಟನ್, ಮಾರ್ಚ್ 18: ಕನ್ಸಾಸ್ ನಲ್ಲಿ ಇತ್ತೀಚೆಗಷ್ಟೇ ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್ ನನ್ನು ದುಷ್ಕರ್ಮಿಯೊಬ್ಬ ಮುಸ್ಲಿಮನೆಂದು ತಪ್ಪಾಗಿ ಅರ್ಥೈಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಘಟನೆ ಮಾಸುವ ಮುನ್ನವೇ ವಾಷಿಂಗ್ಟನ್ ನಲ್ಲಿ ಮಾರ್ಚ್ 18ರಂದು ಭಾರತೀಯ ಮೂಲದವ ವ್ಯಕ್ತಿ ಮೇಲೆ ಮುಸ್ಲಿಂ ಎಂದು ಭಾವಿಸಿ ದಾಳಿಯಾಗಿರುವ ಬಗ್ಗೆ ವರದಿಯಾಗಿದೆ.
ಈ ಬಾರಿ ದಾಳಿಗೀಡಾಗಿರುವವರು ಅಂಕುರ್ ಮೆಹ್ತಾ. ಇಪ್ಪತ್ತೆರಡು ವರ್ಷ ವಯಸ್ಸಿನ ಮೆಹ್ತಾ, ಪೀಟ್ಸ್ ಬರ್ಗ್ ನ ಸೌತ್ ಹಿಲ್ಸ್ ವಿಲೇಜೇ ನಲ್ಲಿರುವ ರೆಡ್ ರಾಬಿನ್ ರೆಸ್ಟೋರೆಂಟ್ ನಲ್ಲಿ ಕುಳಿತಿದ್ದಾಗ ಜೆಫ್ರೆ ಅರೆನ್ ಬರ್ಗಿಸ್ ಎಂಬಾತ ಮೆಹ್ತಾ ಮೇಲೆ ಹಲ್ಲೆ ಮಾಡಿದ್ದಾನೆ.[2018ನೇ ವರ್ಷದ ಎಚ್- 1ಬಿ ವೀಸಾಕ್ಕಾಗಿ ಏ. 3ರಿಂದ ಅರ್ಜಿ ಆಹ್ವಾನ]

ಮೆಹ್ತಾ ಅವರು ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು ಏಷ್ಯಾ ಮೂಲದ ಜನಾಂಗೀಯ ಮುಖ ಚಹರೆ ಹೊಂದಿರುವುದರಿಂದ ಬರ್ಗಿಸ್, ಮೆಹ್ತಾ ಅವರನ್ನು ಮುಸ್ಲಿಂ ಎಂದು ತಪ್ಪಾಗಿ ಅರ್ಥೈಸಿದ್ದಾನೆಂದು ಹೇಳಲಾಗಿದೆ.[ಫೇಸ್ ಬುಕ್ ನಲ್ಲಿ ಕನ್ಸಾಸ್ ಶೂಟೌಟ್ ದುರ್ದೈವಿ ಶ್ರೀನಿವಾಸ್ ಪತ್ನಿಯ ಬಹಿರಂಗ ಪತ್ರ]
ಸ್ಥಳೀಯ ಸುದ್ದಿ ವಾಹಿನಿಯಾದ ಡಬ್ಲ್ಯೂಟಿಎಈ- ಟಿವಿ ಪ್ರಕಾರ, ರೆಡ್ ರಾಬಿನ್ ರೆಸ್ಟೋರೆಂಟ್ ನಲ್ಲಿ ಬರ್ಗಿಸ್, ಮೆಹ್ತಾ ಕುಳಿತಿದ್ದ ಪಕ್ಕದ ಟೇಬಲ್ ನಲ್ಲೇ ಕುಳಿತಿದ್ದ. ಮೆಹ್ತಾ ಅವರನ್ನು ನೋಡಿದ ಕೂಡಲೇ ಅವರನ್ನು ಮೂದಲಿಸಲು ಶುರು ಮಾಡಿದ್ದಾನೆ.
ಆದರೆ, ತಮ್ಮ ಟ್ಯಾಬ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದ ಮೆಹ್ತಾ, ಆ ಕಡೆ ಗಮನ ಕೊಟ್ಟಿಲ್ಲ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ '' ನಿನ್ನಂಥವರು ನನ್ನ ಪಕ್ಕ ಕುಳಿತುಕೊಳ್ಳುವುದನ್ನು ನಾನು ಸಹಿಸುವುದಿಲ್ಲ. ತೊಲಗು'' ಎನ್ನುತ್ತಾ ಆತ ಮೆಹ್ತಾ ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ಪ್ರತ್ಯಕ್ಷದರ್ಶಿಗಳು ಹಲ್ಲೆ ನಡೆಸುವಾಗ ಬರ್ಗಿಸ್, ಮೆಹ್ತಾರನ್ನು ಮುಸ್ಲಿಂ, ಮುಸ್ಲಿಂ ಎಂದು ಏನೇನೋ ಬಡಬಡಿಸುತ್ತಿದ್ದ ಎಂದು ತಿಳಿಸಿದ್ದಾರೆ.[ಗೆಟ್ ಔಟ್ ಎಂದು ಕಿರುಚಿ ಅಮೆರಿಕದಲ್ಲಿ ಭಾರತೀಯನ ಹತ್ಯೆ]
10 ವರ್ಷ ಜೈಲು: ಈ ಹಲ್ಲೆಯಿಂದಾಗಿ, ಮೆಹ್ತಾಗೆ ಮೊಣಕೈ, ಬೆನ್ನು, ಕಾಲುಗಳಿಗೆ ಗಾಯಗಳಾಗಿವೆ ಎನ್ನಲಾಗಿದೆ. ಅತ್ತ, ಬರ್ಗಿಸ್ ನನ್ನು ಬಂಧಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆತನ ವಿರುದ್ಧ ಜನಾಂಗೀಯ ನಿಂದನೆ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ನ್ಯಾಯಾಲಯವು ಆತನಿಗೆ ಎರಡೂವರೆ ಲಕ್ಷ ಡಾಲರ್ ದಂಡ (ಭಾರತೀಯ ಕರೆನ್ಸಿಯಲ್ಲಿ ಸುಮಾರು 1 ಕೋಟಿ, 63 ಲಕ್ಷ ರು. ) ಹಾಗೂ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications